ಪಂಜು ಕಾವ್ಯಧಾರೆ

"ಮೇಘ ಶಾಮಲೆ" ಹೊಳಪು ಕಣ್ಣು ನೀಳ ಮೂಗು  ಕೆಂದುಟೀಯ ಸುಂದರಿ ನೀಲ ಮೇಘ ಶಾಮಲೆದೆಗೆ ಕನ್ನ ಹೊಡೆದ ಕಿನ್ನರಿ ನುಣುಪು ಕೇಶ ನೀಳ ಹುಬ್ಬು ನಾಗಜಡೆಯ ಸುಂದರಿ ನೆನೆವ ಮನಕೆ ಕಂಪನೀವ ಮುದ್ದು ಮನದ ಕಿನ್ನರಿ ಜಗದ ಸೊಬಗ ಸೆರೆಯೊಳಿಟ್ಟ ಎದೆಯ ಭಾರ ನಿನ್ನದು ಕೊಂಚ ಕೆಳಗೆ ಬಳುಕುತಿರುವ ನಡುವು ತೀರಾ ಸಣ್ಣದು ನಿನ್ನ ಅಂದ ಹೊಗಳಲಿಕ್ಕೆ ಇಷ್ಟು ಮಾತ್ರ ಸಾಲದು ಪೂರ್ಣ ಬರೆದು ಹೇಳಲಿಕ್ಕೆ ನನ್ನಿಂದಂತೂ ಆಗದು -ಉಶಿರು       ಎರಡು ಸಾಮಾನ್ಯರ … Read more

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 3): ಪ್ರಸಾದ್ ಕೆ.

ಇಲ್ಲಿಯವರೆಗೆ 1990 ರ ಡಿಸೆಂಬರ್ ನಲ್ಲಿ ಕೊಲೆಯಾದ ಟ್ಯಾಮಿಯ ಘಟನೆಯಿಂದ ಸ್ವಲ್ಪ ಹಿಂದಕ್ಕೆ ಹೋಗೋಣ. 1989 ಕಳೆದು 1990 ಆಗಲೇ ಬಂದಾಗಿದ್ದರೂ, ಅತ್ತ ಸ್ಕಾರ್-ಬೋರೋ ನಗರದ ವಿಶೇಷ ತನಿಖಾ ದಳದಿಂದ ಸರಣಿ ಅತ್ಯಾಚಾರದ ಬಗ್ಗೆ ಮಹತ್ವದ ಸುಳಿವೇನೂ ಸಿಕ್ಕಿರದಿದ್ದರೂ, ಸ್ಕಾರ್-ಬೋರೋದ ನಿವಾಸಿಗಳು ಯೋಚಿಸುತ್ತಿರುವಂತೆ ತನಿಖಾ ದಳವೇನೂ ನಿದ್ದೆ ಮಾಡುತ್ತಿರಲಿಲ್ಲ. ಏಕೆಂದರೆ ನಡೆದ ಪ್ರಕರಣಗಳನ್ನು ಆಧರಿಸಿ ಈ ಸ್ಯಾಡಿಸ್ಟ್ ರೇಪಿಸ್ಟ್ ನ ಒಂದು ಪ್ರೊಫೈಲ್ ಅನ್ನು ಇಲಾಖೆಯು ಪಕ್ಕದಲ್ಲೇ ಇರುವ ಅಮೇರಿಕಾದ ಎಫ್.ಬಿ.ಐ ಯ ಸಹಯೋಗದಿಂದ ಆಗಲೇ ತಯಾರು … Read more

(ಅ)ನ್ಯಾಯದಾನಕ್ಕೂ ಹದಿನೆಂಟು ವರ್ಷವೇ???: ಅಖಿಲೇಶ್ ಚಿಪ್ಪಳಿ

ಈ ದಿನ ಬೆಳಗ್ಗೆ (26/07/2016) ದಿನಪತ್ರಿಕೆಯ ಮುಖಪುಟದಲ್ಲೊಂದು ಸುದ್ಧಿಯಿತ್ತು. ಬಾಲಿವುಡ್ ನಟ ಸಲ್ಮಾನ್ ಖಾನ್ ನಿರಾಳ. ರಾಜಸ್ಥಾನದಲ್ಲಿ 1998ರಲ್ಲಿ ಕೊಂದ ಕೃಷ್ಣಮೃಗಗಳ ಮೊಕದ್ದಮೆಯಿಂದ ಬಿಡುಗಡೆ. ಪುಟ ತಿರುವಿದಾಗೆ ಇನ್ನೊಂದು ಸುದ್ದಿಯೂ ಇತ್ತು. ಮೂಡಿಗೆರೆಯಲ್ಲಿ ಅರಣ್ಯ ಪ್ರದೇಶವನ್ನು ಒತ್ತುವರಿ  ಮಾಡಿದವರಿಂದಲೇ 430 ಮರಗಳ ಮಾರಣ ಹೋಮ. ಇನ್ನೊಂದು ಪುಟ ಮಗುಚಿದರೆ ಬೀಜಿಂಗ್‍ನಲ್ಲಿ ಕಾರಿನಿಂದಿಳಿದ ಮಹಿಳೆಯನ್ನು ಹೊತ್ತೊಯ್ದ ಸಿಂಹ. ಇವು ಬೇರೆ ಬೇರೆ ಸುದ್ದಿಯೆಂದು ಮೇಲ್ನೋಟಕ್ಕೆ ಅನಿಸಿದರು, ಇವು ಒಂದಕ್ಕೊಂದು ಬೆಸೆದು ಕೊಂಡಿರುವುದನ್ನು ಕಾಣಬಹುದು. ಇರಲಿ ಇದು ಹೇಗೆ ಎಂಬುದನ್ನು … Read more

