ಭಯದ ಬೆನ್ನೇರಿ ಬಂತು: ಅನಿತಾ ನರೇಶ್ ಮಂಚಿ

’ಹತ್ತು ಗಂಟೆಗೆ ರೆಡಿಯಾಗಬೇಕು ದಾರಿಯಲ್ಲಿ ಹೋಗ್ತಾ ಕೇಶು ಮಾಮಾನನ್ನು ಕರೆದುಕೊಂಡು  ಮದುವೆ ಮನೆಗೆ ಹೋಗೋದು.. ನೀನಿನ್ನು ನಿಧಾನ ಮಾಡ್ಬೇಡ’ ಅನ್ನುವ ಮಾತನ್ನು ನೂರು ಸಲ ಕೇಳಿ ಆಗಿತ್ತು ಇವರ  ಬಾಯಲ್ಲಿ. ಸರಿ ಇನ್ನು ನನ್ನಿಂದ ತಡ ಆಯ್ತು ಅನ್ನೋದು ಬೇಡ ಅನ್ನುವ ಸಿಟ್ಟಿನಲ್ಲಿ ಸ್ವಲ್ಪ ಬೇಗವೇ ಹೊರಟು ಬಿಟ್ಟಿದ್ದೆ.  ’ಹೇಗೂ ಹೊರಟಾಗಿದೆಯಲ್ಲ.. ಇನ್ನು ಮನೆಯೊಳಗೆ ಕೂತೇನು ಮಾಡುವುದು. ಹೋಗಿ ಕೇಶು ಮಾಮ ಬರ್ತೇನೆ ಅಂತ ಹೇಳಿದ ಜಾಗದಲ್ಲೊ ಕಾಯೋಣ’ ಅಂದರಿವರು. ನನಗೂ ಅದೇ ಸರಿ ಅನ್ನಿಸಿ ಕಾರೇರಿದೆ.  … Read more

ನಾಯಿ ಪಾಡು: ಗುಂಡುರಾವ್ ದೇಸಾಯಿ

ವಾರದಿಂದ ತಲೆ ಸಿಡದು ಹೋದಂಗಾಗಕತಿತು. ಕ್ಷಣ ಕ್ಷಣಕ್ಕೂ ಭಯ ಆತಂಕ ಸುರುವಾಗಕತಿತು, ಶಾಲೆಯಲ್ಲಿ ಪಾಠ ಮಾಡುವಾಗಲು ಮನೆ ವಾತಾವರಣ ನೆನಸಿಕೊಂಡ ಕೂಡಲೆ ಸ್ಥಬ್ಧನಾಗಿ ನಿಂತುಬಿಡುತ್ತಿದ್ದೆ.  ಮಕ್ಕಳು ’ಸಾರ್, ಮುಂದು ಹೇಳ್ರೀ ಯಾಕ ಹಾಂಗ ನಿಂತ್ರಿ’ ಎಂದು ಎಚ್ಚರಿಸಿದಾಗಲೇ ವಾಸ್ತವಕ್ಕೆ ಬರೋದು. ಸಹುದ್ಯೋಗಿಗಳು ’ಯಾಕ ಹಿಂಗಾಗ್ಯಾರ? ಏನು ತಾಪತ್ರಯನೋ ಏನೋ? ಅಥವಾ ಮನೆಯಲ್ಲಿ ಮನೆಯವರ ಜೊತೆಗೆ ಮನಸ್ತಾಪನೋ?’ ಎಂದು ಹಲವು ಬಾರಿ ಕೆದುಕಲೆತ್ನಿಸಿದರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ನಿಮಗೂ ಏನೇನೋ ಕಲ್ಪನೆಗಳು ನನ್ನ ಬಗ್ಗೆ ಮೂಡಿರಬೇಕಲ್ಲ. ಅದು ಹೇಳುವ ವಿಷಯವೇನು … Read more

