ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಡಂಕಿನ್ ಝಳಕಿ ರವರ ಚುಟುಕಗಳು

ರೋಷ   ಗಾಂಧಿಯಬುರುಡೆಯ ಮೇಲೆ   ಕೂತು ಕಾಗೆಯೊಂದು   ಕುಕ್ಕುತ್ತಿತ್ತು ರೋಷದಲಿ   ಬಳಿಸಾರಿ ಕೇಳಿದೆ ಏತಕ್ಕೆಂದು.   “ಮೂರ್ಖನಿವನು, ಗುಡಿಸಿಬಿಟ್ಟ   ಕೊಳಚೆ ಪ್ರದೇಶವನು   ಸಾಯಬೇಕಾಗಿದೆ ಹಸಿವಿನಿಂದ ನಾವಿನ್ನು”,   ಎಂದಿತು ನೊಂದು.   ಯಾರಿಗೆ?   ದುಂಬಿಗಳೆಲ್ಲಾ   ಮಲಗಿದ ಮೇಲೆ   ರಾತ್ರಿರಾಣಿ ಮೆಲ್ಲಗೆ   ವದ್ದೆ ಕನಸುಗಳ   ಕಂಪ ಚೆಲ್ಲಿ   ಕರೆವುದಾದರೂ   ಯಾರಿಗೆ? ದೃಷ್ಟಿ   ಬೈಬಲ್ ಪ್ರಾರ್ಥನೆ ನಡೆಯುತ್ತಿತ್ತು…   “ಒಂದು ಹಣ್ಣಿಗಾಗಿ … Read more

10k ಓಟ: ಪ್ರಶಸ್ತಿ ಅಂಕಣ

  ಹಿಂದಿನ ವರ್ಷ ಇದೇ ಸಮಯ. ಬೆಂಗಳೂರಿಗೆ ಕಾಲಿಟ್ಟ ಹೊಸತು. ಗೆಳೆಯರ ಬಾಯಲ್ಲಿ  10k 10k 10k.. ಎಂಬ ಝೇಂಕಾರ.. ಯಾರಾದ್ರೂ ಓಡ್ರಪ್ಪ, ಇದು ನನ್ನಿಂದೆಂತೂ ಆಗದ ಕೆಲಸ ಅಂತ ನನ್ನ ಭಾವನೆ. ಹಾಗಾಗಿ ಯಾರೇ ಈ ಬಗ್ಗೆ ಮಾತಾಡಕ್ಕೆ ಬಂದ್ರೂ ನಾನು ಇದ್ದ ಬುದ್ದಿಯನ್ನೆಲ್ಲಾ ಉಪಯೋಗಿಸಬೇಕಾಗಿ ಬಂದ್ರೂ ಉಪಯೋಗಿಸಿ ಅಲ್ಲಿಂದ ಎಸ್ಕೇಪ್ 🙂 ದಿನಾ ಬೆಳಬೆಳಗ್ಗೆ ಎದ್ದು ಓಡೋದಂದ್ರೆ ಏನು ಹುಡುಗಾಟನ ? ಬೆಂಗ್ಳೂರಿಗೆ ಬಂದ ಮೇಲೆ ಆಲಸ್ಯವೇ ನಾನು ಅಂತಾಗಿದ್ದೋನು ಮತ್ತೆ ಎದ್ದು ಓಡೋ … Read more

ಮುಂಬೈಗೆ ಕಿರಣ್ ಳ ಪ್ರೇಮಪತ್ರ: ವಾಸುಕಿ ರಾಘವನ್

  ಜಾಗಗಳೂ ಕೂಡ ಪಾತ್ರಗಳಾದಾಗ ಚಿತ್ರಗಳಿಗೆ ಇನ್ನೊಂದು ಆಯಾಮ ಸೇರಿಕೊಳ್ಳುತ್ತದೆ. “ನಾಗರಹಾವು” ಚಿತ್ರದ ಚಿತ್ರದುರ್ಗ, “ಕಹಾನಿ” ಚಿತ್ರದ ಕೋಲ್ಕೊತ, “ಸತ್ಯ”ದ ಮುಂಬೈ, “ಗಾಡ್ ಫಾದರ” ನ ಸಿಸಿಲಿ – ಈ ಎಲ್ಲಾ ಚಿತ್ರಗಳಲ್ಲೂ ಆ ಜಾಗಗಳೇ ಒಂದು ಪಾತ್ರವಾಗಿವೆ.  ಇದಕ್ಕೆ ಹೋಲಿಸಿದರೆ, ಜಾಗವನ್ನೇ ಪ್ರಮುಖ ಪಾತ್ರವಾಗಿ ಇಟ್ಟುಕೊಂಡು ತೆಗೆದಿರುವ ಚಿತ್ರಗಳು ಕಡಿಮೆ. ಕಿರಣ್ ರಾವ್ ನಿರ್ದೇಶನದ “ಧೋಬಿ ಘಾಟ್” ಅಂತಹ ಒಂದು ಅಪರೂಪದ ಚಿತ್ರ. ಇದು ಮುಂಬೈಗೆ ಆಕೆ ಬರೆದಿರುವ ಪ್ರೇಮಪತ್ರ! ಚಿತ್ರದಲ್ಲಿ ನಾಲ್ಕು ಎಳೆಗಳಿವೆ.  ಅರುಣ್ … Read more

