ಮೂರು ಕವಿತೆಗಳು: ಚಲುವೇಗೌಡ ದೊಡ್ಡಹಳ್ಳಿ

ಉಪಕಾರಿಯಾಗು ಇರುವಂತಿದ್ದರೆ ತೆಂಗಿನ ಮರದಂತಿರುಬಿಸಲಲಿ ನೆರಳಾಗಿ ದೇವರ ಪೂಜೆಗೆ ಕಾಯಾಗಿಬಾಯಾರಿದವರಿಗೆ ಎಳನೀರಾಗಿಭುವಿಯ ಮೇಲಿನ ಕಲ್ಪವೃಕ್ಷವಾಗಿ… ಮನೆಯ ಮುಂದೆ ಚಪ್ಪರವಾಗಿಅನ್ನ ಮಾಡಲು ಕಟ್ಟಿಗೆಯಾಗಿಕಸಗುಡಿಸುವ ಪೊರಕೆಯಾಗಿನೆತ್ತಿಗೆ ಕೊಬ್ಬರಿ ಎಣ್ಣೆಯಾಗಿ… ಮನೆ ಮೇಲಣ ಚಾವಣಿಯಾಗಿಮನೆ ಭಾರ ಹೊರುವ ತೊಲೆಯಾಗಿಮಲಗುವರಿಗೆ ಸೋಗೆ ಹಾಸಾಗಿಶುಭ ಶಾಸ್ತ್ರಕೆ ಕೊಬ್ಬರಿಯಾಗಿ… ಹುಟ್ಟಿದರೆ ಹಸುವಿನಂತಾಗುಹಸಿದ ಮಕ್ಕಳಿಗೆ ಹಾಲಾಗಿಧಣಿದವರಿಗೆ ಮಜ್ಜಿಗೆಯಾಗಿಊಟಕ್ಕೆ ತುಪ್ಪವಾಗಿ ಇಳೆಯೊಳಗೆ ಕಾಮಧೇನುವಾಗಿ… ಹೊಲಕ್ಕೆ ಗೊಬ್ಬರವಾಗಿಅನ್ನದಾತರಿಗೆ ಬೆನ್ನೆಲುಬಾಗಿಪ್ರಥಮ ಪೂಜೆಗೆ ಇಡುವ ಸಗಣಿಯಾಗಿಪವಿತ್ರವಾದ ಗೋಮೂತ್ರವಾಗಿ… ಮನೆ ಮುಂದೆ ಸಾರಿಸುವ ಸಗಣಿಯಾಗಿದೇವರ ಅಭಿಷೇಕಕೆ ಹಾಲು-ಮೊಸರಾಗಿಜಗಕೆಲ್ಲ ನೀನೆ ಗೋಮಾತೆಯಾಗಿನೀನಿರುವೆ ಜಗದೊಳಗೆ ಉಪಕಾರಿಯಾಗಿ… ನೀನಾರಿಗಾದೆಯೋ … Read more

ನಾಲ್ಕು ಕವಿತೆಗಳು: ಜಹಾನ್ ಆರಾ ಕೋಳೂರು

ನನಗೂ ಹೇಳುವುದು ಬಹಳ ಇತ್ತು ಅಂದು ಶ್ರೀರಂಗ ಪಟ್ಟಣದ ವೇದಿಕೆಯ ಮೇಲೆಸೂಟು ಬೂಟಿನ ಠೀವಿನಲ್ಲಿ ಕುಳಿತ ನಿಸಾರ್ನನಗೆ ನನ್ನ ನೆಚ್ಚಿನ ಪದ್ಯದ ಕವಿಯಷ್ಟೆ ಜೋಗದ ಝರಿಗಳ ಮುಂದೆ ನಿಂತಾಗಲೆಲ್ಲಅದರ ಹನಿಗಳು ಮುಖಕ್ಕೆ ಚಿಮ್ಮುತ್ತಿದಾಗಲೆಲ್ಲಜೊತೆಯಲ್ಲಿ ಇಲ್ಲೇ ಕುಳಿತು ಮಾತಾಡಬೇಕೆಂಬ ಹಂಬಲವೇನೋ ಇತ್ತು. ಕಾಲಕ್ಕೆ ಕಾದೆಕಾಲ ಅವಕಾಶ ನೀಡಲೇ ಇಲ್ಲ ಶಿಲುಬೆ ಏರಿದವನು ನಿನ್ನ ಕಾಡಿದಂತೆನನಗೂ ಕಾಡಿದ ನಿನ್ನ ಪದಗಳ ಮೂಲಕ ಸಂಜೆ ಐದರ ಮಳೆ ಇರಬೇಕಿತ್ತುಲಾಲ್ ಬಾಗ್ನಲ್ಲಿ ಸ್ವಲ್ಪ ದೂರ ನಡೆದುನಾನು ನಿನ್ನಲ್ಲಿ ಹೇಳುವುದು ಬಹಳ ಇತ್ತು ಮನಸ್ಸು … Read more

ಪಂಜು ಕಾವ್ಯಧಾರೆ

ಶಕ್ತಿ ಇಳಿದೊಮ್ಮೆ ನೋಡು ಎದೆಯೊಳಗೆಪ್ರೀತಿ ಒಸರುವುದು ದನಿಯೊಳಗೆಬಿತ್ತಿದವರ್ಯಾರು ಒಲವ ಇಳೆಗೆಹೆಣ್ಣಿಲ್ಲವೆ ಹುಡುಕು ನಿನ್ನೊಳಗೆ?! ತಾಯಾಗಿ ಹಾಲನು ಉಣಿಸಿಸೋದರಿ ಸ್ನೇಹವ ಸೃಜಿಸಿಮಡದಿ ಅಕ್ಕರೆಯಲಿ ರಮಿಸಿನೀನು ಗೆಲುವಾದೆ ಬಯಸಿ!! ಗುರುತಿರದಂತೆ ನೀ ನಟಿಸದಿರುಪಡೆದ ಕರುಣೆಯ ನೆನೆಯುತಿರುಇಂದಿಗೆ ನಾಳೆಗೆ ಮುನಿಯದಿರುಶಕ್ತಿಯಿಂದ ಬೆಳಕು ಕಡೆಗಣಿಸದಿರು!! ಆಕೆಯಿರದೆ ನೀನು ಶೂನ್ಯಹರಸಿ ಕೈಹಿಡಿದರೆ ಮಾನ್ಯಪ್ರೇಮ ಕಡಲು ಅನನ್ಯತೇಲಿದಾಗ ಬದುಕು ಧನ್ಯ.. -ನಿರಂಜನ ಕೆ ನಾಯಕ ಮಗಳಾಗಿ ಬೇಡವಾದೆನೇ…? ಹೆಣ್ಣಿನ ಜನುಮವೇಕೆ ಈ ಭೂಮಿಮ್ಯಾಲ,ಒಡಲ ಬಗೆದು ಕಿಚ್ಚತ್ತು ಉರಿಯುವಜ್ವಾಲೆಯಲಿ ತೇಲಾಡುವಳು ತನ್ನ ಬದುಕಿನಾಗ,ಕಣ್ತೆರೆದು ನೋಡುವ ಮುನ್ನವೇ ಕ್ಷೀಣಿಸುವಳು … Read more

