ಆಕಾಲಿಕ ಮರಣನ್ನಪ್ಪಿದ ಸಾಹಿತಿ ಶ್ರೀಯುತ ರವಿಮುರ್ನಾಡುರವರ ಕುಟುಂಬಕ್ಕೆ ಅರ್ಥಿಕ ಸಹಾಯದ ಕೋರಿಕೆ

  ಆತ್ಮೀಯರೇ , ಕಳೆದ 27 ಮಾರ್ಚ್ 2013 ರಂದು ಹಠಾತ್ ನಿಧನರಾದ ಕವಿ, ಲೇಖಕ ರವಿ ಮೂರ್ನಾಡ್ ಅವರು ಭಾರತಕ್ಕೆ ಬಂದು ನೆಲೆಸುವ ಕನಸು ಕೊನೆಗೂ ನನಸಾಗಲೇ ಇಲ್ಲ. ಇದೇ ಜೂನ್ ನಂತರ ಭಾರತಕ್ಕೆ ಬಂದು ನೆಲೆಸುವ ಇರಾದೆಯನ್ನು ತನ್ನ ಹಲವು ಆತ್ಮೀಯರೊಂದಿಗೆ ಹಂಚಿಕೊಂಡಿದ್ದ ರವಿ ತಾಯ್ನಾಡ ನೆಲವ ಮತ್ತೆ ತಲುಪುವ ಋಣವನ್ನು ಕಾಣದೇ ದೂರದ ಕ್ಯಾಮರೂನಿನಲ್ಲಿ ಅಸ್ತಂಗತರಾಗಿದ್ದು ವಿಪರ್ಯಾಸ, ವಿಧಿಯಾಟ. ತೀವ್ರ ಬಡತನದಲ್ಲಿದ್ದ ಕುಟುಂಬಕ್ಕೆ ಅವರೊಬ್ಬರೇ ಅಧಾರಸ್ತಂಭವಾಗಿದ್ದರು . ಪುಟ್ಟ ಕುಟುಂಬವೊಂದನ್ನು ಸಾಕಿ ಸಲಹುತ್ತಿದ್ದ … Read more

ಕವಲುದಾರಿ: ಹರ್ಷ ಮೂರ್ತಿ

  ಸಂಜೆಯ ಜಿಟಿಪಿಟಿ ಮಳೆ ಹನಿಯುತ್ತಿತ್ತು. ರಸ್ತೆಯ ಗುಂಡಿಗಳೆಲ್ಲ ನೀರು ತುಂಬಿ ಸಮೃದ್ಧವಾಗಿದ್ದವು, ಅವು ಮೋಟಾರು ವಾಹನಗಳ ಬರುವಿಕೆಗೆ ಕಾಯುತ್ತ ಕೆಸರೆರೆಚಾಟಕ್ಕೆ ಸನ್ನದ್ಧವಾಗಿದ್ದವು. ಗಿಡಮರಗಳೆಲ್ಲವೂ ಮಳೆಯಲ್ಲಿ ತೊಯ್ದು ಹಸುರಿನಿಂದ ಕಂಗೊಳಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ಬಹಳ ವಿರಳವಾಗಿತ್ತು. ಅಲ್ಲೊಂದು ಓಬಿರಾಯನ ಕಾಲದ ಮುರುಕಲು ಬಸ್ ಸ್ಟಾಪ್. ಊರಿಗೆ ಹೊಸ ರಸ್ತೆ ಬಂದ ಮೇಲೆ ಈ ರಸ್ತೆಯಲ್ಲಿ ಊರಿನವರ ಕೆಲ ವಾಹನಗಳ ಬಿಟ್ಟರೆ ಬಸ್ಸುಗಳಾವುವೂ ಓಡುತ್ತಿರಲಿಲ್ಲ. ಹೀಗಾಗಿ ಆ ಬಸ್ ಸ್ಟಾಪನ್ನು ಕೇಳುವರಾರೂ ಇಲ್ಲದೆ ಅವಸಾನದತ್ತ ಸಾಗಿತ್ತು. ಅದೇ ಬಸ್ … Read more

