ವಿಶ್ವಾಮಿತ್ರ!!: ಎಸ್.ಜಿ.ಶಿವಶಂಕರ್

ಅರಳೀಕಟ್ಟೆಯಲ್ಲಿ ಕೂತಿದ್ದ ಶತಾಯುಶಿ ಹನುಮಜ್ಜ ತನ್ನಷ್ಟೇ ವಯಸ್ಸಾದಂತೆ ಕಾಣುತ್ತಿದ್ದ ಕನ್ನಡಕವನ್ನು ಸರಿಪಡಿಸಿಕೊಂಡು ತನ್ನ ಮುಂದೆ ಧೂಳೆಬ್ಬಿಸುತ್ತಾ ಹೋದ ಕಾರು ನೋಡಿದ. ಇದು ಎಷ್ಟನೆಯ ಕಾರು ಎಂದು ಅಚ್ಚರಿಪಟ್ಟ. ಸುಮಾರು ಅರ್ಧ ಗಂಟೆಯಿಂದ ಏನಿಲ್ಲವೆಂದರೂ ಇಪ್ಪತ್ತಕ್ಕೂ ಹೆಚ್ಚು ಕಾರುಗಳು ಅವನು ಕೂತಿದ್ದ ಆರಳೀಕಟ್ಟೆಗೆ ಧೂಳಿನ ಅಭಿಷೇಕ ಮಾಡಿದ್ದವು.  "ಇವತ್ತೇನು ನಡೀತೈತೆ ಆ ಫಾರಮ್ಮಿನಾಗೆ..?" ಹನುಮಜ್ಜ ಗೊಗ್ಗರು ದನಿಯಲ್ಲಿ ತನಗೆ ತಾನೇ ಎಂಬಂತೆ ಹೇಳಿಕೊಂಡ. "ಏನು ನಡದ್ರೆ ನಮಗೇನು..? ನಾವು ಹೊಲಗೈಯಾದು ತಪ್ಪತೈತ..?" ಹನುಮಜ್ಜನಿಗಿಂತ ಹತ್ತು ವರ್ಷ ಕಿರಿಯ ಭರಮಜ್ಜ … Read more

ಪಂಜು ಕಾವ್ಯಧಾರೆ

ನಕ್ಷತ್ರಗಳೆಂದರಿಷ್ಟ  ಹೊಸ್ತಿಲು ದಾಟಿ ಬಂದಂತೆ ಕಂಡದ್ದು ಅರ್ಧಚಂದ್ರ ಚೆಲ್ಲಿದ ಮುದ್ದು ಬೆಳದಿಂಗಳು. ಹೊನಲಿನಲ್ಲಿ ಗೋಚರವಾಗಿ  ಹಗಲಲ್ಲಿ ಕಣ್ಮರೆಯಾಗುವ ದಿಗಂತದ ಪರದೆಯಲ್ಲಿ ಬೆಚ್ಚಿ ಬೀಳಿಸುವ  ಶಶಿಯ ಇಂದ್ರಜಾಲ. ನಭೋಮಂಡಲವೇ ರಾತ್ರೋರಾತ್ರಿ ಬೆತ್ತಲಾದಾಗ ನಕ್ಷತ್ರಗಳು ಜಿನುಗುತ್ತವೆ. ಬರಿಗಣ್ಣಿಗೆ ನಂಬಲಾರದಷ್ಟು ಹೆಸರಿಲ್ಲದ ತಾರಾ ಪುಂಜಗಳು ಮೋಡಿಗಾರನ ಕೈಯ ಅಂಕುಶದ ಮಾಯಾಜಾಲದೊಳಗೆ. ಯಾರೋ ದೇವಕನ್ನೆ ರಾತ್ರಿ ಆಕಾಶದಲ್ಲಿ ಜೋಡಿಸದೇ ಹಾಗೇ ಬಿಟ್ಟ ರಂಗೋಲಿ ಚುಕ್ಕಿಯಂತೆ ನೀವು. ನಗರದಾಚೆ ಗಲ್ಲಿಯಲ್ಲಿ ಮಲಗದೇ ಹಠ ಹಿಡಿದು ಅಳುತ್ತಿರುವ ಕಂದಮ್ಮನ ಕಣ್ಣಿಗೆ ನೀವೆಲ್ಲಾ ಹೊಳೆಯುವ ಆಟಿಕೆಗಳು. ಕಂಡಾಗಲೆಲ್ಲಾ … Read more

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 2): ಪ್ರಸಾದ್ ಕೆ.