ಪಂಜು ಕಾವ್ಯಧಾರೆ

ತೋಳಗಳು ಅಳುತ್ತಿದೆ ಪುಟ್ಟ ಕಂದಎತ್ತಿಕೊಳ್ಳುವವರಿಲ್ಲದೇಕೆಸರು ಮೆತ್ತಿದೆ ಮೈಗೆ ಹೆಸರು ಭಾರತಿ ತೋಳಗಳು ಶುಭ್ರ ಬಟ್ಟೆ ತೊಟ್ಟುನಗುವಿನಲಂಕಾರದ ಬೊಟ್ಟನ್ನಿಟ್ಟುಗರತಿಯಂತೆ ಕೈ ಬೀಸುತ್ತಿವೆತಬ್ಬಲಿಯಾದಳು ಭಾರತಿ ತಬ್ಬುವ ತವಕದಲ್ಲಿಪಿತೂರಿಯ ಬಾಕನ್ನು ಅಡಗಿಸಿಟ್ಟಿಹರುಕೆದರಿದ ಕೇಶರಾಶಿಯ ಹಿಡಿದುಗಹಗಹಿಸುತಿಹ ತೋಳಗಳದ್ದು ಆತ್ಮರತಿ ಅಂಗಾಂಗ ಊನ ಮಾಡಿದವುಮುದ್ದು ಭಾರತಿ ಈಗ ಅಂಗವಿಕಲೆತೋಳಗಳ ಸಾಮ್ರಾಜ್ಯದಲ್ಲಿದಾರಿಗಾಣದೇ ನಿಂತಿಹ ಅಬಲೆ ಎದೆಯ ತೋಟದಲ್ಲಿ ಮಾತುಗಳ ಬೆಳೆಯಿಲ್ಲಬೇಡದ ಕಳೆ ಕಸ ಅಡ್ಡಾದಿಡ್ಡಿ ಬೆಳೆದ ಆಕ್ರೋಶತೋಳಗಳ ತೋಳ್ಬಲ ಹೆಚ್ಚಾಗಿದೆಊಳಿಡುತ್ತಿವೆ ಭಾರತಿಯ ಕರುಳ ಬಗೆದು ಏನು ಮಾಡಬಲ್ಲಳು ಅವಳುನಾಲಗೆಯ ಹೊರಗೆಳೆದಿವೆಕೈಕಾಲುಗಳ ಮುರಿದಿವೆತೋಳಗಳ ಕುಯುಕ್ತಿಗೆ ಎಲ್ಲೆಗಳುಂಟೇ!? ತಂದೆ … Read more

ಮೂರು ಕವನಗಳು: ಸುಮತಿ‌ ಕೃಷ್ಣಮೂರ್ತಿ

ಸಮರ ಮಿಣುಕು ನಕ್ಷತ್ರಗಳ ಒಡ್ಡೋಲಗರಾಕೇಂದು ಆಸ್ಥಾನದಲಿ ಮಹಾ ಕಾಳಗ ಹೆಚ್ಚು ಹೊಳೆಯುವ ಚುಕ್ಕಿ ಯಾವುದೆಂದುಬಾನ್ ಕಡಲ ಹೊಳೆ ಮುತ್ತು ತಾನೇ ಎಂದು ಕೋಟಿ ಕೋಟಿ ತೇಜ ಪುಂಜಗಳಿಗೆಹರಿಯುತಿದೆ ಅಪರಿಮಿತ ಬೆಳಕ ಬುಗ್ಗೆ ಸುಧಾಂಶುವಿನ ಸ್ನಿಗ್ಧ ಸೊದೆಯ ಕುಡಿದುಉನ್ಮತ್ತ ತಾರೆಗಳು ಮನದುಂಬಿ ಕುಣಿದು ಇರಳೂರ ಪ್ರಜೆಗಳಿಗೆ ಹೊನಲು ಹಬ್ಬಸಜ್ಜುಗೊಂಡಿದೆ ಇಂದು ಹುಣ್ಣಿಮೆಯ ದಿಬ್ಬ ಕಾತರದಿ ಕೈ ಕಟ್ಟಿ ಕಾಯುತಿರುವಶಾಮನ ಮನದಲ್ಲಿ ಪ್ರೇಮ ಕಲರವ ಬೆದರುತ್ತ ಬೆವರುತ್ತಾ ಬಂದ ನಲ್ಲೆವಿರಹ ಬೇಗೆಯಲಿ ನರಳಿತ್ತು ಮುಡಿದ ಮಲ್ಲೆ ಯಮುನೆಗೂ ವಿಸ್ತಾರ ಬೆಳದಿಂಗಳುನಾಚುತಲಿ … Read more

ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಪದ್ಯಗಳು

(೧)ಮುಚ್ಚಿ ನಿಮ್ಮ ಒಡಕು ಬಾಯಿಬೆದರಿಬಿಟ್ಟಾನು ಮುಗ್ಧ ಹೃದಯಿಕೆಕ್ಕರಿಸುವ ನೋಟ ಬೂದಿಯಾಗುವ ಕೆಂಡಹೊಂಗನಸಿನ ಮನೆಯ ಕಟ್ಟಲುತೊಗಲೊಂದೇ ತೊಟ್ಟಿಲು ಕತೂಹಲದ ರೆಪ್ಪೆಯಗಲಿಸಿಕಲಿವ ತುಡಿತದೆ ನಗೆಯರಳಿಸಿಕುಳಿತ ಭಂಗಿಯ ನೋಡಿಮೋಡಿ ಮಾಡುವ ತೊದಲು ನುಡಿಭವ್ಯಲೋಕಕೆ ಮುನ್ನುಡಿ ಎತ್ತೆತ್ತಲೋ ಸಾಗುತಿಹವು ಕನಸುಗಳುಥಟ್ಟನೆ ಮೈದಳೆದು ಮುಂದೆ ಕುಳಿತಿವೆಮಂಡಿಯೂರಿ; ಎದೆಯ ಕದವ ತೆರೆತೆರೆದುತುಂಬಿ ತುಳುಕಲಿ ಸಿಹಿನುಡಿಯ ಹೊಂದೆರೆಸಾಕಿನ್ನು ಅರೆಬರೆ ಮಾತುಗಳು ಬಿತ್ತಿಬಾರದೇ ನಲ್ನುಡಿ ಇವನು ಅವನಲ್ಲ ಅವನಂತೆ ಇವನಿಲ್ಲಇವನಂತೆ ಅವನಿಲ್ಲ ಅವರಿವರಂತೆ ಇರಬೇಕಿಲ್ಲಅವನೊಲ್ಲೆನೆಂದದ್ದು ಇವನೇನು ಅರಿಯಬೇಕಿಲ್ಲಚಿಗುರುವ ಬಳ್ಳಿಯಿದು ಪಸರಿಸಲಿ ನವಕಂಪು ತನ್ನೊಡಲಲ್ಲಿ. ಒಂದು ಲೋಟದೊಳಗೆ ಹೃದಯಮತ್ತೊಂದರಲ್ಲಿ ಎದೆಯ … Read more

ಪಂಜು ಕಾವ್ಯಧಾರೆ

ಬಾಳ ಹಣತೆ ಸುಳ್ಳು ಸತ್ಯದಾಟದಲ್ಲಿಶೂನ್ಯವಾಯಿತೇ ಬದುಕಿಲ್ಲಿ…..ಅನ್ಯಾಯವ ಅವಮಾನವ ಸಹಿಸಿಮುಖವಾಡದ ನಾಟಕವ ದಿಟ್ಟಿಸಿ….ಹಣತೆಯೊಂದನ್ನು ಹಚ್ಚಬೇಕಿದೆಇರಿಸು ಮುರಿಸಿನ ವ್ಯಥೆಯಲ್ಲಿ….ದಾರಿಯ ದೂರ ಸಹಿಸನೆಂದರೆನೆರಳ ಹಂಗು ಬಿಡುವುದೇ….ಯಾರದ್ದೋ ಬದುಕ ಬೆಳಕ ನಂದಿಸಿಕಗ್ಗತ್ತಲು ಎಂಬುವುರೇ……ಗುಡುಗು ಸಿಡಿಲಿನ ಆರ್ಭಟಕ್ಕೆಅಂಜದಿರೆಂದು….ಮತ್ತೆ ಮತ್ತದೇ ಹಣತೆಯಲ್ಲಿಪ್ರಕಾಶಮಾನವಾದ ಬೆಳಕು ಹೊಮ್ಮಲಿ…..ನೋವು ನಲಿವಿಗೆ ಕಾಲದಲೆಕ್ಕವಿಲ್ಲಿ…..ಅಂಧಕಾರವೇ ತುಂಬಿದ ಮನಗಳಲ್ಲಿಹೃದಯ ಜ್ಯೋತಿ ಬೆಳಗಲಿ -ರೋಹಿಣಿ ಪೂಜಾರಿ ಕೋಣಾಲು. ದೂರು… ಈ ಪದಗಳೇ ಮೊದಲಿನಂತಿಲ್ಲ..ಯಾವ ಭಾವಕ್ಕೂಹೊಂದಿಕೊಳ್ಳುವುದಿಲ್ಲಕವಿತೆಗಾಗಿ ಹಂಬಲಿಸುವ ನನ್ನಂಥವನನ್ನು ಬೆಂಬಲಿಸುವುದಿಲ್ಲ..ಅರ್ಥಕ್ಕೆ ಅಪಾರ್ಥ ಕೊಡುವ ಇವು ಪದಗಳೇ ಅಲ್ಲ ಎದೆಯೊಳಗೆ ಹದವಾಗಿ ಹುಟ್ಟುವ ಇವುಯಾರ ಕಿವಿಗೂ ಮುಟ್ಟುವುದಿಲ್ಲ..ಗಂಟಲಲ್ಲಿ ತೂರಿ … Read more

ಪಂಜು ಕಾವ್ಯಧಾರೆ

ಕನ್ನಡ ಬಳಗ ನೋಡ ಬನ್ನಿರಿ ಗೆಳೆಯರೆನಮ್ಮ ಕನ್ನಡ ಬಳಗವನುಕಸ್ತೂರಿಯ ತವರನ್ನು. . . . ವಿಕ್ರಮಾರ್ಜುನ ಸಾಹಸ ಭೀಮಅವತಾರ ತೋರಿದವು.ಪಂಚತಂತ್ರ ರಾಮಚರಿತಪುರಾಣವು ಬೆಳಗಿದವು ಪ್ರಭುವಿನ ಜೊತೆಯಲ್ಲಿ ಅಕ್ಕನುಅಣ್ಣನು ಪುಣ್ಯವಿದೇನುರೀರಗಳೆಯ ಜೊತೆಯಲಿ ಷಟ್ಟದಿಕೀರ್ತನೆ ನೃತ್ಯವ ನೋಡಿರೀ ಶ್ರೀರಾಮನ ನಾಕು ಕನಸನು ಸಣ್ಣಕಥೆಯಲಿ ಹೇಳಿದ ಮಂಕುತಿಮ್ಮಮಲ್ಲಿಗೆ ಸಂಪಿಗೆ ಬಕುಲದ ಹೂಗಳುಅರಳಿವೆ ನೋಡು ಬಾರೊ ತಮ್ಮ ಕಾಂತಿಯಿಂದ ಹೊಳೆಯುವ ಬಹುವಿಧವಾಸ್ತಿಶಿಲ್ಪದ ಚಂದವುಕಣ್ಣೆದುರಿದ್ದರು ಕಾಣದಾಗಿದೆಕವಿದಿದೆ ಕಪ್ಪು ಮೋಡವು -ಡಾ. ಶಿವಕುಮಾರ್ ಆರ್ ಕನ್ನಡಉಸಿರುಸಿರಲಿ ಹೆಸರೆಸರಲಿಹೊಸೆದಿರಲಿ ಕನ್ನಡ.ಕಸುವಾಗಲಿ ಬೆಸಗೊಳ್ಳಲಿಜಸವಾಗಲಿ ಕನ್ನಡ. ಹಸಿರಸಿರ ಸಹ್ಯಾದ್ರಿಯೇಶಿಖರ ನಿನಗೆ … Read more