ಪಂಜು ಚುಟುಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಮಂಜುನಾಥ್ ಪಿ. ಅವರ ಹನಿಗವಿತೆಗಳು

ಖುಷಿ ಸಂಜೆ ಸೂರ್ಯನ ಹೆಣದ ಮೆರವಣಿಗೆ ಸಾಗುವಾಗ ಬಾನ ಬೀದಿಯೊಳಗೆ ದುಡಿವ ಜನರ ಗೂಡುಗಳ ದೀಪಗಳಿಗೆ ಉಸಿರು ದಕ್ಕಿ ಪಿಸುಗುಟ್ಟಿ ನಸುನಗುತಾವೆ ಒಳಗೊಳಗೆ.  ಬದುಕು  ದುಡಿಯುವ ಜನರ ಸುಖವು ಕನಸಿನ ತರಹದ್ದು; ಸಂಕಟಗಳ ನತದೃಷ್ಟ ಬದುಕುಗಳಿಗೋ ಹಸಿವಿನ ಸರಹದ್ದು. ಸಹನೆ  ದುಡಿವ ಜನರನ್ನು ನೀವು ಬಿರುಬಿಸಿಲ ಬೆಂಕಿಯಲ್ಲಿ ದಹಿಸಿದರೂ ಸಹಿಸುತ್ತಾರೆ; ಮುಂದೊಮ್ಮೆ  ನೀವೇ ಸುರಿಸುವ ಪ್ರೀತಿ ಮಳೆಗೆ ತೆರೆದುಕೊಳ್ಳುವ ನೆಲವೇ ಆಗುತ್ತಾರೆ! ಸ್ಪಷ್ಟ ಓ ಸೂರ್ಯ, ದುಡಿವ ಜನರ ನೆತ್ತಿಯ ಸುಡುವುದೆಂದರೆ ಯಾಕೆ ನಿನಗೆ ಇಷ್ಟ? ನೀನು … Read more

ಬೆಂಕಿಗೆ ಕೈ ಹಾಕಬಾರದು ಸುಡುತ್ತದೆ ಅಂತ ನಾವಂದರೆ…: ಡಾ. ಗವಿ ಸ್ವಾಮಿ

  ಹಿರಿಯ ಮಿತ್ರರಾದ ಡಾಕ್ಟರ್ .ನಟರಾಜು SM ರವರ ಪುಸ್ತಕ ‘ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ ಮತ್ತು ಖುಷಿ ನಗರಿಯ ಅವನ ನಲ್ಮೆಯ ಗೆಳತಿಯೂ ‘ ವನ್ನು ಓದಿ ಮುಗಿಸಿದೆ. ಆಶ್ಚರ್ಯವಾಯಿತು ಎಂದರೆ ಸುಳ್ಳಾಗುತ್ತದೆ. ಏಕೆಂದರೆ ಅವರ ಪ್ರತಿಭೆಯ ಝಲಕನ್ನು ಕಾಲೇಜಿನಲ್ಲೇ ನೋಡಿದ್ದೆ. ಕಥೆ, ಕಾದಂಬರಿ, ಆತ್ಮಕಥೆ, ಕವಿತೆ ಇವ್ಯಾವುದರಚೌಕಟ್ಟಿಗೂ ನಿಲುಕದ ಒಂದು ಹೊಸ ಪ್ರಯೋಗ. ಗೆಳೆಯ -ಗೆಳತಿಯ ಪಾತ್ರಗಳು ಕಾಡುತ್ತವೆ. ಮಾದರಿ ಸ್ನೇಹವೆಂದರೆ ಇದೇ ಇರಬಹುದಾ ಅನಿಸುತ್ತದೆ. ಗೆಳತಿ ವಯಸ್ಸಿಗೂ ಮೀರಿದ ಜೀವನಾನುಭವನ್ನುಳ್ಳವಳು. ಗಟ್ಟಿಗಿತ್ತಿ. ಆಕೆಯ … Read more

ಸಂಬಂಧ ಸಂದೇಶಗಳ ಸಂಬಂಧ: ಪ್ರಶಸ್ತಿ ಪಿ.