ಇಲ್ಲಿಯವರೆಗೆ ಇತ್ತ ಕತ್ತಲಿನಲ್ಲಿ ಸುಳಿವಿಗಾಗಿ ತಡಕಾಡುತ್ತಿದ್ದ ಮೊಟ್ರೋಪಾಲಿಟನ್ ಟೊರಾಂಟೋ ಪೋಲೀಸರಿಗೆ ಮಹತ್ವದ್ದೇನೂ ಸಿಕ್ಕಿರಲಿಲ್ಲ. ಬದಲಿಗೆ 1987 ರ ಡಿಸೆಂಬರಿನಲ್ಲಿ ಹದಿನೈದರ ಪ್ರಾಯದ ಇನ್ನೊಬ್ಬ ಬಾಲಕಿ ಆಗಂತುಕನೊಬ್ಬನಿಂದ ಎಂದಿನ ರೀತಿಯಲ್ಲೇ ಅತ್ಯಾಚಾರಕ್ಕೊಳಗಾಗಿದ್ದಳು. ಸ್ಕಾರ್-ಬೋರೋ ನಗರದ ನಿವಾಸಿಗಳು ಸ್ವಾಭಾವಿಕವಾಗಿಯೇ ಕಂಗಾಲಾಗಿದ್ದರು. ಪೋಲೀಸರೂ ಕೈಚೆಲ್ಲಿ ಕುಳಿತಿರುವಾಗ ಯಾರ ಬಳಿ ಸಹಾಯಕ್ಕೆ ಧಾವಿಸುವುದೆಂಬುದೇ ಅವರಿಗೆ ತಿಳಿಯಲಿಲ್ಲ. ಪರಿಸ್ಥಿತಿ ಈಗಾಗಲೇ ಕೈಮೀರಿ ಹೋಗಿದ್ದು ಸ್ಪಷ್ಟವಾಗಿತ್ತು. ಕತ್ತಲಾದ ಬಳಿಕ ಹೆಣ್ಣುಮಕ್ಕಳು ಒಂಟಿಯಾಗಿ ಅಲೆದಾಡುವುದನ್ನು, ಓಡಾಡುವುದನ್ನು ಆದಷ್ಟು ಕಮ್ಮಿ ಮಾಡಬೇಕೆಂದೂ, ಪ್ರಕರಣದ ಬಗ್ಗೆ ಯಾವ ಸುಳಿವು ಸಿಕ್ಕರೂ … Read more

ಬಿಸಿಲನಾಡಿನಲ್ಲೊಂದು ಕಾವ್ಯಮನೆಯ ಉದ್ಘಾಟನೆ: ಕೆ.ಎಂ.ವಿಶ್ವನಾಥ ಮರತೂರ.

ಕರ್ನಾಟಕ ರಾಜ್ಯ ಹಲವು ವಿಶೇಷಗಳನ್ನು ಹುಟ್ಟುಹಾಕಿದೆ. ಇಡಿ ದೇಶ ಹಾಗೂ ಪ್ರಪಂಚದಲ್ಲಿ ಹಲವು ಪ್ರಥಮಗಳನ್ನು ಸೃಷ್ಠಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಸಾಹಿತ್ಯ ಲೋಕದಲ್ಲಿ ಎಂಟು ಜ್ಞಾನಪೀಠ ಪಡೆದು, ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಮಾಡಿರುವ ಸಾಧನೆ ನಮ್ಮದು. ಇದೆಲ್ಲವೂ ಕನ್ನಡದ ಹೆಸರಾಂತ ಕವಿಗಳ ಸಾಹಿತ್ಯ ಮತ್ತು ಹೋರಾಟದಿಂದ ಸಾಧ್ಯವಾಗಿದೆ. ಕನ್ನಡ ಇಂದು ಬಹು ಶ್ರೀಮಂತವಾಗಿ ಬೆಳೆಯಲು ಹಲವರ ಕೊಡುಗೆ ಅಪಾರವಾಗಿದೆ.      ಪ್ರಸ್ತುತ ದಿನಗಳಲ್ಲಿ ಕಾವ್ಯ, ಕಥೆ, ಕಾದಂಬರಿ ಅರ್ಥ ಕಳೆದುಕೊಂಡು “ಕವಿತೆ ಯಾರು ಕೊಳ್ಳತ್ತಾರೆ” ಎಂಬ … Read more