ಪಂಜು ಕಾವ್ಯಧಾರೆ

ಉತ್ತರ ದಶಶಿರನಹಂಕಾರ ಮುರಿದು ಮಣ್ಣಾಗುವ ಘಳಿಗೆಹೆಬ್ಬಾಣವ ಹೂಡಿ ರಾಘವನು ಹೂಂಕರಿಸಿದ ಪರಿಗೆಅಂತರಿಕ್ಷ ಈಗ ಅಕ್ಷರಶಃ ಸ್ತಬ್ಧಮಂಡೋದರಿಯ ಎದೆಯಲನಲ ಅಬ್ಬರಿಸಿ ದಗ್ದ… ಜನಕನಂಗಳದಲಿ ಏಕೋ ನರಳುತಿದೆ ಪಾರಿಜಾತನಡೆಯುವದ ನೆನೆಸಿ ನಡುಗಿದನೆ ಆ ಜಾತವೇದ?ಮೌನವಾಗಿದೆ ಅಂಬುಧಿ ಅಂಬುಗಳ ಒಳಗಿಳಿಸಿಮೂಡಣದ ಕಣ್ಣಂಚ ಹನಿ ಎದೆಯಾಳಕಿಳಿಸಿ…. ಅದೋ ಉರುಳಿದೆ ವಿಪ್ರ ಶ್ರೇಷ್ಠನ ಶೀರ್ಷಒಂದಲ್ಲ ಎರಡಲ್ಲ ಸರಿಯಾಗಿ ಹತ್ತುಹರಿತ ರಾಮನ ಶರಕೆ ಶರಣಾದ ರಾವಣನಇಪ್ಪತ್ತು ಕಣ್ಣುಗಳಲ್ಲೂ ಗತ್ತೋ ಗತ್ತು…. ಮೆಲ್ಲ ಮೆಲ್ಲನೆ ಅಡಿಯಿಟ್ಟು ಬಂದಳಾ ಸುಮಬಾಲೆಕಣ್ಣಲ್ಲಿ ನೂರಾರು ಹೊಂಗನಸ ಮಾಲೆನಗುಮುಖದ ಒಡೆಯ ಎದುರುಗೊಳ್ಳಲೆ ಇಲ್ಲತೋಳ್ತೆರೆದು … Read more

ಪಂಜು ಕಾವ್ಯಧಾರೆ

ನನ್ನವ್ವ ಬೆವರುತ್ತಾಳೆ. . . . . . ಕೆಂಡ ಕಾರುವರಣ ಭೀಕರ ಬಿಸಿಲನ್ನು ತಲೆಗೆ ಸುತ್ತಿಕೊಂಡುಮಾಸಿದ ಸೀರೆಯಜೋಳಿಗೆಯಲಿ ಬೆತ್ತಲೆ ಮಗುವ ಮಲಗಿಸಿಜಗದ ಹೊಟ್ಟೆ ತುಂಬಿಸಲೆಂದುಭತ್ತ ನಾಟಿ ಮಾಡುವಾಗನನ್ನವ್ವ ಬೆವರುತ್ತಾಳೆಮಂಜುನಾಥನ ಮಾತಾಡಿಸಲುಮಾರಿಕಾಂಬೆಯ ಮುಂದೆ ಸೆರಗೊಡ್ಡಲುಚಾಮುಂಡಿಯ ಕಾಲುಗಳಲಿ ಬಿಕ್ಕಳಿಸಲುಮಹಾನಗರದ ಗಗನಚುಂಬಿ ಕಟ್ಟಡದಬುಡದ ಸಂದಿಯಲಿಉಸಿರಾಡಲು ಕಷ್ಟ ಪಡುತಿರುವಕರುಳ ಬಳ್ಳಿಯ ಬೆನ್ನ ಸವರಲೆಂದುತಿರುಗಾಡುವಾಗನನ್ನವ್ವ ಬೆವರುತ್ತಾಳೆತುಂಡು ಬ್ರೆಡ್ಡುಅರ್ಧ ಕಪ್ಪು ಹಾಲು ಕೊಟ್ಟುಪತ್ರಿಕೆಯಲಿ ಫೋಟೋ ಹಾಕಿಸಿಕೊಳ್ಳುವತೆರಿಗೆಗಳ್ಳರ ದುಡ್ಡಿನಲಿ ಮಾಡುವಸಮಾನತೆಯ ಕಾರ್ಯಕ್ರಮದಊಟದ ಮನೆಯಲಿಕಸ ಹೊಡೆಯುವಾಗನನ್ನವ್ವ ಬೆವರುತ್ತಾಳೆಒಂಟಿ ಚಪ್ಪಲಿಯನ್ನು ಬೀದಿಯಲಿಬಿಸಾಕುವಂತೆಬಿಟ್ಟು ಹೋದವರಮನೆ ಮುರಿಯದೆಮೂಕ ಪರದೆಗಳಹಿಂದೆ ತುಟಿ ಕಚ್ಚಿ … Read more