ಎಮಿಲಿ ಎಂಬ ಅಮಲು: ಮಹೇಂದ್ರ ಎಂ. ನವೋದಯ

೧೯ನೇ ಶತಮಾನದ ಇಂಗ್ಲೀಷ್ ಸಾಹಿತ್ಯದಲ್ಲಿನ ಮಹಿಳಾ ಲೇಖಕಿಯರಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದವರಲ್ಲಿ ಎಮಿಲಿ ಬ್ರಾಂಟೆ ಕೂಡ ಒಬ್ಬರು. ಜುಲೈ ೩೦, ೧೮೧೮ ರಂದು ಜನಿಸಿ, ತೀರಾ ಸಂಕ್ಷಿಪ್ತವಾಗಿ ೩೦ ವರ್ಷಗಳ ಕಾಲ ಬದುಕಿದರೂ ಅವರ ಸಾಹಿತ್ಯ ಕೊಡುಗೆ ಅನನ್ಯ ಮತ್ತು ಅಜರಾಮರ. ಎಮಿಲಿ ಬೆಳೆದದ್ದು ದೂರದ ಇಂಗ್ಲೆಂಡ್, ಬರೆದದ್ದು ಇಂಗ್ಲೀಷ್ ನಲ್ಲಿ, ಎಮಿಲಿ ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ಕಠಿಣ ಸ್ವಭಾವದ ನೆಂಟನಬ್ಬೊಳ ಮನೆಯಲ್ಲಿ ಬೆಳೆದಳು. ಹೆಚ್ಚು ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ. ಆಕೆ ಯಾರೊಂದಿಗೂ ಬೆರೆತವಳಲ್ಲ, ಒಂಟಿತನವೇ … Read more

ಮೌನವೊಂದು ಸಾಗುತಿಹುದು ಬದುಕು ಬಿಟ್ಟು: ಸಚೇತನ

  ವಿಶಾಲ ಮರುಭೂಮಿಯ ಮರಳಿನ ಮೇಲೆ ಬಿಸಿಲು ಚೆಲ್ಲುತ್ತ ನಿಂತ ನೀಲ ಆಕಾಶಕ್ಕೆ ಒಂದೇ ಬಣ್ಣ, ಕಪ್ಪು, ಬಿಳಿ, ಕಡು ನೀಲ, ಕಡುಗಪ್ಪು, ಬಂಗಾರ, ಹಳದಿ ಯಾವುದೇ ಬಣ್ಣಗಳಿಲ್ಲದ ಮೋಡಗಳ ಅಡಿಯಲ್ಲಿರುವವರ ಬದುಕು ಕೂಡ, ಬಣ್ಣಗಳಿಲ್ಲದ ಬದುಕು. ಈ ನೀಲ ಆಕಾಶದ ಕೆಳಗೆ  ಇರಾಕ್ ಮತ್ತು ಟರ್ಕಿ ನಡುವಿನ ಮರುಭೂಮಿಯಂತ ಪ್ರದೇಶದಲ್ಲಿ ಕುರ್ದಿಶ್ ಎನ್ನುವ ನಿರಾಶ್ರಿತರ ಕ್ಯಾಂಪ್ ಇದೆ. ಇರಾಕ್ ಮತ್ತು ಅಮೇರಿಕಾದ ಯುದ್ಧೋನ್ಮಾದದ ಹರಿತ ಧೂಳು ಎಲ್ಲೆಲ್ಲು ತುಂಬಿದೆ. ಯುದ್ಧವೆಂದರೆ ಸೈನಿಕರ ಬಡಿದಾಟವಲ್ಲ, ಬಂದೂಕುಗಳ ಶಬ್ದಗಳಲ್ಲ, … Read more

ಕಿರು ಕತೆಗಳು: ನವೀನ್ ಮಧುಗಿರಿ, ಮುಕುಂದ್ ಎಸ್.