ಮಲಯಾಳ ಸಿನೆಮಾ ರಂಗವೂ ಮಲಬಾರಿನ ಸಂಸ್ಕೃತಿಯೂ: ಕೃಷ್ಣವೇಣಿ ಕಿದೂರ್

            ಬಹಳಷ್ಟು  ಜನರಿಗೆ  ಮಲಯಾಳ   ಚಿತ್ರಗಳೆಂದರೆ  ಅದು ನೀಲಿ ಚಿತ್ರಗಳಿಗೆ  ಹತ್ತಿರದ್ದು ಎಂಬ  ತಪ್ಪು ಕಲ್ಪನೆಯಿದೆ.    ಜಾಹೀರಾತುಗಳು ತೋರಿಸುವ   ಚಿತ್ರಗಳು   ಹಾಗಿರುತ್ತದೆ ಎನ್ನಬಹುದು.   ಆದರೆ ಒಬ್ಬ ಕೇರಳೀಯಳಾಗಿ  ಮಲಯಾಳಂ  ಚಲನಚಿತ್ರಗಳೆಂದರೆ  ಅಲ್ಲಿ ಮಲಬಾರಿನ ( ಕೇರಳ) ಸಾಂಸ್ಕೃತಿಕ  ಹಿನ್ನಲೆಗೆ  ಹೆಚ್ಚಿನ ಒತ್ತು  ಸಿಗುತ್ತದೆ  ಎಂದು  ಕಂಡ  ಕಾರಣ ಆ ಮಿಥ್ಯೆಯನ್ನು  ಅಲ್ಲಗಳೆಯಬೇಕಾಗಿದೆ. ಅರಬ್ಬಿ ಸಮುದ್ರದ  ಪಕ್ಕದ ಪುಟ್ಟ ರಾಜ್ಯ  ಕೇರಳ.  ಇದಕ್ಕೆ ಕೇರ … Read more

ಕಾಡು(ವ) ಕಟ್ಟುವ ಕತೆ!! ಭಾಗ-8: ಅಖಿಲೇಶ್ ಚಿಪ್ಪಳಿ

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಮಾತೊಂದು ಪ್ರಚಲಿತದಲ್ಲಿದೆ. ವರ್ಷದ ಎಲ್ಲಾ ಋತುಮಾನಗಳು ನಿಸರ್ಗದತ್ತವಾಗಿ ಸಸೂತ್ರವಾಗಿ ನಡೆದರೆ ಭೂಮಿಯ ಮೇಲೆ ವಾಸಿಸುವ ಜೀವಿಗಳು ಸುರಕ್ಷಿತವಾಗಿ ಇರಬಲ್ಲವು. ಭೂತಾಯಿಯ ಬುದ್ಧಿವಂತ ಮಕ್ಕಳಾದ ನಾವು ಮಾಡಿದ್ದೇ ಸರಿ ಎಂಬ ಅಹಂಕಾರವನ್ನು ಹೊಂದಿದ್ದೇವೆ. ಇಡೀ ಭೂಮಿ ಇರುವುದೇ ನಮ್ಮ ಲಾಭಕ್ಕಾಗಿ, ನಮ್ಮ ಸುಖಕ್ಕಾಗಿ ಎಂದು ಭಾವಿಸಿಕೊಂಡಿದ್ದೇವೆ. ಪ್ರಕೃತಿಯ ನೈಸರ್ಗಿಕ ಪ್ರಯೋಗಾಲವನ್ನು ಛಿಧ್ರ ಮಾಡಿ, ಇಡೀ ನಿಸರ್ಗವನ್ನು ನಮ್ಮ ಸುಖದ ಹುಡುಕುವಿಕೆಯ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ್ದೇವೆ. ಹವಾಗುಣ ಬದಲಾವಣೆಯಿಂದಾಗಿ ಇಡೀ ಪ್ರಪಂಚದ ಎಲ್ಲಾ ಪ್ರದೇಶಗಳು … Read more

