ಹಲ್ಲು ಕೆಟ್ಟ ಕಥೆ!: ಗುರುಪ್ರಸಾದ್ ಕುರ್ತಕೋಟಿ

ಎಲ್ಲ ತೊಂದರೆಗಳು ಶುರುವಾಗುವುದು ರಾತ್ರಿನೇ! ಅಥವಾ ಹಾಗೆ ರಾತ್ರಿ ಶುರುವಾದ ತೊಂದರೆಗಳು ಮಾತ್ರ ನೆನಪಿನಲ್ಲಿ ಉಳಿಯುವುದಕ್ಕೆ ಹಾಗೆ ಅನ್ನಿಸುತ್ತದೆಯೋ? ಎಂದು ಪುಟ್ಯಾ ತಲೆಕೆರೆಯುತ್ತ ಯೋಚಿಸುತ್ತಿದ್ದ. ಅವನ ಮಕ್ಕಳ ಜ್ವರವೇ ಇರಲಿ, ತನ್ನ ಹೊಟ್ಟೆ ನೋವಿರಲಿ ಅಥವಾ ತಲೀನ ಇಲ್ಲ ನೋಡ್ ಲೇ ನಿನಗ ಅಂತ ಬೈಸಿಕೊಳ್ಳುವ ಅವನ ಹೆಂಡತಿ ಪಾರಿಯ ತಲೆ ನೋವಿರಲಿ… ಇವೆಲ್ಲ ಉದ್ಭವಿಸುವುದು ರಾತ್ರಿಯೇ. ಇನ್ನೇನು ಮಲಕೊಬೇಕು ಅನ್ನುತ್ತಿರುವಾಗಲೇ ಇಂಥದ್ದೇನೋ ಬಂದು ನಿದ್ದೆ ಕೆಡಿಸಿ ಕಂಗಾಲು ಮಾಡುತ್ತದೆ.  ಇಂತಹದೇ ಒಂದು ಕರಾಳ ರಾತ್ರಿ ಇವನ … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 6

ಪತ್ರಕರ್ತೆಯೊಂದಿಗೆ ಫ್ಲಾಪಿಬಾಯ್ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಒಂದು ಹಳ್ಳಿಯಲ್ಲಿ ಜನೋಪಕಾರಿಯಾಗಿ ಅತ್ಯುತ್ತಮ ಸಲಹೆ ನೀಡುತ್ತಾ, ಬಡ ಜನರ ಸೇವೆ ಮಾಡುತ್ತಿದ್ದರೂ- ತಮ್ಮಷ್ಟಕ್ಕೆ ತಾವು ಆಶ್ರಮ ಕಟ್ಟಿಕೊಂಡು ಒಂದೆಡೆ ಇದ್ದರು. ಇಂತಹ ಅಪರೂಪದ ಜನ ನಮ್ಮ ಸಮಾಜದಲ್ಲಿ ಪ್ರಚಾರಕ್ಕೆ ಬರುವುದು ಅಪರೂಪ. ಅದೇನು ವಿಧಿ ಲಿಖಿತವೋ, ಇವರ ಒಳ್ಳೆಯತನ ಗುರುತಿಸುವ ಶಕ್ತಿ ಸತ್ತ ಪ್ರಜೆಗಳಿಗೆ ಜಾಗೃತೆಯಾಗಿ ಸತ್ಪ್ರಜೆಯಾದರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಗೆ ವ್ಯಾಪಕ ಪ್ರಚಾರವಂತೂ ಜನರ ಬಾಯಿಮಾತಿನಿಂದಲೇ ಹೆಚ್ಚೆಚ್ಚು ದೊರಕಿತ್ತು. ಆಗ ತಾನೆ ಕೆಲಸಕ್ಕೆ ಸೇರಿದ್ದ ಟಿವಿ ರಿಪೋರ್ಟರ್ … Read more

ಶಾಲಿನಿ: ಶ್ರೀ, ಧಾರವಾಡ.