ಚಪ್ಪಾಳೆ ಇಡೀ ಶಾಲೆಗೇ ವರ್ಷದ ಉತ್ತಮ ಪ್ರತಿಭಾವಂತ ವಿದ್ಯಾರ್ಥಿ ಎಂದು ಮಗ ವೇದಿಕೆಯ ಮೇಲೆ ಪ್ರಶಸ್ತಿಯನ್ನು ಪಡೆವಾಗಯುವಾಗ, ಪೋಷಕರ ಸಾಲಿನಲ್ಲಿ ಕುಳಿತ ಅವನ ಕುರುಡು ತಂದೆ ಸಂತಸದಿಂದ ಎಲ್ಲರೊಟ್ಟಿಗೆ ಚಪ್ಪಾಳೆ ತಟ್ಟಿದರು. *** ನಾಯಿ ಆ ಮನೆಯಲ್ಲಿ ಅದು ಊಟದ ಸಮಯ. ಗಂಡ ಊಟಕ್ಕೆ ಕುಳಿತಿದ್ದ, ಹೆಂಡತಿ ಬಡಿಸುತ್ತಿದ್ದಳು. ಎರಡು ತುತ್ತು ತಿನ್ನುವಾಗ ಗಂಡ ತನ್ನ ಮಾಮೂಲಿ ಗೊಣಗಾಟವನ್ನ ಶುರು ಮಾಡಿದ. ಅನ್ನ ಯಾಕಿಷ್ಟು ಮೆತ್ತಗೆ ಮಾಡಿದ್ದೀಯ?  ಸಾರಿಗೆ ಉಪ್ಪು ಕಡಿಮೆ. ಪಲ್ಯ ತುಂಬಾ ಖಾರ ಖಾರ. … Read more

ಧ್ವನಿ ಕೇಳೋ ಆಸೆಯೂ, ರೆಕಾರ್ಡಿಂಗ್ ನೆನಪೋಲೆಯು: ಪ್ರಶಸ್ತಿ ಪಿ.

ಶಾಲಾ ದಿನಗಳಲ್ಲಿ ಆಕಾಶವಾಣಿಯಲ್ಲಿ ಶನಿವಾರ ಬರ್ತಿದ್ದ ಗಾಂಧಿ ಸ್ಮೃತಿ, ಭಾನುವಾರದ ರೇಡಿಯೋ ಸಿನಿಮಾ(ಧ್ವನಿಯಲ್ಲೇ ಸಿನಿಮಾದ ಕಲ್ಪನೆಗಳ ಕಟ್ಟೋ ಅದ್ಬುತ ಅನುಭವ ಕೇಳೇ ಸವಿಬೇಕು), ಪ್ರತಿದಿನ ಸಂಸ್ಕೃತ ವಾರ್ತೆಯ ಬಲದೇವಾನಂದ ಶರ್ಮ,  ಏಳೂ ಮೂವತ್ತೈದರ ವಾರ್ತೆ, ಎಂಟರ ಹಿಂದಿ, ಇಂಗ್ಲೀಷ್ ವಾರ್ತೆಗಳು, ನಂತರದ ರೇಡಿಯೋ ಡಾಕ್ಟರಗಳನ್ನು ಕೇಳೇ ದೊಡ್ಡವರಾದ ನಮಗೆ  ರಾತ್ರಿ ಎಂಟು ಘಂಟೆಗೆ ಬರೋ "ಯುವವಾಣಿ" ಅಚ್ಚುಮೆಚ್ಚಾಗಿತ್ತು. ಅದರಲ್ಲಿ ಬರ್ತಿದ್ದ ಕಾಲೇಜು, ಶಾಲಾ ವಿದ್ಯಾರ್ಥಿಗಳು ಮತ್ತು ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಕೇಳುತ್ತಿದ್ದ ನನಗೆ ನಾನೂ ಒಮ್ಮೆ ರೇಡಿಯೋದಲ್ಲಿ … Read more

ತಿರುಗುಬಾಣ: ಬಸವರಾಜ ಎಂ.