ಗಜಲ್ ಜುಗಲ್ ಬಂದಿ

1) ಹೈ.ತೋ ಅವರ ಗಜಲ್ ; ದಿಂಬಿನೊಳಗೆ ನಲುಗಿಹೋದ ನೋವುಗಳೆಷ್ಟೋ..ಎದೆಯೊಳಗೆ ಕಮರಿಹೋದ ಕನಸುಗಳೆಷ್ಟೋ. ಎಷ್ಟೊಂದು ಚೀತ್ಕಾರಗಳು ನಿಟ್ಟುಸಿರು ನುಂಗಿದೆಮನದೊಳಗೆ ಹಿಡಿದಿಟ್ಟ ಕಹಿ ವೇದನೆಗಳೆಷ್ಟೋ ನೋವುಂಡ ಹೃದಯ ಒಡೆದು ಹೋಗಿದೆ ಗೆಳೆಯಾಬಾಧೆ ಹೆತ್ತು ಎದೆಯ ಆವರಿಸಿದ ವಿರಹಗಳೆಷ್ಟೋ ಕತ್ತಲೆ ಚಿಮ್ಮಿ ತತ್ತರಿಸುವ ತಾರೆಗಳಿಗೆ ಕಡಿವಾಣವಿಲ್ಲಸಾವ ನೋವಿನ ಕಡು ಸಂಕಟಗಳ ಭಾವಗಳೆಷ್ಟೋ ನನ್ನದೆಯಾಳದಲ್ಲಿ ಚಿತೆಗಳ ಚಿತ್ತಾರˌ ವಿವಿಧ ಆಕಾರಹೃದಯದಲಿ ಹೆಪ್ಪಾದ ನಿಕೃಷ್ಟ ಆ ನಿಂದನೆಗಳೆಷ್ಟೋ ನಿತ್ಯ ಸೃಂಗಾರ ಚೆಲುವ ಅಲಂಕಾರ ಎಲ್ಲವೂ ಅವನಿಗಾಗಿನಿರೀಕ್ಷೆಯ ನಿರಾಶೆಯಲ್ಲಿ ಬದಲಿಸಿದ ಮಗ್ಗಲುಗಳೆಷ್ಟೋ ನನ್ನೊಳಗೆ ನನ್ನನ್ನು … Read more

ಪಂಜು ಕಾವ್ಯಧಾರೆ

ಅವಳು ಅಂಧಕಾರದಿಅನುದಿನವ ದೂಡಿದಳುಒಂದೇ ತೆರದಿತನ್ನ ಪಯಣವ ನಡೆಸಿದಳುಬಾಳಿನಲ್ಲಿ ಸುಖ ದುಃಖ ಏನೆಂದರೆಮುಗುಳ್ನಗುವಳುಎಲ್ಲವೂ ಇದ್ದು ಇಲ್ಲವೆಂಬಂತೆ….. ತನ್ನೆಲ್ಲಾ ನೋವ ಮರೆತಳುಆಸೆ ಕನಸುಗಳ ಬಚ್ಚಿಟ್ಟಳುಕಂಬನಿಯ ಹೊರಸೂಸದಂತೆಕಣ್ಣಂಚಿನಲ್ಲಿ ಇಟ್ಟವಳು….. ಮನದಲ್ಲಿ ನೂರು ವೇದನೆಮುಖದಲ್ಲಿ ಒಂದು ತೋರದೆಸಹನೆಯ ಮೂರುತಿಸದಾ ಹಸನ್ಮುಖಿಯಂತೆ….. ಆದರವಳ ಕಣ್ಣೋಟವುಸಾವಿರ ಕಥೆಗಳ ಹೇಳುತಿಹವು…..ಆಕಾಶದೆತ್ತರದ ಗುಣದವಳುಪಾತಾಳಕ್ಕದುಮಿದರು ಮುಳುಗಲಿಲ್ಲಬೆಳಗಿದಳು ತಾನಿರುವಲೆಲ್ಲ….. *ಮತ್ತೆ ಮುಂಜಾವು ತುಸು ನಸುಕಿನಲ್ಲಿ ಕೂಗುತ್ತಿದೆ ಕೋಳಿಎದ್ದೇಳಿ ಬೆಳಗಾಯಿತ್ತೆಂದು…ಹಕ್ಕಿಗಳ ಕಲರವ…ಅಂಬಾ ಎನ್ನುವ ಕೂಗು…ಕರ್ಣಗಳ ಸೆಳೆಯುತ್ತಿವೆ… ದಟ್ಟರಣ್ಯವ ಸೀಳಿತೆಂಗು ಮಾಮರಗಳನಡುವೆ ಭೂಮಿಗಿಳಿದಾಯಿತು ರವಿಕಿರಣ…ನಿನ್ನೆಯ ಕೆಲಸಕ್ಕೆ ಜೋತುಬಿದ್ದನರನಾಡಿಗಳ ಪುನಶ್ಚೇತನಗೊಳಿಸೆಮತ್ತೆ ಬಂದಿದೆ ಮುಂಜಾವು… ಘಮ ಘಮಿಸುವ … Read more

ಮೂರು ಕವನಗಳು: ದಯಾನಂದ ರೈ ಕಳ್ವಾಜೆ

“ಮೌನ ತಪ್ಪಿದ ಹಾದಿ”.. ಮೆಲ್ಲುಲಿದು ಪಾದಸರಮೌನವಾಯಿತು ಮತ್ತೆಅವಳ ಪಾದದಿ ಮಲಗಿ ಸದ್ದಿಲ್ಲದೇ…ಅವಳಿರುವ ಸೂಚನೆಗೆನಲಿವ ಗೆಜ್ಜೆಯೆ ದನಿಯುನಿಂತಲ್ಲೆ ಮೈ ಮರೆತು ಕಲ್ಲಾದಳೇಕೆ?!ಯಾರದೋ ಕಾಯುವಿಕೆಬಿಟ್ಟ ಕಿವಿ ಬಿರು ನೋಟಆಗಾಗ ಅವಳಿದಿರುಯಾರ ಕಡೆಗೇ…?ಸಹಜ ಸುಂದರಿಯವಳುನೀಳಕೇಶದ ರಾಶಿ…ಇನಿತಿಲ್ಲ ನವಯುವಗದಥಳಕು ಬಳುಕೂ…ಕಲ್ಲ ಚಪ್ಪಡಿಯಲ್ಲಿ ಬಿಮ್ಮನೇ ಪವಡಿಸುತಕಣ್ಣೆಡೆಯ ಕೇಶವನು ಕಿವಿಗಿಟ್ಟಳು..ಕಣ್ಣಂಚು ನೀರಹನಿಕೈ ಬಿಗಿದ ಫೋನೊಂದುಆಗಾಗ ಅದರೆಡೆಗು ಹರಿದ ದೃಷ್ಟಿ….ಬಂತೊಂದು ಸಂದೇಶಮರೆತು ಬಿಡು ನನ್ನಿದಿರಕಾಯದಿರು ನನ್ನೊಲವಮೂಗಿಯನು ಕೈಹಿಡಿದು ನಾ ಬಾಳಲಾರೆ…ಬಿಗಿದ ಗಂಟಲು ಬೇನೆಅಳುವಿಗೂ ದನಿಯಿಲ್ಲಬಿಕ್ಕಿದಳು ಮೌನದಲಿ ಹಾಯೆನಿಸುವಷ್ಟು..ಪಾದಸರ ಕಂಪಿಸಿತುಮತ್ತೆ ಚೇತನವಾಯ್ತುಹದಗೆಟ್ಟ ಭಾವದಲಿ ಪುಟಿದೆದ್ದಳೂ…ಕಡಲಾಚೆ ಮರೆಯಾದಸಂಜೆಗೆಂಪಿನ ಸೂರ್ಯಬಸಿದ ರಕ್ತದ … Read more