  ಸಂಜೆಗೆಂಪಿನ ಸೂರ್ಯ ಪೂರ್ವದಿಂದ ಪಶಚಿಮಕ್ಕೆ ಬಾಡಿಗೆಗೆ ಬಿಟ್ಟ ತನ್ನ ಕಿರಣಗಳನ್ನೆಲ್ಲ ಲೆಕ್ಕಹಾಕಿ ಹಿಂಪಡೆಯುತ್ತ ಮನೆಯ ಹಾದಿ ಹಿಡಿದಿದ್ದ. ಹುಬ್ಬಳ್ಳಿಯ ದುರ್ಗದಬೈಲಿನ ತುಂಬ ಬದಲಾಯಿಸಿದ ಚಹಾ ಪುಡಿಯ ಚಹಾ ಕುದಿಯುತ್ತ ತನ್ನ ಕಂಪನ್ನೆಲ್ಲ ಹರಡಿ ಸೂರ್ಯನಿಗೆ ಬೀಳ್ಕೊಟ್ಟು ಅಲ್ಲಿದ್ದವರನ್ನೆಲ್ಲ ತನ್ನ ಕಡೆಗೇ ಸೆಳೆಯುತ್ತಿತ್ತು. ಸಂಜೆಯಾಗುತ್ತಲೇ ಇಲ್ಲಿ ಹುಟ್ಟುವ ತಾತ್ಕಾಲಿಕ ಸಾಮ್ರಾಜ್ಯದಲ್ಲಿ ತರಾವರಿ ತಿನಿಸಿನಂಗಡಿಗಳು, ಮುಂಬೈಯಿಂದ ತರಿಸಿದ ಸೋವಿ ಬೂಟು, ಚಪ್ಪಲ್ಲು, ಜರ್ಕಿನ್ನುಗಳು, ದಾರಿಯ ಬದಿಗೆ ಬಿಕರಿಯಾಗುವ ಬ್ರ್ಯಾಂಡೆಡ್ ವಾಚುಗಳ ವಹಿವಾಟು ತನ್ನದೇ ತನ್ಮಯತೆಯಲ್ಲಿ ಸಾಗುತ್ತದೆ. ಈ ಪೇಟೆಯ … Read more

ನಾಡ ಭಾಷೆ, ಇತಿಹಾಸವೂ ನಮ್ಮ ಅಭಿಮಾನಶೂನ್ಯತೆಯು: ಪ್ರಶಸ್ತಿ

ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು.ಅಪಾರ ಕೀರ್ತಿಯೇ.. ಮಯೂರ ಚಿತ್ರದ ಈ ಹಾಡು, ಅದಕೆ ಹಿಮ್ಮೇಳವೆಂಬಂತೆ ನಾಗೋ ಕುದುರೆಯ ಪುಟಿತದ ಟಕ್, ಟಕ್, ಟಕ್ ಎಂಬ ಸದ್ದೂ ನಿಮ್ಮೆಲ್ಲರ ಮನಸ್ಸಲ್ಲೊಂದು ಭದ್ರ ಸ್ಥಾನ ಪಡೆದಿರಬಹುದು. ಚಾಲುಕ್ಯ, ಹೊಯ್ಸಳ, ವಿಜಯನಗರ, ಕೆಳದಿ ಸಾಮ್ರಾಜ್ಯ ಹೀಗೆ ಇಲ್ಲಿನ ನೆಲವಾಳಿದ ರಾಜರೆಲ್ಲಾ ಕಲೆ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಕೊಟ್ಟ ಪ್ರೋತ್ಸಾಹದ ಪರಿಯನ್ನು ನಮ್ಮ ಸುತ್ತೆಲ್ಲಾ ಈಗಲೂ ಕಾಣಬಹುದು, ಹೆಮ್ಮೆಪಡಬಹುದು. ಭಾಷೆ, ಜಾತಿ, ಧರ್ಮವೆಂಬ ಯಾದ … Read more