    ಕಾಳಿದಾಸನ ಮೇಘಸಂದೇಶದಿಂದ ಹಿಡಿದು ಮಾಡರ್ನ್ ಚಾಟಿಂಗಿನಿಂದ ಶುರುವಾದ ಸ್ನೇಹ,ಪ್ರೇಮಗಳವರೆಗೆ ಬಂಧಗಳ ಬೆಸುಗೆಯಲ್ಲಿ ಸಂದೇಶಗಳದ್ದೊಂದು ಪಾತ್ರ ಇದ್ದೇ ಇದೆ. ಎದುರಿಗೆಷ್ಟೇ ಕಿತ್ತಾಡಿದರೂ, ಹೇಳಲಾಗದಿದ್ದರೂ , ಮಾತೇ ಬಿಟ್ಟಿದ್ದರೂ ಯಾವಾಗಲೋ ಕಳಿಸಿದ ಫಾರ್ವರ್ಡ್ ಮೆಸೇಜು ಮತ್ತೆ ಮುರಿದ ಸಂಬಂಧಗಳ ಬೆಸೆದಿದ್ದಿದೆ. ವರ್ಷಗಳವರೆಗೂ ಕಾಡದಿದ್ದವರು ಟ್ರಂಕು ಖಾಲಿ ಮಾಡುವಾಗ ಸಿಕ್ಕ ಮಾಸಿದ ಪತ್ರದಿಂದ ನೆನಪಾಗಿದ್ದಿದೆ. ವರ್ಷಗಳ ಸಾಥಿ ಬೇರ್ಪಡುವಾಗ ಕಳುಹಿಸಿದ "ಮಿಸ್ ಯೂ" ಎಂಬ ಎರಡೇ ಪದದ ಸಂದೇಶ ಎಷ್ಟೋ ಸಮಯ ಕಾಡಿ , ಅಳಿಸಿದ್ದಿದೆ. ಹಲಕಾರಣಗಳಿಂದ ಹಳಸುತ್ತಿರುವ … Read more

ಪ್ರೇಮ ಪತ್ರ: ಗಣೇಶ್ ಖರೆ

  ನವೀನ ಮೇಘನಳ ಪರಿಚಯ ಸುಮಾರು ಆರೇಳು ವರ್ಷಗಳಷ್ಟು ಹಳೆಯದು. ಕಾಲೇಜಿನಿಂದ ಹಿಡಿದು ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿದ್ದವು ಇಬ್ಬರು ಜೊತೆಗಿದ್ದು. ನಿಷ್ಕಲ್ಮಶ ಸ್ನೇಹ ಇಬ್ಬರದು. ಇವರಿಬ್ಬರ ಸ್ನೇಹ ನೋಡಿ ಅಸೂಯೆಪಡದವರಿಲ್ಲ. ನಸುಗೆಂಪು ಬಣ್ಣದ ಉತ್ತಮ ಮೈಕಟ್ಟಿನ ಮಧ್ಯಮ ವರ್ಗದ ಸೀದಾ ಸಾದಾ ಹುಡುಗ ನವೀನ, ಹಾಲ್ಗೆನ್ನೆಯ ಎಲ್ಲರ ನೋಟವನ್ನ ಒಮ್ಮೆಲೇ ತನ್ನೆಡೆಗೆ ಸೆಳೆಯುವ ಶ್ರೀಮಂತರ ಮನೆಯ ಹುಡುಗಿ ಮೇಘನ, ಆದರೂ ಮನೆಯ ಶ್ರೀಮಂತಿಕೆ ಅವಳ ಸ್ವಭಾವದಲ್ಲಿರಲಿಲ್ಲ, ಬಹುಷಃ ಇದೆ ಕಾರಣವಿರಬೇಕು ಇವರಿಬ್ಬರ ಸ್ನೇಹ ಇಷ್ಟು ಗಟ್ಟಿಯಾಗಿರಲು. … Read more