ನಾಟಕಕಾರರಾಗಿ ಕುವೆಂಪು (ಭಾಗ-4):ಹಿಪ್ಪರಗಿ ಸಿದ್ದರಾಮ್

  ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ. ಈ ಮೊದಲಿನ ದೃಶ್ಯಗಳಲ್ಲಿ ಕೌರವಕುಲೇಂದ್ರನ್, ಕುರುಪತಿ, ಕೌರವೇಂದ್ರ, ಕುರುಚಕ್ರವರ್ತಿ, ದುರ್ಯೋಧನನೆಂದು ಪಾತ್ರಗಳ ಸಂಭಾಷಣೆಗಳಲ್ಲಿ ಉಲ್ಲೇಖವಾಗುತ್ತಿದ್ದ ಪಾತ್ರವು ರಂಗದಲ್ಲಿ ಬರುವುದರೊಂದಿಗೆ ನಾಟಕವು ಉತ್ತುಂಗಸ್ಥಿತಿಗೇರಿ ಕಳೆಕಟ್ಟಲಾರಂಭಿಸುವುದು ಆರನೇಯ ದೃಶ್ಯದಿಂದ, ರಣಭೂಮಿಯ ಕರಾಳತೆಯು ತುಂಬಿಕೊಂಡಿರುವ ವೈಶಂಪಾಯನ ಸರೋವರದ ದಡದಲ್ಲಿ ಕತ್ತಲೆ ಕವಿದಿರುವಾಗ ಗದಾಯುದ್ಧದಲ್ಲಿ ಕೃಷ್ಣನ ಕುತಂತ್ರದ ಫಲವಾಗಿ ಭೀಮನಿಂದ ತೊಡೆಮುರಿದುಕೊಂಡು ವಿಷಾದದ ನೋವಿನೊಂದಿಗೆ ನೆಲಕ್ಕುರುಳಿರುವ ಅಷ್ಟಾದಶಾಕ್ಷೋಹಿಣೀ ಒಡೆಯನಾಗಿ ಮೆರೆದಾಡಿದ್ದ ಚಕ್ರವರ್ತಿ ದುರ್ಯೋಧನ ಮಹಾರಾಜರು ದೇಸಿಗನಂತೆ ಹೊರಳಾಡುತ್ತಿದ್ದಾರೆ. ‘ಎಲವೋ ಅಗಸ್ತ್ಯ ನಕ್ಷತ್ರವೇ…’ಎಂಬರ್ಥದಲ್ಲಿ ಇದ್ದರೂ ಇಲ್ಲದವನಂತೆ … Read more