ಪಂಜು ಕಾವ್ಯಧಾರೆ

ಮಿಡ್ ನೈಟ್ @ಪ್ರೀಡಂ ಹೀಗೆ ಏಕಾಂತದಲ್ಲಿಇರಲು ಯಾವಾಗಲೂನನಗೆ ಇಷ್ಟಇದು, ಅವನು ಬಿಟ್ಟು ಹೋದಹಲವುಗಳಲ್ಲಿ ಇದು ಕೂಡ. ಪ್ರತಿ ರಾತ್ರಿ ಎರಡು ಪೆಗ್ ವೈನ್ಮತ್ತವನ ಖಾಲಿ ನೆನಪುಇಷ್ಟೇ, ಚಂದ್ರನ ಆಸರೆಯಲ್ಲಿಮಧು ಹೀರುತ್ತಾ,ತೇಲುತ್ತಾ ಹಾಗೆ ಒರಗಿಕೊಳ್ಳುವೆ. ಒಮ್ಮೊಮ್ಮೆ ಅವನೊಂದಿಗೆ ಕಳೆದತುಂಟ ಪೋಲಿ ನೆನಪುಗಳುಬೇಡವೆಂದರುನನ್ನ ಅಂಗಾಲಿಗೆ ಮುತ್ತಿಡುತ್ತಾಬಲವಂತವಾಗಿ ಕಾಡಿಸುತ್ತವೆ. ಹೂ ಮುಗುಳಿಗೆತಾಕಿಸಿದ ಅವನ ಕಿರುನಾಲಿಗೆ ರುಚಿ,ಮತ್ತೆ ಮತ್ತೆಕವಾಟಗಳೆರಡು ಬಯಸುತ್ತವೆ. ಸಿಕ್ಕು ಬಿದ್ದಕೂದಲಲ್ಲಿ ಅವನಾಡಿಸಿದಕಿರು ಬೆರಳಾಟಮತ್ತೆ ಬೇಕನಿಸುತ್ತದೆ. ಹೀಗೀಗ ಬರೀ ಖಾಲಿ,ಎರಡು ಪೆಗ್ ವೈನ್ ಜೊತೆಅವನ ನೆನಪಿನೊಂದಿಗೆಹಾಗೊಮ್ಮೆ ಹಿಗೊಮ್ಮೆಬೆರಳುಗಳು ಇಣುಕಿ ಬಂದಾಗಲೇಚಿಂತೆ ಕಳೆದು … Read more

ಎರಡು ಸಾವಿರ ವರ್ಷಗಳ ಹಿಂದಿನ ಸಂಗಂ ಸಾಹಿತ್ಯ ಪುರನಾನೂರು

ತಮಿಳು ಮೂಲ: ಪ್ರೊ. ಸಾಲಮನ್‌ ಪಾಪಯ್ಯಅನುವಾದ: ಡಾ. ಮಲರ್‌ ವಿಳಿ ಕೆಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಹಾಡು- ೧( ಧರ್ಮತಪ್ಪದ ರಾಜನ ಆಳ್ವಿಕೆ) ರಾಜನೇಬಾನ ಮಿತಿಯವನೇ! ದೇವನೇ!ನಿನ್ನ ಹೊಗಳದವರನ್ನು,ಅವರ ತಪ್ಪುಗಳನ್ನು,ನೀ ಸಹಿಸಿಕೊಳ್ಳುವೆ.ಅವರ ತಪ್ಪು,ಸಹಿಸಿಕೊಳ್ಳತಕ್ಕದ್ದಲ್ಲಎಂದು ಕಂಡರೆ,ಅವರನ್ನು ಅಳಿಸುವುದು ಹೇಗೆಂದುಯೋಚಿಸುವ ಜ್ಞಾನದಿ ನೀ ಆಗಸದಂತೆ ವಿಶಾಲವಾದವನು. ಹಗೆಗಳ ಅಳಿಸುವ ಸಾಮರ್ಥ್ಯದಲ್ಲಿನೀ ಆಗಸವ ತಾಕಿ ಬೀಸುವಗಾಳಿಯಂತಹವನು.ಅವರನ್ನು ಅಳಿಸುವುದರಲ್ಲಿಗಾಳಿಯೊಡನೆ ಬರುವ ಬೆಂಕಿಯಂತಹವನು. ಎಲ್ಲರಿಗೂ ಒಳಿತನ್ನುಂಟು ಮಾಡುವುದರಲ್ಲಿ ನೀನುನೀರಿನಂತಹವನು.ಬೆಳಗಿನ ಹೊತ್ತು ಪೂರ್ವದಲಿನಿನ್ನ ಕಡಲಲಿ (ಉದಯಿಸುವ)ಕಾಣುವ ಸೂರ್ಯಸಂಜೆಯಲಿ ಬೆಳ್ಳನೆಯ ಅಲೆಗಳಿರುವನಿನ್ನ ಪಶ್ಚಿಮ ಕಡಲಲಿ ಮುಳುಗುವುದು.ಇವುಗಳ ನಡುವೆ ಸದಾಹೊಸ ಹೊಸ … Read more