ಬೆಳ್ಳಿಮೋಡ: ವಾಸುಕಿ ರಾಘವನ್

  ನಾನು ಪುಟ್ಟಣ್ಣ ಕಣಗಾಲ್ ಅವರ ಸಾಕಷ್ಟು ಚಿತ್ರಗಳನ್ನ ನೋಡಿಲ್ಲ. ನೋಡಿರುವ ಬಹಳಷ್ಟು ಚಿತ್ರಗಳು ಚಿಕ್ಕವನಾಗಿದ್ದಾಗ, ದೂರದರ್ಶನದಲ್ಲಿ ಪ್ರಸಾರ ಆಗ್ತಿದ್ದ ಕಾಲದಲ್ಲಿ, ಜಾಹೀರಾತುಗಳ ನಡುವೆ. ಚಲನಚಿತ್ರ ಒಂದು ಕಲೆ ಎಂಬ ಗ್ರಹಿಕೆ ಶುರು ಆದಮೇಲೆ ನೋಡಿರೋ ಚಿತ್ರಗಳಲ್ಲಿ ಕಾರಣಾಂತರಗಳಿಂದ ಕನ್ನಡ ಚಿತ್ರಗಳ ಸಂಖ್ಯೆ ಕಮ್ಮಿ ಅಂತಾನೆ ಹೇಳ್ಬೇಕು. ಈ ವಿಷಯದ ಬಗ್ಗೆ ನನಗೆ ಬೇಸರ ಇದೆ ಕೂಡ.   ಇದನ್ನು ಬದಲಿಸೋ ಪ್ರಯತ್ನ ಮಾಡ್ತಿದೀನಿ ಇತ್ತೀಚಿಗೆ. ಈ ಪಯಣದಲ್ಲಿ ನನಗೆ ಸಿಕ್ಕ ಪುಟ್ಟಣ್ಣರ ಚಿತ್ರ “ಬೆಳ್ಳಿಮೋಡ”. 1966ರಲ್ಲಿ ಬಿಡುಗಡೆಯಾದ … Read more

ಇಬ್ಬರ ಕವಿತೆಗಳು: ನರಹರಿ ಭಟ್ಟ, ವೈ.ಬಿ. ಹಾಲಬಾವಿ

  ದೂರದೂರಿನ ಚಿಂತೆ…. ಏನಂತರಾಳಗಳು ಏನಗ್ನಿಜ್ವಾಲೆಗಳು ದಾಹಗಳ ಗಾಳಗಳ ನರ್ತನೋನ್ಮಾದಗಳು ಅರ್ಧಸತ್ಯದ ಮೆಲಕು ವಿಶ್ರಾಂತಿ ಬೇಡದೆಯೆ ಪೂರ್ಣಸತ್ಯದ ತಾಣ ಹುಡುಕುತಿಹುದು||೧||   ದೇಹಪಂಜರ ತೊರೆವ ಪ್ರಾಣಪಕ್ಷಿಯ ತವಕ ಹುಟ್ಟುಸಾವಿನಗುಟ್ಟ ಹೊರಗೆಳೆವಯತ್ನ ಒರೆಯಿಂದ ಹೊರಗೆಳೆದ ಕತ್ತಿಯಲಗಿನ ತೆರದಿ ಚರ್ಮಚೀಲದ ಹಂಗು ತೊರೆದು ಹೊರಟಂತೆ||೨||   ಬದುಕು ಭಾವನೆಯೆಲ್ಲ ಕರಗಿ ಸೋರಿದೆ ಹೃದಯ ಕಣ್ಪನಿಯು ಕಾರಣವ ಹುಡುಕ ಹೊರಟಿದೆ ಚೆಲುವ ಸುಪ್ತ ಮನಸಿನಭಾವ ಮುಪ್ಪಾಗಿ ಹಿಂಜುತಿದೆ ಉಪ್ಪೆಲ್ಲ ಕರಗಿ ಗಡಸು ನೀರಾದಂತೆ||೩||   ಅನುಭವದ ಜಾಳೆಲ್ಲ ಕುಸಿದು ಜಾರಿದೆ ಧರೆಗೆ … Read more