ಮೌನದೊಳಗೊಂದು ಜೀವಂತ ಪ್ರೀತಿ: ಸಿದ್ದುಯಾದವ್ ಚಿರಿಬಿ

ಅವಳು ಮತ್ತು ನಾನು ಕವಿತೆಗಳಲಿ ಬಳಸುವ ಪದ ಒಂದಿದೆ, ಯಾವ ಕವಿತೆಯೇ ಹಾಗಲಿ ಆ ಪದವಿಲ್ಲದೆ ಆರಂಭವಾಗುವುದಿಲ್ಲ, ಆ ಪದವಿಲ್ಲದೆ ಅಂತ್ಯಯಾಗುವುದಿಲ್ಲ. ನನಗರಿವಿಲ್ಲದೆ ಉದ್ಭವಿಸಿಬಿಡುವ ಆ ಒಂದೆ ಮಾತು ನಮ್ಮಿಬ್ಬರ ಮಧ್ಯೆ ಅದೇನೋ ಸಂಬಂಧಗಳನ್ನು ಸೃಷ್ಟಿಸಿದೆ. ನಮ್ಮಿಬ್ಬರಲ್ಲಿ ಮುಗಿಯಲಾಗದ ಸಂಭಾಷಣೆಯನ್ನು ಸೃಷ್ಟಿಮಾಡುತ್ತದೆ. ಒಲುಮೆ, ಪ್ರೀತಿ, ಮನಸು, ಕನಸು, ಭಾವನೆ, ಬದುಕು, ಉಸಿರು, ಇಂತಹ ಪದಗಳಿಗಿಂದ ಮೋದಲು ಮನಸಿನಲ್ಲಿ ಬಂದು ನಿಲ್ಲುವ ಆ ಒಂದು ಪದ ನಿಶ್ಶಬ್ದವಾದ ಹೃದಯ ಬಡಿತವನ್ನು ಶರವೇಗದಲ್ಲಿ ಭಾವನೆಗಳನ್ನು ಜಾಗೃತವಾಗಿಸಿಬಿಡುತ್ತದೆ. ನಮ್ಮಿಬ್ಬರ ಮಧ್ಯೆ ನೇರ … Read more

ರಾಜ್ಯಮಟ್ಟದ ಪ್ರಪ್ರಥಮ ಹಾಸ್ಯಸಾಹಿತ್ಯ ಸಮ್ಮೇಳನ: ಗುಂಡೇನಟ್ಟಿ ಮಧುಕರ

ಹಾಸ್ಯಸಾಹಿತ್ಯ : ಸಮ್ಮೇಳನಕ್ಕೆ ಪ್ರಥಮ ಪಾದಾರ್ಪಣೆ ನಗೆಮುಗುಳು ಹಾಸ್ಯ ಮಾಸಪತ್ರಿಕೆಯ 15 ನೇ ವಾರ್ಷಿಕೋತ್ಸವ ನಿಮಿತ್ತ ರಾಜ್ಯಮಟ್ಟದ ಪ್ರಪ್ರಥಮ ಹಾಸ್ಯಸಾಹಿತ್ಯ ಸಮ್ಮೇಳನ ಹಾಸ್ಯ ಸಾಹಿತ್ಯ ಕುರಿತು ಉಪನ್ಯಾಸ – ಹಾಸ್ಯ ದಿಗ್ಗಜರ ಮೆಲಕು –  ಹಾಸ್ಯ ಕವಿಗೋಷ್ಠಿ – ಹಾಸ್ಯಭಾಷಣಗಳು –ನಗೆನಾಟಕಗಳು      ತುಮಕೂರ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸೇರಿದ ಎಲ್ಲರ ಮುಖದಲ್ಲಿ ನಗು, ಸಂತೋಷಗಳು ಎದ್ದು ಕಾಣುತ್ತಿದ್ದವು. ಎಲ್ಲ ಹಾಸ್ಯಪ್ರಿಯರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಸ್ಯಾಸಕ್ತರು ಆಗಮಿಸಿದ್ದರು. ಒಬ್ಬರು ಒಂದು ಹಾಸ್ಯಚಟಾಕಿ … Read more