ಎರಡು ಕವಿತೆಗಳು: ಡಾ. ಡಿ. ಎಸ್. ಪ್ರಭಾಕರಯ್ಯ

ಯಾರು ಹಿತವರು ನಿನಗೆ ಓ ಮನಸೇಯಾರು ಹಿತವರು ನಿನಗೆಒಮ್ಮೆ ಅತ್ತ ಬಾಗುವೆಒಮ್ಮೆ ಇತ್ತ ಬಾಗುವೆಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ಒದ್ದಾಡುವೆ. ಓ ಮನವೇಯಾರು ಹಿತವರು ನಿನಗೆಗೆದ್ದರೂ ಸಹಿಸಲಾರೆಸೋತರೂ ಸಹಿಸಲಾರೆ,ಗೆದ್ದು ಸೋತಿಲ್ವ, ಸೋತು ಗೆದ್ದಿಲ್ವಸೋಲು ಗೆಲುವುಗಳಿಲ್ಲದ ಜೀವನವುಂಟೇ ಓ ಮನವೇಯಾರು ಹಿತವರು ನಿನಗೆಕನಿಕರ ಎಲ್ಲೂ ಕರಕರ‌ ಎನ್ನುತಿಲ್ಲಹಾನಿಕರವೇ ನಿನ್ನಮೂಲಮಂತ್ರವಾಯಿತಲ್ಲ.ಬದುಕಲಾರೆ, ಬದುಕಿಸಲಾರೆ. ಓ ಮನವೇಯಾರು ಹಿತವರು ನಿನಗೆವರಿ ಆಗಿದ್ದಕ್ಕಿಂತ ಉರಿ ಆಗಿದ್ದೇ ಹೆಚ್ಚು, ಮಾತುಗಳಲ್ಲಿ ನಿಸ್ವಾರ್ಥತೆಕೆಲಸ ಕಾರ್ಯಗಳಲ್ಲಿ ಸ್ವಾರ್ಥತೆ. ಓ ಮನವೇಯಾರು ಹಿತವರು ನಿನಗೆ.ಒಳಗೆ ಬಳುಕು ಹೊರಗೆ ತಳುಕುಏನು ನಿನ್ನ ನೀತಿ … Read more

ಎರಡು ಕವಿತೆಗಳು: ಜ್ಯೋತಿಕುಮಾರ್‌ ಎಂ.

ಅವರವರ ಭಾವ ಶವ ಹುಗಿದು ಬಂದವರುದೋಷ ಕಳೆಯಲೆಂದುಗುಂಡಿ ತೆಗೆದವನವಸ್ತ್ರ ತುಂಬಿಸಿದರು.ಕೂಲಿಯವರು ಹೊಟ್ಟೆತುಂಬ ಕಳ್ಳು ಕುಡಿದುದೋಷವನುಜೀರ್ಣಿಸಿಕೊಂಡರು. ತಾವು ಮಾಡಿದಪಾಪ ಕರ್ಮಗಳುಕಳೆಯಲೆಂದು,ಭಿಕ್ಷಾ ತಟ್ಟೆಗೆಚಿಲ್ಲರೆ ಎಸೆದರು.ಪಾಪದ ಅಕ್ಕಿಯಅನ್ನ ಬೇಯಿಸಿ ತಿಂದುಅವರು ಅರಗಿಸಿಕೊಂಡರು. ಕೈಗಂಟಿದ ರಕ್ತದಕಲೆ ತೊಳೆಯಲೆಂದುಒಂದಿಷ್ಟು ಕಂತೆದಾನ ಕೊಟ್ಟರು.ರಕ್ತ ಕಲೆಯ ಊಟವಅನಾಥ ಮಕ್ಕಳು ಉಂಡುರಕ್ತಗತವಾಗಿಸಿಕೊಂಡರು. ಪಾಪದ ಪಿಂಡವೆಂದುಹಡೆದು ತೊಟ್ಟಿಗೆಎಸೆದು ಹೋದರು.ನಡುರಾತ್ರಿಯಲಿಸಿಕ್ಕ ಕೂಸುಬಂಜರು ಜೀವನದಅದೃಷ್ಟವೆಂದುನಡು ವಯಸ್ಸಿನದಂಪತಿಗಳುಕಣ್ಣಿಗೊತ್ತಿಕೊಂಡರು. ಯಾವುದು ದೋಷ?ಯಾವುದೀ ಕರ್ಮ?ಯಾರ ರಕ್ತದ ಕಲೆ?ಯಾರು ಪಾಪದ ಪಿಂಡ?ಜೀವನ, ಭಾವನ, ಪಾವನ.ಅವರವರ ಭಾವಕ್ಕೆಅವರವರದೆ ಭಕ್ತಿ,ಅವರಿವರಿಗೆ ಅದೆ ಶಕ್ತಿ. ಕಾರಣ ಮನಸ್ಸುಗಳಬೆಸೆದುಕೊಂಡಾಗ,ಬಿಸುಪು ಕೈಗಳಸ್ಪರ್ಶ ರೋಮಾಂಚನದಿಂ,ಸುಮ್ ಸುಮ್ಮನೆಆಲಂಗಿಸಿಕೊಂಡಾಗ,ಬಳಿ ಸಾರಿಮುದ್ದಾಡಿಕೊಂಡಾಗ,ಕತ್ತಲೆ … Read more

ನಾಲ್ಕು ಕವಿತೆಗಳು: ಲಿಂಗರಾಜ ಸೊಟ್ಟಪ್ಪನವರ

ಈ ಹಂಗಾಮಕೆ ಹೀಗೆಗಾಳಿಯ ಸುಮ್ಮನೆ ಒಂದು ಬೀಸುಏನು ಕಾರಣವಿರುತ್ತೆ ಹೇಳು ಒಳಗೆಳೆದುಕೊಂಡ ಈ ಕ್ಷಣದ ಉಸಿರಿಗೆಯಾರ ಹೆಸರಿತ್ತು ಕೇಳುಎಷ್ಟೇ ನಿಟ್ಟುಸಿರುಗಳ ತರುವಾಯವೂ ನಿನ್ನ ಪುಪ್ಪಸಗಳಲಿಉಳಿದೆ ಉಳಿಯುತ್ತೇನೆ ನಾನು ಬರಿ ಹೆಸರಿಗೆ ಇಷ್ಟು ಉಬ್ಬಿ ಹೋಗುವಿಯಲ್ಲಾಇನ್ನು ಕುಪ್ಪಸವ ನಾನೇ ಹೊಲಿದು ತರುವೆಎಷ್ಟಾದರೂ ಉಬ್ಬುದಿಬ್ಬವೇರುತ್ತ ಸಾಗಲಿ ತೇರುಮಬ್ಬು ಹರಿದ ತರುವಾಯ ಕಣ್ಣುಜ್ಜಿಕೊಳ್ಳುವ ಚುಮು ಚುಮು ಮುಂಜಾವುಕಣ್ಣೆದುರೆ ಕರಗುವ ಕಾನು ಬಾನುಬೆಳ್ಳಿ ನಕ್ಷತ್ರಗಳು ಆನು ತಾನುಹರಿವ ತೊರೆಯ ಮೆರೆವ ನೊರೆಯಲಿಯಾವ ದುಃಖ ಎಂಥ ಸುಖ ಬರುವ ಹಬ್ಬಕೆಬೇನಾಮಿ ಸುಖಗಳನು ನಿನ್ನ ಹೆಸರಿಗೆ … Read more