ಆಫೀಸ್ ಗೆ ತಡವಾಗುತ್ತಿತ್ತು. ಇಸ್ತ್ರಿ ಮಾಡಿದ ಬಟ್ಟೆ  ಬೇರೆ ಇರಲಿಲ್ಲ. ಮಗನಿಗೆ ಹೇಳೋಣವೆಂದುಕೊಳ್ಳುವ ಹೊತ್ತಿಗೆ ಗಾದೆ ನೆನಪಿಗೆ ಬಂತು. "ಅಪ್ಪ ಮಾಡಿದ್ದು ಉತ್ತಮ,  ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಆಳು" ಅಂತ. ಮನೆಯಲ್ಲಿ ಆಳು ಇಡಲಂತೂ ಸಾಧ್ಯವಾಗಿಲ್ಲ ಹೋಗಲಿ ನಾನೆ ಮಾಡೋಣ ಎಂದುಕೊಂಡರೆ ನನಗೊಂದು ಜಿಜ್ಞಾಸೆ. ಅದೇನೆಂದರೆ ನನ್ನ ಅಪ್ಪನನ್ನು  ಪರಿಗಣಿಸಿದರೆ ನಾನು ಮಾಡಿದ್ದು ಮಧ್ಯಮವಾಗುತ್ತದೆ. ಮಗನಿಗೆ  ಹೇಳೋಣವೆಂದರೆ ಮತ್ತೆ ಮಧ್ಯಮದ ವಿಚಾರ ಬಂತು. ಈಗ ನನ್ನ ಕೋಪ ತಿರುಗಿದ್ದು ನನ್ನ ಅಂಗಿಯ ಇಸ್ತ್ರಿಯ ಮಾಡದ … Read more

ಮೂರು ಕವಿತೆಗಳು: ಉರ್ಬಾನ್ ಡಿಸೋಜ, ಅಕುವ, ಶಿವಕುಮಾರ ಸಿ.

ಹುಡುಕಾಟ ನಾನು ನನ್ನ ಬದುಕನ್ನು ಹೀಗೆಯೇ ಸುಮ್ಮನೆ ನೋಡಿದೆ, ಆಗ೦ತುಕ, ಆಗ೦ತುಕನನ್ನು ಭೇಟಿಯಾದ೦ತಾಯ್ತು. ಇದು ನನ್ನ ಬದುಕೇ? ಉತ್ತರ ಹುಡುಕಾಡಿದೆ. ಒಳ್ಳೇದೇ ಮಾಡಿದೆ,  ಕೋಟಿ ದೇವರನ್ನ ಬೇಡಿದೆ, ಆದರೂ ನನ್ನ ಬದುಕನ್ನು ನಾನೇ ಅರಿಯದಾದೆ. ಇತರ ಚಿ೦ತನೆ, ಮಾತುಗಳೇ ನಾನೆ೦ದುಕೊ೦ಡೆ. ಕಡಿದವನ, ಕುಡಿದವನ, ಅತ್ಯಾಚಾರಿಯ, ಲ೦ಚವಾದಿಯ ಬದುಕು ಯಾವ ರೀತಿಯದು ಎಂದು ನೆನೆದು ನಡುಗಿದೆ. ಸತ್ತ ನ೦ತರದ ಬದುಕನ್ನು ನೆನೆದು ಈಗಿನ ಬದುಕ ಮರೆತೆ? ಹೂವನ್ನೇ ಬಯಸಿದ ಬದುಕಿನೊಳಗೆ ಹರಿತ ಚಾಕುವೇ ತಿವಿಯಿತು. ಬದುಕೇ, ನೀನು ಮತ್ತೆ … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೪): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಪಶ್ಚಿಮಘಟ್ಟಗಳ ಮಹತ್ವವನ್ನು ಅರಿಯಬೇಕಾದರೆ ಈ ಕೆಳಗಿನ ಕೆಲ ಅಂಕಿ-ಅಂಶಗಳನ್ನು ಗಮನಿಸಬೇಕು. ಭಾರತಾದ್ಯಂತ ಕಂಡು ಬರುವ ೪೦೦೦ ಜಾತಿಯ ಪುಷ್ಪವೈವಿಧ್ಯದಲ್ಲಿ ೧೦೮೦ ಜಾತಿಗಳು ಈ ಘಟ್ಟಪ್ರದೇಶದಲ್ಲಿವೆ. ದೇಶದಲ್ಲಿರುವ ೬೪೫ ನಿತ್ಯಹರಿಧ್ವರಣ ಜಾತಿಯ ಮರಗಳಲ್ಲಿ ೩೬೨ ಜಾತಿಯ ಮರಗಳು ಇಲ್ಲಿವೆ. ೧೦೦೦ ಜಾತಿಯ ನೆಲಮಟ್ಟದ ಪೊದೆ-ಬಳ್ಳಿಗಳ ಪ್ರಬೇಧಗಳಲ್ಲಿ ೬೮೨ ಪ್ರಭೇದಗಳು ಘಟ್ಟಗಳಲ್ಲಿವೆ ಹಾಗೂ ಇದರಲ್ಲಿ ೨೮೦ ಪ್ರಬೇಧಗಳು ಪಶ್ಚಿಮಘಟ್ಟಗಳಲ್ಲಿ ಮಾತ್ರ ಲಭ್ಯವಿದೆ. ಅಕಶೇರುಕ ಪ್ರಬೇಧಗಳ ಒಟ್ಟು ೩೫೦ರಲ್ಲಿ ೭೦ ಪ್ರಬೇಧಗಳು ಪ್ರಪಂಚದ … Read more