ಡಿಪೋ ಅಕ್ಕಿ: ಹನಿಯೂರು ಚಂದ್ರೇಗೌಡ

  "ನ್ಯಾಯಬೆಲೆ ಅಂಗಡಿ" ಎಂಬೀ ಮೂರಕ್ಷರದ ಬೋರ್ಡಿನತ್ತ ಗಮನವಹಿಸಿದರೆ, ನನ್ನ ಮನವು ಪುಲಕಿತಗೊಳ್ಳುತ್ತದೆ. ಚನ್ನಪಟ್ಟಣ ತಾಲೂಕು ಬಹುತೇಕವಾಗಿ ಮಳೆಯನ್ನಾಶ್ರಯಿಸಿದ, ಅಲ್ಲಲ್ಲಿ ಕೊಂಚ ಪಂಪ್ ಸೆಟ್ಟನ್ನಾಶ್ರಯಿಸಿದ ಬೇಸಾಯ ಪದ್ದತಿಯನ್ನು ಹೊಂದಿದೆ. ಇಂಥ ತಾಲೂಕಿನ ನಮ್ಮನ್ನೂ ಸೇರಿಸಿ ಎಷ್ಟೋ ಜನರಿಗೆ ಅನ್ನದ ಆಸರೆಯಾಗಿದ್ದು ಮಾತ್ರ ಈ ಸೊಸೈಟಿಯ ಅಕ್ಕಿಯೇ. ನಾನು ಚಿಕ್ಕವನಾಗಿದ್ದಾಗ ನನ್ನ ಅಪ್ಪ-ಅವ್ವನ ಜತೆಯಲ್ಲಿ ತಿಂಗಳಿಗೊಂದಾವರ್ತಿ ಬರುತ್ತಿದ್ದ ಈ ಅಕ್ಕಿಯನ್ನು ತರಲು ಡಿಪೋ ಅಥವಾ ಸೊಸೈಟಿಗೆ ಹೋಗುತ್ತಿದ್ದದ್ದು, ಅದನ್ನು ನಾನೇ ಬಹಳ ಉತ್ಸಾಹದಿಂದ ಹೊತ್ತು ತರುತ್ತಿದ್ದದ್ದು ಈಗಲೂ ಪುಳಕಗೊಳಿಸುವ … Read more

ನಮ್ಮಪ್ಪನೇ ಈಗ ಸೊಸೈಟಿಯ ಅಧ್ಯಕ್ಷ: ಡಾ. ಗವಿ ಸ್ವಾಮಿ

  ನಮ್ಮ ಸಂಪಾದಕರ  ಟೈಮ್ ಲೈನನ್ನು ಜಾಲಾಡುತ್ತಿದ್ದೆ. ಅರೆ, ಡಿಪೋ ಅಕ್ಕಿಯ ಬಗ್ಗೆ ಲೇಖನ ಕಳಿಸಬೇಕಂತೆ ಪಂಜು ವಿಶೇಷ ಸಂಚಿಕೆಗಾಗಿ! ಛೇ ನಾನು ಇದನ್ನು ಮೊದಲೇ ಗಮನಿಸಬಾರದಿತ್ತಾ. ಇನ್ನೊಂದೇ ದಿನ ಬಾಕಿ ಇದೆ. 18ಕ್ಕೆ ಡೆಡ್ ಲೈನ್. ಬರೆಯಲೇಬೇಕು.  ಏನಾದರೂ ಬರೆಯಲೇಬೇಕು. ಆ ಹಕ್ಕು ನನಗಿದೆ. ಬಹುಶಃ ಡಿಪೋ ಅಕ್ಕಿಯ ಬಗ್ಗೆ  ಅಧಿಕಾರಯುತವಾಗಿ ಮಾತನಾಡುವ ಹಾಗು ಬರೆಯುವ ಹಕ್ಕು ಇರುವುದು ಅದರ ರುಚಿ ನೋಡಿದವರಿಗೆ ಮಾತ್ರ! ಅವರಲ್ಲಿ ನಾನೂ ಒಬ್ಬ . ಅದಕ್ಕೇ ಹೇಳಿದ್ದು ನನಗೆ ಹಕ್ಕಿದೆ … Read more

ಗಿರೀಶ ಕಾಸರವಳ್ಳಿ ಮತ್ತು ಚಲನಚಿತ್ರಗಳು: ಮಹದೇವ ಹಡಪದ್

  ಮನುಷ್ಯ ಪ್ರೀತಿ, ಮಾನವೀಯ ಅನುಕಂಪ, ಪರಿಸರ ಕಾಳಜಿ, ದೇಶ-ಭಾಷೆ, ಸಂಬಂಧಗಳು, ಸಮಾಜದ ಓರೆ-ಕೋರೆ, ತೊಡುಕು-ಕೆಡುಕಗಳನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡಿರುವ ಕಲುಷಿತ ಸಾಮಾಜಿಕ ಆವರಣ, ಆ ಆವರಣದ ನಡುವೆ ಬದುಕಿಗಾಗಿ ಹಂಬಲಿಸುವ, ಮನಮಿಡಿಯುವ ಮುಗ್ಧತೆ, ನ್ಯಾಯಕ್ಕಾಗಿ ಹೋರಾಡುವ, ಇರುವಿಕೆಯನ್ನು ಮುಟ್ಟಿನೋಡಿಕೊಳ್ಳುವ ಪಾತ್ರಗಳು… ಇಂಥ ಅನುಭವವನ್ನು ಗಾಢವಾಗಿ ಕಟ್ಟಿಕೊಡುವ ಶಕ್ತಿ ಕಾಸರವಳ್ಳಿಯವರ ಎಲ್ಲಾ ಸಿನೆಮಾಗಳ ಆವರಣದಲ್ಲಿದೆ. ಕತೆ, ಘಟನೆಯ ಓಘದಲ್ಲಿ ಪಾತ್ರಗಳು  ಅನಾವರಣಗೊಳ್ಳುವ ಬಗೆಯನ್ನು ಸಮರ್ಥವಾಗಿ ಚಿತ್ರದ ಚೌಕಟ್ಟಿನಲ್ಲಿಟ್ಟಿರುವ ಹಲವು ಚಿತ್ರಗಳ ಗೊಂಚಲು  ಕನ್ನಡದಲ್ಲಿ ಬಂದಿವೆ. ಅವೆಲ್ಲವವೂ ಮೂಲ ಆಕರವಾಗಿ … Read more