ಶಿವಯ್ಯ ಎಂಬ ಒಗಟು: ಎಚ್.ಕೆ.ಶರತ್

ಅವನೆಂದರೆ ನಮ್ಮೊಳಗಿದ್ದೂ ನಮ್ಮಂತಾಗದ ವಿಸ್ಮಯ. ನಮ್ಮ ಟೀಕೆ, ಅಪಹಾಸ್ಯ, ಚುಚ್ಚು ಮಾತುಗಳಿಗೆ ಎಂದೂ ಪ್ರತಿಕ್ರಿಯಿಸಿದವನಲ್ಲ. ತನ್ನ ಪಾಡಿಗೆ ತಾನು, ತನ್ನ ಜಗತ್ತಿನೊಂದಿಗೆ ಮಾತ್ರ ಬೆರೆತು ತನ್ನತನ ಉಳಿಸಿಕೊಂಡ, ನಿಟ್ಟುಸಿರು ಗಳಿಸಿಕೊಂಡ ಮನುಷ್ಯ ಜೀವಿ. ಶಿವಯ್ಯ, ಅವನಿಗೆ ಅವನದಲ್ಲದ ಜಗತ್ತು ಅರ್ಥಾಥ್ ನಾವು ಇಟ್ಟ ಹೆಸರು. ಅಪ್ಪ-ಅಮ್ಮ ಹುಟ್ಟಿದ ದಿನ, ನಕ್ಷತ್ರ, ಹಾಳುಮೂಳು ನೋಡಿ ಇಟ್ಟ ಹೆಸರು ಬೇರೆ ಇತ್ತು. ಆದರದು ದಾಖಲೆಗಳಲ್ಲಿ, ಅವನ ಸ್ವಂತದ ಜಗತ್ತಿನಲ್ಲಿ ಮಾತ್ರ ಚಾಲ್ತಿಯಲ್ಲಿತ್ತು. ಪಲ್ಸರ್ರು, ಕರಿಷ್ಮಾ, ಝಡ್‍ಎಂಆರ್ ಬಂದ ಮೇಲೂ ಅವುಗಳ … Read more

ಕಪ್ಪುಸುಂದರಿಯ ಕಿರಿಗೂಡು!!: ಅಖಿಲೇಶ್ ಚಿಪ್ಪಳಿ

ಅನಿವಾರ್ಯ ಕಾರಣಗಳಿಂದಾಗಿ ಮನೆಯಿಂದ ಹೊರಗೆ ಕಾಲಿಡದೇ ವಾರದ ಮೇಲಾಗಿತ್ತು. ಮನೆಯಲ್ಲಿ ಇದ್ದ-ಬದ್ದ ಪುಸ್ತಕಗಳೆಲ್ಲಾ ಓದಿ ಮುಗಿದವು. ಈಡಿಯಟ್ ಪೆಟ್ಟಿಗೆ ವೀಕ್ಷಿಸಲು ವಿದ್ಯುಚ್ಛಕ್ತಿ ಭಾಗ್ಯವಿಲ್ಲವಾಗಿತ್ತು. ಮಳೆಯಿಲ್ಲದ ಮಳೆಗಾಲದಲ್ಲೆ ಬಿರುಬೇಸಿಗೆಗಿಂತ ಸುಡುವ ಬಿಸಿಲು. ಆಕಾಶ, ಗಾಳಿ, ನೆಲವೆಲ್ಲಾ ಬಿಸಿಯ ಝಳದಿಂದ ಕಾದು ಬೆಂದು ಹೋಗಿದ್ದವು. ಮಾಡಲು ಕೆಲಸವಿಲ್ಲದಿದ್ದಾಗ ಸಮಯದ ಸೆಕೆಂಡಿನ ಮುಳ್ಳು ನಿಧಾನಕ್ಕೇ ಚಲಿಸುತ್ತದೆ. ಅದರಲ್ಲೂ ಈ ತರಹದ ವ್ಯತಿರಿಕ್ತ ವಾತಾವರಣ ಮಾನಸಿಕ ಆರೋಗ್ಯವನ್ನೇ ತಿಂದು ಬಿಡುತ್ತದೆ. ಲವಲವಿಕೆಯಿಲ್ಲದೇ ಮರದ ಕೊರಡಿನಂತೆ ಬಿದ್ದುಕೊಂಡಿದ್ದವನಿಗೆ, ಕಾಲಬುಡದಲ್ಲೊಂದು ಹೆಜ್ಜೇನಿಗಿಂತ ಕೊಂಚ ದೊಡ್ಡದಾದ ಕರೀ … Read more

