ಅಂಗೈ ರೇಖೆಗಳಲ್ಲಿ ನದಿಗಳನ್ನು ಹರಿಸುವ ಕಾವ್ಯ ಕಡಮೆ: ನಾಗರಾಜ್ ಹರಪನಹಳ್ಳಿ
ಯುವ ಪ್ರತಿಭೆ ಕಾವ್ಯ ಕಡಮೆಗೆ ೨೦೧೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವಪುರಸ್ಕಾರ ದೊರೆತಿದೆ. ೫೦ ಸಾವಿರ ರೂ. ಬಹುಮಾನ ರೂಪದಲ್ಲಿ ಸಹ ಸಿಗಲಿದೆ. ಈ ಪುರಸ್ಕಾರಕ್ಕೆ ಕಾರಣವಾದುದು ಆಕೆಯ ‘ಧ್ಯಾನಕೆ ತಾರೀಖಿನ ಹಂಗಿಲ್ಲ’ ಎಂಬ ಮೊದಲ ಕವಿತಾ ಸಂಕಲನ. ಕುತೂಹಲದಿಂದಲೇ ಆ ಕವಿತಾ ಸಂಕಲನವನ್ನು ಕೈಗೆತ್ತಿಕೊಂಡು ಓದಿದರೆ ಅಲ್ಲಿನ ಭಾವಲೋಕ ಮತ್ತು ಮನಸ್ಸೊಂದು ತನ್ನ ಸುತ್ತಲ ಜಗತ್ತಿಗೆ ತೆರೆದುಕೊಳ್ಳುವ ಬಗೆ ಒಡೆದು ಕಾಣಿಸುತ್ತದೆ. ಕವಿತೆಗಳನ್ನು ಕಟ್ಟುವ ಬಗೆಯಲ್ಲೂ ತಾಜಾತನ ಮತ್ತು ಪ್ರತಿಮೆಗಳನ್ನು ಕಟ್ಟುವ ಬಗೆ ಸೊಗಸಾಗಿದೆ. … Read more