ಹಣಬು ಸುಡುವುದು: ರಾಜೇಂದ್ರ ಶೆಟ್ಟಿ

ಹತ್ತು ವರ್ಷಗಳು! ಹೇಗೆ ಕಳೆದು ಹೋದವು. ಅಂದು, ಇಂತಹದೇ ಬಸ್ಸಿನಲ್ಲಿ ಮುಂಬಾಯಿಗೆ ಓಡಿ ಹೋಗಿದ್ದೆ. ಇಂದು ರಜಾದಲ್ಲಿ ಹಿಂದೆ ಬರುತ್ತಿದ್ದೇನೆ. ಈ ಹತ್ತು ವರ್ಷಗಳಲ್ಲಿ ಊರಲ್ಲಿ ಏನೇನು ಆಗಿದೆಯೋ, ಯಾರು ಇದ್ದಾರೋ, ಯಾರು ಇಲ್ಲವೋ ಯಾರಿಗೆ ಗೊತ್ತು. ಇಷ್ಟೊಂದು ದಿನಗಳಲ್ಲಿ ಊರಿಗೆ ಪತ್ರವನ್ನೇ ಬರೆದಿಲ್ಲ. ಊರಿಗೆ ಬರುವುದು ಸಹ ಯಾರಿಗೂ ಗೊತ್ತಿಲ್ಲ. ಜೀವನದಲ್ಲಿ ಎಷ್ಟೊಂದು ತಿರುವುಗಳು! ಅಪ್ಪನ ಕಿಸೆಯಿಂದ ಹಣ ತೆಗೆದಿದ್ದೆ –ಐಸ್ ಕ್ಯಾಂಡಿ ತಿನ್ನಲು. ಅದು ಕಳ್ಳತನವೆಂದು ಅಪ್ಪ ಎಷ್ಟು ಹೊಡೆದಿದ್ದ. ಆವಾಗ ನನ್ನ ವಯಸ್ಸಾದರೂ … Read more

ನವೀನ ಕಹಾನಿ: ನವೀನ್ ಮಧುಗಿರಿ

ದೇವರ ದರ್ಶನ  ದೇವರಲ್ಲಿ ನನಗೆನಂಬಿಕೆಯಿಲ್ಲವಾದ್ದರಿಂದ, ಬೆಳಗೆದ್ದ ಕೂಡಲೇ ದೇವರ ಮುಖ ನೋಡಬೇಕು. ಬಲಕ್ಕೆ ಏಳಬೇಕು ಎಂಬೆಲ್ಲಾ ಯಾವ ನಿಯಮ ಮತ್ತು ಕಟ್ಟುಪಾಡುಗಳು ನನಗಿಲ್ಲ. ಇವತ್ತು ನಾನು ಮೇಲೆದ್ದಿದ್ದೇ  ಎಡಮಗ್ಗುಲಿನಲ್ಲಿ! ಎದ್ದು ಕೂತು ಕಣ್ ಬಿಡುವ ವೇಳೆಗೆ ಕಣ್ಣೆದುರಿಗಿದ್ದ ಅಮ್ಮಾ ಹೇಳಿದಳು- "ದೇವರ ಮುಖ ನೋಡು" ನಾನೆಂದೆ- "ಅಮ್ಮಾ, ನೀನೇ ನನ್ನ ದೇವರು!" ಭಾವುಕಳಾದ ಅಮ್ಮಾ ತನ್ನೆರಡೂ ಕೈಗಳಲ್ಲಿ ನನ್ನ ಕೆನ್ನೆ ಸವರಿ ನೆಟಿಗೆ ತೆಗೆದಳು!! ದೃಷ್ಟಿ-ಸೃಷ್ಟಿ  "ಮಾಂಸಾಹಾರಗಳನ್ನ ಯಾರು ಕೊಟ್ಟರೂ ತಿನ್ನಬೇಡ. ಎಲ್ಲಿಯೂ ತಿನ್ನಬೇಡ. ಅದು ನಮ್ಮ ಮನೆ ದೇವರಿಗೆ … Read more