ವಿಕಟ ವಿನಾಯಕ: ಎಸ್. ಜಿ. ಸೀತಾರಾಮ್, ಮೈಸೂರು.

      ವಿಚಿತ್ರ ಮೈಸಿರಿ-ಮೈಮೆಗಳಿಂದ, ಆಕೃತಿ-ಅಲಂಕಾರಗಳಿಂದ, “ವಿಕಟಾಯ ನಮಃ” ಎಂದೇ ಆರಾಧಿಸಲ್ಪಡುವ ವಿನಾಯಕನ ವಿಕಟಬಿಂಬವೊಂದನ್ನು ಸೆರೆಹಿಡಿಯಲು ಈ ಅಕ್ಷರಬಂಧದಲ್ಲಿ ಯತ್ನಿಸಲಾಗಿದೆ. ಇದರಲ್ಲಿ “ಅಕಟವಿಕಟ ನುಡಿಕಟ್ಟು”, “ಘನೇಶ ಭವಿಷ್ಯೋತ್ತರ ಪ್ರಲಾಪವು”, “ಚೆಲುಗನ್ನಡದಲ್ಲಿ ಚೆನ್‍ಗಣೇಶ”, “ವಿಶೇಷ ವಿಘ್ನೇಶ” ಮತ್ತು “ವಿನಾಯಕನ ವಿನಿಕೆಗಾಗಿ” ಎಂಬೆನಿಸುವ ಪಂಚಖಂಡಗಳು ಒಳಗೂಡಿವೆ.   ಅಕಟವಿಕಟ ನುಡಿಕಟ್ಟು      ಗಣೇಶವಿಚಾರವನ್ನು ಕುರಿತಂತೆ ‘ಕೃಷ್ಣಶಕ ಹದಿನೂರನೇ’ ಶತಮಾನದ ಕೆಲವು ಸೊಟ್ಟಸೊಲ್ಲುಗಳು ಇಲ್ಲಿವೆ. “ಇವುಗಳನ್ನು ಯುಕ್ತಿಯಿಂದ ನೋಡಿದಲ್ಲಿ, ಬುದ್ಧಿನಾಥನು ಪ್ರಸನ್ನವದನನಾಗಿ ಒಂದೊಂದನ್ನು ನೋಡಿದಾಗಲೂ ಒಂದೊಂದು ವಿಘ್ನವನ್ನು ಉಪಶಾಂತಿಗೊಳಿಸುತ್ತಾ … Read more