ಶಿಲ್ಪ ಕಲೆಯ ತವರು: ಕೈದಾಳ: ದಂಡಿನಶಿವರ ಮಂಜುನಾಥ್

ಮುಂಬೈನಿಂದ ಬಂದಿದ್ದ ಗೆಳೆಯ ಸಿನಿಮಾ ಛಾಯಾಗ್ರಾಹಕ ಶಿವಕುಮಾರ್ ಮತ್ತು ನಾನು ತುಮಕೂರಿನಿಂದ ಬೆಳ್ಳಂಬೆಳಿಗ್ಗೆ ಚಹಾ ಕುಡಿದು ಶಿಲ್ಪಕಲೆಯ ತವರೂರಾದ ಕೈದಾಳದತ್ತ ಪ್ರಯಾಣ ಬೆಳೆಸಿದವು. ಸೂರ್ಯ ಆಗ ತಾನೇ ಉದಯಿಸಿದ್ದರೂ ಸಹ ಚುಮುಚುಮು ಚಳಿಯ ವಾತಾವರಣ ನಮ್ಮ ಮನಸ್ಸಿಗೆ ಮುದ ನೀಡುತ್ತಿತ್ತು. ಕನ್ನಡನಾಡಿನ ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ದೇವಾಲಯಗಳನ್ನು ಕೆತ್ತಿದ ಅಮರಶಿಲ್ಪಿ ಎಂದು ಹೆಸರಾದ ಜಕಣಾಚಾರಿಯ ಜನ್ಮಸ್ಥಳವನ್ನು ನೋಡುವ ಕುತೂಹಲ ನಮ್ಮಲ್ಲಿತ್ತು. ತುಮಕೂರು ನಗರದಿಂದ ಕುಣಿಗಲ್ ಮಾರ್ಗದಲ್ಲಿ ಕೇವಲ ನಾಲ್ಕು ಕಿಲೋಮೀಟರ್ ಸಾಗಿದ ನಮ್ಮ ಕಾರು ಕೆಲವೇ ನಿಮಿಷಗಳಲ್ಲಿ ಗೂಳೂರು … Read more

ಅಯ್ಯೋ! ಸಾಲಾ?: ಗುಂಡುರಾವ್ ದೇಸಾಯಿ

    ಪದ್ದು ಮುಂಜಾನೆ ಮಂಜಾನೆ ಹಾಸಿಗೆಲಿ ಇದ್ದಾಗಲೆ ಮನ್ಯಾಗ ಒಕ್ಕರಿಸಿಕೊಂಡ, ‘ಏನಾತೋ ಪದ್ದು ಹಿಂಗ್ಯಾಕ ಗಾಬರಿ ಆಗಿದಿ’ ಅಂದೆ. ‘ಇಲ್ಲ ದೊಸ್ತ್ಯಾ ಸಾಲಗಾರರ ಕಾಟ ಬಾಳ ಆಗ್ಯಾದ. ಮಾರ್ಯದೆಯಿಂದ ಬದುಕೊ ಮನುಷ್ಯ. ಸಾಲ ಸಕಾಲಕ್ಕ ತೀರಿಸುವುದಾಗವಲ್ತು ಮೂರು ತಿಂಗಳ ಟೈಮು ಸಿಕ್ರ ಎಲ್ಲಾನೂ ಅಡ್ಜೆಸ್ಟ ಮಾಡಬಹುದು. ಇವರು ಸಿಕ್ಕ-ಸಿಕ್ಕಲ್ಲಿ ವಾಮಾಗೋಚರವಾಗಿ ಬಯ್ಯತಾರ ಏನು ಮಾಡಲಿ’ ಎಂದು ತನ್ನ ಅಳಲು ತೋಡಿಕೊಂಡ.  ‘ಅದಕ್ಯಾಕ ಚಿಂತಿ ಮಾಡತಿ ಒಂದು ವ್ರತ ಅದ ಮಾಡ್ತಿ ಏನು?’  ‘ವ್ರತಾನ! ವ್ರತದಿಂದ ಸಾಲ … Read more