ಬೆಳ್ಳಿತೆರೆಯಲ್ಲಿ `ಮೇಲುಕೋಟೆ’ಯ ದೃಶ್ಯಕಾವ್ಯ!: ದಂಡಿನಶಿವರ ಮಂಜುನಾಥ್

ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾಗ ಖಂಡಿತಾ ನೀವು ಅದರಲ್ಲಿ ಕಲ್ಯಾಣಿಯೊಂದರ ಹಿನ್ನೆಲೆ ಹೊಂದಿರುವ ಬೆಟ್ಟದ ತುದಿಯಲ್ಲಿ ದೇವಾಲಯದ ಗೋಪುರದ ದೃಶ್ಯವನ್ನು ಆಗಾಗ ನೋಡುತ್ತಿರುತ್ತೀರಿ.  ಹೆಚ್ಚಾಗಿ ಕಾಡುಗಳ ದೃಶ್ಯಗಳಲ್ಲಿ ಈ ಸ್ಥಳದ ಪರಿಚಯ ನಿಮಗಾಗಿರುತ್ತದೆ. ಇದು ನಮ್ಮ ನಾಡಿನ ಸ್ಥಳವೇ ಆಗಿದೆ ಎಂದು ತಿಳಿದಾಗ ನಿಜಕ್ಕೂ ನಿಮಗೆ ಆಶ್ಚರ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಅದುವೇ ಮೇಲುಕೋಟೆಯ ಮೋಹಕ ದೃಶ್ಯಕಾವ್ಯ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಈ ಸ್ಥಳ ಹಲವು ಭಾಷೆಗಳ ಚಿತ್ರರಂಗದವರನ್ನು ತನ್ನತ್ತ ಆಕರ್ಷಿಸುವುದರಲ್ಲಿ ಯಶಸ್ವಿಯಾಗಿದೆ. ಉತ್ತಮ ಶೂಟಿಂಗ್ ಸ್ಪಾಟ್ … Read more

ಪ್ರೀತಿ ಮಾಡೋ ಮುಂಚೆ: ಮಲ್ಲಿಕಾರ್ಜುನ ದಾಸನಕೊಪ್ಪ

ಕಾಲೇಜು ಆರಂಭವಾಗಿ ಆರು ತಿಂಗಳುಗಳೇ ಕಳೆದಿವೆ. ಹೇಳದೆ ಪ್ರೀತಿಸುವ  ಹುಡುಗ ಹುಡುಗಿಯರಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಒಂದು ವೇದಿಕೆ ಸಿದ್ಧವಾಗಿದೆ. ಹುಡುಗ ಹುಡುಗಿಯರೆಲ್ಲಾ ಸೂಕ್ತ ಪ್ರಿಯತಮ/ಮೆಯ ಹುಡುಕಾಟದಲ್ಲಿದ್ದಾರೆ. ಆ ಪ್ರಯತ್ನದಲ್ಲಿ ಕೆಲವರು  ಯಶಸ್ವಿಯು ಆಗಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯನ್ನು ಹೇಗೆ ಅವಳಿ/ನಿಗೆ ಅರಿಕೆ ಮಾಡಿಕೊಳ್ಳಬೇಕೆಂಬ  ತೋಳಲಾಟದಲ್ಲಿದ್ದಾರೆ. ಈ ಸಂದರ್ಭದಲ್ಲಿಯೇ “ವ್ಯಾಲೇಂಟೆನ್ಶ ಡೇ” ಸಮೀಪಸಿದೆ. ಹುಡುಗ ಹುಡುಗಿಯರ ಎದೆಯಲ್ಲಿ ಲಬ್-ಡಬ್ ಶುರುವಾಗಿದೆ.  ನಾನು ಪ್ರೀತಿಸಿದ ಹುಡುಗ/ಗಿ ನನ್ನಲ್ಲಿ ಬಂದು ಗುಲಾಬಿ ಹಿಡಿದು ಪ್ರೀತಿ ಯಾಚಿಸುತ್ತಾನಾ/ಳಾ??  ನನ್ನ … Read more

ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ

ತ್ರಿವರ್ಣ ಗಣಪ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜದ ಬಣ್ಣದಿಂದ ಕಂಗೊಳಿಸುತ್ತಿರುವ ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ ಮೈಸೂರಿನಲ್ಲಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ನಂತರ ಸಾಲುಸಾಲು ಹಬ್ಬಗಳು ಆರಂಭವಾಗುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಗೌರಿ – ಗಣೇಶ ಹಬ್ಬವೂ ಬರಲಿದೆ. ಸ್ವಾತಂತ್ರ್ಯವೆನ್ನುವುದು ನಮ್ಮ ಸುತ್ತಲಿನ ಪರಿಸರ ರಕ್ಷಣೆಯ ಹೊಣೆಗಾರಿಕೆಯೊಂದಿಗೆ ಬರುತ್ತದೆ ಎನ್ನುತ್ತಾರೆ ಕಲಾವಿದ ಹುಸೇನಿ. ‘ಮುಂಬರಲಿರುವ ಗೌರಿ – ಗಣೇಶ ಹಬ್ಬದಲ್ಲಿ ರಾಸಾಯನಿಕ ಹಾಗೂ ಹಾನಿಕಾರಕ ಪದಾರ್ಥಗಳಿಂದ ಮುಕ್ತವಾದ ಗಣೇಶ ನಮ್ಮ ಮನೆಗಳನ್ನು ಪ್ರವೇಶಿಸಲಿ’ … Read more