ಕಾವ್ಯಧಾರೆ: ಶೀತಲ್, ಸಿಪಿಲೆನಂದಿನಿ, ಶಿವಕುಮಾರ ಚನ್ನಪ್ಪನವರ, ಕು.ಸ.ಮಧುಸೂದನ್

ಸ್ವಾತಂತ್ರ ನಿನ್ನ ಖೈದಿ  ನಾ  ಬೇಡ ನನಗೆ ನೀ ಕೊಡುವ ಬಿಡುಗಡೆ …..  ನಿನ್ನ ಗುಲಾಮ  ನಾ   ಕೊಡಬೇಡ ನೀ ನನಗೆ ಯಾವುದೇ  ಸಂಭಾವನೆ ….  ನಿನ್ನ ಅಗಲಿ ನಾ ಬದುಕಲು  ಅರ್ಥವಿಲ್ಲದ ಕವನವದು …..  ನೀನಿಲ್ಲದ ಜೀವನವೇಕೆ ಹೇಳು  ನೆತ್ತರಿಲ್ಲದ ನರವದು ……  ಇದ್ದಾಗ ನೀ   ಗಾಳಿಗೂ ಅಸೂಯೆ ಹುಟ್ಟಿಸುವೆ ನಾ…  ಕೈಬಿಟ್ಟಾಗ ನೀ  ಪ್ರತೀ ಉಸಿರಿಗೂ ಭಿಕ್ಷೆ ಬೇಡುವ ಭಿಕಾರಿ ನಾ….  (ನೀ ಎಂಬುದು ಈ ಕವನದಲ್ಲಿ ಸ್ವಾತಂತ್ರ) -ಶೀತಲ್        … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನೂರಿ ಬೆ ಎಂಬಾತನ ಪುರಾತನ ಪೆಠಾರಿ ಚಿಂತನಶೀಲ ನೂರಿ ಬೆ ಅಲ್ಬೇನಿಯಾದ ಒಬ್ಬ ಗೌರವಾನ್ವಿತ ನಿವಾಸಿ. ತನಗಿಂತ ಬಹಳಷ್ಟು ಚಿಕ್ಕವಳಾಗಿದ್ದವಳೊಬ್ಬಳನ್ನು ಅವನು ಮದುವೆಯಾಗಿದ್ದ. ಒಂದು ದಿನ ಅವನು ಮಾಮೂಲಿಗಿಂತ ಬೇಗನೆ ಮನೆಗೆ ಹಿಂದಿರುಗಿದಾಗ ಅವನ ಅತ್ಯಂತ ವಿಧೇಯ ಸೇವಕನೊಬ್ಬ ಓಡಿ ಬಂದು ಹೇಳಿದ, “ನಿಮ್ಮ ಹೆಂಡತಿ, ಅರ್ಥಾತ್ ನಮ್ಮ ಯಜಮಾನಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಅವರ ಕೊಠಡಿಯಲ್ಲಿ ಒಬ್ಬ ಮನುಷ್ಯ ಹಿಡಿಸಬಹುದಾದಷ್ಟು ದೊಡ್ಡ ಪೆಠಾರಿಯೊಂದಿದೆ. ಅದು ನಿಮ್ಮ ಅಜ್ಜಿಯದ್ದು. ನಿಜವಾಗಿ ಅದರಲ್ಲಿ ಕಸೂತಿ ಕೆಲಸ ಮಾಡಿದ ಪುರಾತನ … Read more

ಸಾಮಾನ್ಯ ಜ್ಞಾನ (ವಾರ 76): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ಪರ್ಪಂಚ್ ಇರೋತನಕ ಕನ್ನಡ ಪದಗೋಳನುಗ್ಗಿ ಎಂದು ನುಡಿದವರು ಯಾರು? 2.    ಐ.ಐ.ಟಿ (IIT) ಯ ವಿಸ್ತೃತ ರೂಪವೇನು? 3.    ಸ್ನಿಗ್ಧತೆಯನ್ನು ಅಳತೆ ಮಾಡುವ ಸಾಧನ ಯಾವುದು? 4.    ನಾಲ್ ಸರೋವರ ಪಕ್ಷಿಧಾಮ ಎಲ್ಲಿದೆ? 5.    ಬಾವೂಲ್ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಕಲೆಯಾಗಿದೆ? 6.    2011 ರ ಪ್ರಾಥಮಿಕ ಜನಗಣತಿ ಅಂಕಿ ಸಂಖ್ಯೆಗಳ ಪ್ರಕಾರ ಕರ್ನಾಟಕದ ಸಾಕ್ಷಾರತಾ ಪ್ರಮಾಣ ಎಷ್ಟು? 7.    ಕರ್ನಾಟಕದ ವಾಯುವ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ ಎಲ್ಲಿದೆ? … Read more