ಜಾತಿವ್ಯವಸ್ಥೆಯ ಕಪ್ಪುಕನ್ನಡಕ: ಅನುರಾಧ ಪಿ. ಸಾಮಗ

ಹಲ ದಿನಗಳ ಹಿಂದೆ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಲೇಖನ ಕಣ್ಸೆಳೆದಿತ್ತು. ಅದು ಪುರಂದರದಾಸರನ್ನು ಕರ್ಣಾಟಕ ಸಂಗೀತದ ಪಿತಾಮಹನೆಂದು ಕರೆಯುವುದರ ವಿರುದ್ಧ ಎತ್ತಿದ ದನಿಯಾಗಿತ್ತು. ಅಲ್ಲಿ ಸಂಗೀತಕ್ಕವರ ಕೊಡುಗೆಯ ಪ್ರಮಾಣವಾಗಲಿ, ಕರ್ಣಾಟಕ ಸಂಗೀತದ ಆ ತಲೆಮಾರುಗಳಿಂದ ಈ ತಲೆಮಾರಿನವರೆಗಿನ ಸಂವಹನದಲ್ಲಿ ಅವರ ಕೆಲಸದ ಪಾತ್ರವೇನು ಎಂಬುದಾಗಲಿ ಲೇಖಕರಿಗೆ ಪ್ರಸ್ತುತವೆನಿಸದೆ, ಪುರಂದರರು ಕೀಳ್ಜಾತಿಯೆನುವ ವ್ಯವಸ್ಥೆಯ ಸದಸ್ಯರಾಗಿರದೆ ಇದ್ದು, ಒಂದು ಸಂಸ್ಕೃತಿಯ ಪಿತಾಮಹನೆನಿಸಿಕೊಂಡದ್ದು ಅವರನ್ನು ಕಾಡಿದಂತಿತ್ತು. ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾದ ಪುರಂದರರಿಗೊಲಿಯದೆ ಕೃಷ್ಣ ಕನಕನಿಗೊಲಿದಿದ್ದ ಎಂಬ ಪದಗಳೇಕೋ ಬಹಳ ಕಾಡುತ್ತಲೇ … Read more