“ಮಕ್ಕಳ ಸುರಕ್ಷತೆಗಿರಲಿ ಮೊದಲ ಆದ್ಯತೆ” : ಹೊರಾ.ಪರಮೇಶ್ ಹೊಡೇನೂರು

"ಮಕ್ಕಳ ಸಂರಕ್ಷಣೆ ನಮ್ಮೆಲ್ಲರ ಹೊಣೆ" ಎಂಬ ಸಾಮಾಜಿಕ ಕಾಳಜಿಯ ಘೋಷವಾಕ್ಯ ಇಂದಿನ ದಿನಮಾನಗಳಲ್ಲಿ ತುಂಬಾ ಚಾಲ್ತಿಯಲ್ಲಿದೆ. ಏಕೆಂದರೆ, ಭವಿಷ್ಯದ ನಾಗರೀಕರಾಗಿರುವ ಮಕ್ಕಳ ಬಾಲ್ಯವು ತುಂಬಾ ಆಯಕಟ್ಟಿನದ್ದಾಗಿದ್ದು, ತಮ್ಮ ಮನೆಯ, ಶಾಲೆಯ ಮತ್ತು ಸಮುದಾಯದ ನಡುವೆ ಸಹಜ ತುಂಟಾಟ, ತರಲೆ, ಚೇಷ್ಟೆ, ಹುಡುಗಾಟಿಕೆಗಳಿಂದ ಕೂಡಿರುತ್ತದೆ ಮತ್ತು ಈ ಸಂದರ್ಭಗಳಲ್ಲಿ ಅಕಾಸ್ಮಾತ್ ಆಗಿ ಅಚಾತುರ್ಯಗಳು ಉಂಟಾದಾಗ ಅನಾಹುತಗಳೇ  ಜರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತಹ ಕೆಲವು ಸಂದರ್ಭಗಳು, ಸಾಧ್ಯತೆಗಳ ಬಗೆಗೆ ಒಂದಿಷ್ಟು ಮೆಲುಕು ಹಾಕುತ್ತಾ, ಮಕ್ಕಳ ಸುರಕ್ಷತೆಗೆ ಹೇಗೆ ಹೊಣೆಗಾರಿಕೆ ನಿಭಾಯಿಸಬೇಕೆಂಬುದನ್ನು … Read more

ಸಾಮಾನ್ಯ ಜ್ಞಾನ (ವಾರ 62): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು? ೨.    ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ? ೩.    ಎಚ್.ಎಸ್.ಸಿ.ಎಲ್ (HSCL) ನ ವಿಸ್ತೃತ ರೂಪವೇನು? ೪.    ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ? ೫.    ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು? ೬.    ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು? ೭.    ಒಂದು ಹೆಕ್ಟೇರಿನಲ್ಲಿ ಎಷ್ಟು ಚರದ ಮೀಟರುಗಳಿವೆ? ೮.    ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು? ೯.    ಶಿವಪ್ಪ ನಾಯಕನ … Read more