ಮಳೆಯಲ್ಲಿ ಇಳೆಯ ತೊರೆದವಳು: ರಾಮಚ೦ದ್ರ ಶೆಟ್ಟಿ

ಮಳೆ ಜೊರ್ರನೆ ಸದ್ದು ಮಾಡುತ್ತ ಕ೦ಡಕ೦ಡಲ್ಲಿ ಬೀಳತೊಡಗಿತ್ತು….ಎಲ್ಲೆಲ್ಲು ಮಳೆ ಧಾರಾಕಾರ ಮಳೆ….ಅಲ್ಲಿ ಗಾಳಿಯಲ್ಲಿ ತೇಲಾಡುತ್ತ ಓಲಾಡುತ್ತ ನಶೆಯೇರಿದ ಕುಡುಕನ೦ತೆ ಬುವಿಯ ದಾರಿ ಹಿಡಿದು ಅವುಗಳು.. ಮಳೆಹನಿಗಳು ನಡೆದುಬರುತ್ತಿರುವ ನೋಟ ಮೋಹಕವಾಗಿತ್ತು..ಮಲೆನಾಡಿನಲ್ಲಿ ಈ ತರದ ಮಳೆ, ಮಳೆಗಾಲದಲ್ಲಿನ ಈ ತರದ ವಾತಾವರಣ ಹೊಸದೆ..? ಮನದಲ್ಲೆ ಕೇಳಿಕೊ೦ಡನವನು..ಈ ಪ್ರಶ್ನೆಯು ಹೊಸದಲ್ಲ..ಕಳೆದು ಹೋದ ಮಳೆಗಾಲದಲ್ಲೆಲ್ಲ ಮೂಡಿದ್ದು೦ಟು. !ಎದುರಿನ ಆಗು೦ಬೆ ಬೆಟ್ಟ ತನ್ನ ಅಗಾಧವಾದ ರೂಪರಾಶಿಯನ್ನು ಮಳೆಯ ಹಿ೦ದೆ ಮರೆಮಾಚಿದ್ದು ಅಸ್ಪಷ್ಟತೆಯ ದೃಷ್ಟಿ ನೋಟದ ಮೂಲಕ ಅರಿವಿಗೆ  ಬರುತ್ತಿದೆ..ನಿನ್ನೆ ಆಗು೦ಬೆಯ ರಸ್ತೆಯಲ್ಲಿ ದೊಡ್ಡ … Read more

ಮೂವರ ಕವಿತೆಗಳು: ಹನುಮಂತ ಹಾಲಿಗೇರಿ, ನಾಗರಾಜ್ ಹರಪನಹಳ್ಳಿ, ಅಕ್ಷತಾ ಕೃಷ್ಣಮೂರ್ತಿ

ಮತ್ತೊಂದು ಗೋಮುಖ ಓ ಜನರೆ ನನಗೂ ಬಯಕೆಗಳಿವೆ, ಬಯಕೆ ಬೆಂಕಿಯ ಬೇಗೆ ತಾಳಲಾರೆ,  ಒಮ್ಮೆ ಅನುಭವಿಸಲು ಬಿಡಿ ನಿಮಗೆ ದಮ್ಮಯ್ಯ ಅಂತಿನಿ   ಅನ್ನದೆ ವಿಧಿಯಿಲ್ಲ, ಪ್ರತಿಭಟನೆಯ ದಾರಿ ಕಾಣದ, ಮತಿ ಇರದ ಮಾತು ಬಾರದ, ದನ ನಾನು ಹುಟ್ಟಿದಾಗ ತಾಯಿ ಕೆಚ್ಚಲಿಗೆ ಬಾಯಿ ಹಾಕಿದರೆ ಜಗ್ಗಿ ಕಟ್ಟಿದಿರಿ ತೊರೆ ಬಿಟ್ಟ  ತಾಯ ಕೆಚ್ಚಲ ಬಕೇಟಿಗೆ ಬಸಿದಿರಿ ಮುಸು ಮುಸು ಮುಸುಗುಟ್ಟಿ ಮೌನವಾದಳು ನನ್ನ ಮೂಕ ತಾಯಿ ನನ್ನ ಪಾಲದು ನನಗೆ ಕೊಡಿ ಎಂದು ಹಕ್ಕಿನ ಮಾತಾಡಿಲಿಲ್ಲ … Read more