ವಸುಮತಿ ರಾಮಚಂದ್ರ ‘ಮಕ್ಕಳ ಮನೋಭೂಮಿ’ ಕೃತಿ ಪರಿಚಯ: ಗುಂಡೇನಟ್ಟಿ ಮಧುಕರ

ಮಕ್ಕಳ ಮನಸ್ಸನ್ನು ಅರಳಿಸುವ ಕೃತಿ ಕೃತಿಪರಿಚಯ: ಗುಂಡೇನಟ್ಟಿ ಮಧುಕರ  ಮೊ: 8904632798 ಈಗ ಮಕ್ಕಳ ಸಾಹಿತ್ಯ ರಚಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು. ಪ್ರೌಢ ಸಾಹಿತ್ಯ ರಚಿಸುವುದಕ್ಕಿಂತ ಮಕ್ಕಳ ಸಾಹಿತ್ಯ ರಚನೆ ತುಂಬ ಕಷ್ಟದ ಕೆಲಸ. ನಾವು ಮಕ್ಕಳ ಮನಸ್ಸನ್ನರಿತು ನಾವೂ ಮಕ್ಕಳಾಗಿಯೇ ರಚಿಸಿದಾಗ ಮಾತ್ರ ಒಳ್ಳೆಯ ಮಕ್ಕಳ ಸಾಹಿತ್ಯ  ಹೊರಬರಲು ಸಾಧ್ಯ. ಇದಕ್ಕಾಗಿ ಮಕ್ಕಳ ಮನಸ್ಸನ್ನು ಅಭ್ಯಾಸ ಮಾಡಬೇಕಾದುದು ಅತ್ಯವಶ್ಯವಾಗಿದೆ. ಅದಕ್ಕಾಗಿ ನಾವು ಮಕ್ಕಳೊಂದಿಗೆ ಹೆಚ್ಚಿನ ಒಡನಾಟ ಹೊಂದಿದವರಿಂದ ಮಾತ್ರ ಉತ್ಕøಷ್ಟ ಮಕ್ಕಳ ಕೃತಿಗಳನ್ನು ರಚಿಸಲು ಸಾಧ್ಯ. ಹಿಂದಿನ … Read more

ನೆಗಡಿಯಾದಾಗ ಮೂಗನ್ನೇ ಕೊಯ್ದರೆ,,,!: ಆರ್.ಬಿ.ಗುರುಬಸವರಾಜ. ಹೊಳಗುಂದಿ

ಮೂಗು ಇದ್ದವರಿಗೆಲ್ಲಾ ನೆಗಡಿ ಬರುವುದು ಸರ್ವೇ ಸಾಮಾನ್ಯ. ಪದೇ ಪದೇ ನೆಗಡಿ ಬರುತ್ತದೆ ಅಂತ ಮೂಗನ್ನೇ ಕೊಯ್ದು ಹಾಕುತ್ತೇವೆಯೇ? ಇಲ್ಲವಲ್ಲ. ಆದರೆ ಈಗ ಕರ್ನಾಟಕ ರಾಜ್ಯದಲ್ಲಿ ಇಂತಹದ್ದೊಂದು ಮೂಗನ್ನು ಕೊಯ್ಯಲು ಮುಂದಾದ ಪ್ರಕ್ರಿಯೆ ಶುರುವಾಗಿದೆ. ಅದೇನೆಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಅದೇ ಲೋಕಾಯುಕ್ತ ಸಂಸ್ಥೆಯನ್ನು ಕೋಲೇ ಬಸವನಂತೆ ಮಾಡ ಹೊರಟಿರುವುದು.      ಭ್ರಷ್ಟಾಚಾರ ನಿಗ್ರಹಕ್ಕಾಗಿ ಭಾರತದ ರಾಜ್ಯಗಳಲ್ಲಿ ನಿಯೋಜಿತಗೊಂಡಿರುವ ‘ಲೋಕಾಯುಕ್ತ’ ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸಿ ಅದಕ್ಕೆ ಪರ್ಯಾಯವಾಗಿ ಇನ್ನೊಂದು ಭ್ರಷ್ಟಾಚಾರ ನಿಗ್ರಹ ದಳ(ಎ.ಸಿ.ಬಿ.) ಎನ್ನುವ ಸಂಸ್ಥೆಯನ್ನು … Read more