ಏನೆಂದು ಬರೆಯಲಿ, ಬಾರದ ಅಕ್ಷರ ಎದೆ ಗಾಳಕ್ಕೆ ಸಿಕ್ಕಿ ಮೇಲೆ ಬರದ “ಮೀನು”: ಸ್ಫೂರ್ತಿ ಗೌಡ

ಹೆಣ್ಣು ಒಂದು ಅಕ್ಷರ ಬರೆದರೆ ಅದರ ಹಿಂದೆ ಅದೆಂತದೋ ಇತಿಹಾಸ ಕಂಪನ.. ಪಾಂಡವರು ಮಾಡಿದ ರಾಜಸೂಯದಂತಹ ತನ್ಮಯತೆ…ಹೆಣ್ಣೆಂದರೆ ದೇಹವಲ್ಲ, ನಿನ್ನ ಚೆಲ್ಲಾಟಕ್ಕೆ ಕಿಬ್ಬೊಟ್ಟೆ ಕೊಟ್ಟು ಕರಗಿಸುವವಳಲ್ಲ, ನಿನ್ನ ಅಂತಃಕರಣಕ್ಕೆ ಕುಣಿದು ತಣಿಸುವ ರಮಣಿಯಲ್ಲ, ನಿನ್ನ ದುಖಃಕ್ಕೆ ಎದೆ ಒಡ್ಡಿ ತಲೆ ಸವರುವ ಮುದ್ದಲ್ಲ, ಹೆಣ್ಣು… ತಾಳಿಕಟ್ಟಿದ ಗಂಡಿನ ಬಂಧ ಬಿಟ್ಟು ಚೆನ್ನಮಲ್ಲಿಕಾರ್ಜುನೇ ಗಂಡನೆಂದು ಪೂಜಿಸಿದ ಮಹಾದೇವಿ, ಕಾಣದ ಗೋಕುಲ ನಂದನನಿಗೆ ಹಾತೊರೆದು ತನ್ನ ತನವೆಲ್ಲಾ ಸಮರ್ಪಿಸಿದ ಮೀರಾ, ಭೋಗ ಸುಖವ ಬಿಟ್ಟು ಓಡಿ ಬಂದು ಲಿಂಗಕ್ಕೆ ಶರಣು … Read more

ಡ್ರೀಮ್ ಲೈಫ್ ನ ಡ್ರಿಲ್ ಪಾಸಿಟಿವ್ ಆಗಿರಲಿ: ವೀಣಾ ಭಟ್ ಯಲ್ಲಾಪುರ

ಕಾಲ ಬದಲಾಗಿದೆ. ನಿಜವೇ? ಹೌದೆ? ಬದಲಾದದ್ದು ಕಾಲವೇ? ನಮ್ಮಗಡಿಯಾರವೇ? ಅಥವಾ ನಮ್ಮ ಮನಸ್ಸೇ? ನೋಡುವ ದ್ರಷ್ಟಿಕೋನವೇ ? ವೈಚಾರಿಕತೆಯ ಪರಿಯೇ? ಯಾವುದು ಹಾಗಾದರೆ??! ಕನಸುಗಳೂ ಬದಲಾಗುತ್ತಿರುತ್ತವೆ ಕಾಮನಬಿಲ್ಲಿನಂತೆ. ಹೇಗೆ ಕಾಮನಬಿಲ್ಲು ಮೋಡ, ಮಳೆ, ಸೂರ್ಯಕಿರಣ, ಗಾಳಿಯ ಚಾರಣಗಳಿಗನುಗುಣವಾಗಿ ಆಗಸದಲ್ಲಿ ಕಮಾನು ಕಟ್ಟುವುದೋ ಹಾಗೆ ನಮ್ಮ ಆಧ್ಯತೆ, ಅವಶ್ಯಕತೆಗಳಿಗನುಸಾರವಾಗಿ ಕನಸುಗಳನ್ನು ಕಾಣುತ್ತೇವೆ. ಕಿರಿಯರ ಮನಸ್ಸಂತೂ ಚಂಚಲ. ಟೀನೇಜ್ ಮಧುರ ಯಾತನೆಯ ಮರ್ಕಟ. ಮದ್ಯವಯಸ್ಸು ಸಂಸಾರ-ಸಂತೃಪ್ತಿ ಹೊಂದಿಸಲು ಜಂಜಾಟ. ಲಿಟ್ಲ್ ಪಾಂಡವಾಸ್, ಲಿಟ್ಲ್ ಕೌರವಾಸ್ ಗಳ ಚಕಮಕಿಯ ಚೆಲ್ಲಾಟ, ಸುತ್ತಮುತ್ತ ಭಾಷಣ-ಕೂಟಗಳು, ಫ್ಲೆಕ್ಸ್ , ಬಂಟಿಂಗ್ಸ್ , ಬ್ಯಾನರ್ , … Read more