ಪಂಜು ಕಾವ್ಯಧಾರೆ

ನಿನಗೆಂದೇ ಮುಡಿಪಿಟ್ಟ ಕನಸುಗಳಿವು… ನಿನಗೆಂದೇ ಮುಡಿಪಿಟ್ಟ ಕನಸುಗಳಿವುಮೌನದ ಜಾಡಿಯೊಳಗಿಟ್ಟು ಕಾಯುತಿರುವೆಒಲವಿನ ಅಗ್ನಿಸ್ಪರ್ಶದಿಂದವುಗಳನುನನಸು ಮಾಡುತ ಬದುಕಿ ಬಾಳಬೇಕು ಹರೆಯ ತಂದೆಸೆದ ಚೆಲುವಿನ ಸುರಹೊನ್ನೆತೆರೆಯುತ ತನ್ನೆಲ್ಲ ಕಂಪ ಸೂಸುತಲಿಧರೆಯ ಸಿರಿಯಂತೆ ಬದುಕ ತುಂಬುತಲಿಮರೆಯಲಾಗದಂತಹ ಚಣಗಳಾಗಬೇಕು ಕಬ್ಬಿನೊಳಗಾ ಸಿಹಿ ರಸದೊಳಿರುವಂತೆತಬ್ಬಿದಂತೆ ಲತೆತರುವನೆಳಸಿ ಅದುವೇಹಬ್ಬಲಿಬ್ಬರೊಳಗವಿತು ಕುಳಿತಂತೆ ಪ್ರೀತಿಇಬ್ಬರೊಳಗೂ ಹದವಾಗಿ ಪ್ರೇಮ ಅರಳಬೇಕು ಎಲ್ಲರೊಳಗೊಂದಾಗಿರುತೆಲ್ಲವನು ಸ್ವೀಕರಿಸಿಇಲ್ಲಸಲ್ಲದ ನೆವವ ಪ್ರೀತಿಗೆಂದೆಳಸಿ ನಿನ್ನನಲ್ಲನಾಗುತಲಿರಲು ಹೃದಯದೊಳಗೊಲುಮೆನಿಲ್ಲದೆಯೆ ನಿತ್ಯದಿ ಜಿನುಗಬೇಕು -ಸಚಿನ್‌ಕುಮಾರ ಬ.ಹಿರೇಮಠ ನಾನಾಗಲಾರೆ ನಿನ್ನಂತೆ ನಾನಾಗಬೇಕೇಖಂಡಿತ ಇಲ್ಲನಿನ್ನ ಸುಳ್ಳು ನನಗೆ ಬೇಕಿಲ್ಲಸುಳ್ಳಿನ ಅರಮನೆ ನನಗಲ್ಲಕನಸುಗಳ ಹಾರ ಬೇಡವೇ ಬೇಡಹುಸಿನಗೆಯ … Read more

ಗಝಲ್: ಸುಜಾತಾ ರವೀಶ್, ಜೊನ್ನವ (ಪರಶುರಾಮ ಎಸ್ ನಾಗೂರ್)

ಗಝಲ್ ಸುಡುವ ಸಂಕಟ ಎದೆಯ ಹಿಂಡಲು ಮನಸು ಮುರಿಯದೇ ಸಖಾಕಾಡುವ ನೆನಪು ಹೃದಯ ದಹಿಸಲು ಕಂಬನಿ ಸುರಿಯದೇ ಸಖಾ ಮಿಡಿವ ಕರುಳಿದು ಕಾಲನ ತಿವಿತಕೆ ಗುರಿಯಾದ ಕಥೆ ಹೇಳಲೇತುಡಿವ ಜೀವವ ಸತತ ನೋಯಿಸಿರೆ ವೇದನೆ ಇರಿಯದೇ ಸಖಾ ನುಡಿವ ಮಾತದು ಚುಚ್ಚುವ ಶರವಾಗಿ ವಿಷವ ಲೇಪಿಸಿದೆ ನೋಡುಹಾಡುವ ಕೋಗಿಲೆ ಗೋಣನು ಕೊಯ್ದಿರೆ ಒಡಲು ಉರಿಯದೇ ಸಖಾ ಬಾಡುವ ಹೂವಿದು ಸೌರಭ ಸೂಸಿದೆ ಸಾರ್ಥಕ್ಯ ಲಭಿಸಿದೆ ಜಗದೆನೋಡುವ ಕಣ್ಣಲ್ಲಿ ಮಾತ್ಸರ್ಯ ಇಣುಕಿರೆ ಬೆಸುಗೆ ಹರಿಯದೇ ಸಖಾ ನೀಡುವ ಕೈಗಳು … Read more

ಮೂರು ಕವಿತೆಗಳು: ಶಕುಂತಲಾ ಬರಗಿ

ಹಠ ತೊಟ್ಟಿದ್ದೇನೆ ಮನುಷ್ಯಳಾಗಿ ಇರುವ ಆಸೆಗಾಗಿಮಾತು ಮಾತಿಗೂ ಚಲ್ಲು ಚಲ್ಲು ಆಡುವವರ ಮಧ್ಯೆಡೌಲು ಡೌಲು ನಡತೆ ಇರುವವರ ಮಧ್ಯೆಈ ಹೈಲು ಫೈಲು ಮಂದಿ ನಡುವೆನನ್ನತನದ ಹೋರಾಟಕ್ಕೆ ಬದ್ಧಳಾಗಿದ್ದೇನೆ. ಅಂಕುಡೊಂಕು ನೂರು ಒನಪಿಗೆಚುಚ್ಚುವ ಕೊಂಕುಮಾತುಗಳ ನಡುವೆಮಂಕು ಕವಿದ ನೂರು ಪ್ರಶ್ನೆಗೆನಾನು ಮೌನ ತವಸಿಯಾಗಿದ್ದೇನೆ ಸವಾಲು, ಜವಾಬುಗಳ ಝೇಂಕಾರದಲ್ಲಿಸ್ಪರ್ಧೆ, ಪೈಪೋಟಿಗಳ ಆಳದಲ್ಲಿಕೊಂಕು-ಡೊಂಕುಗಳ ವ್ಯವಸ್ಥೆಯಲ್ಲಿಶಾಂತವಾಗಿ ಸೋಲಿಸುತ್ತೇನೆ ಅವರಿವರನ್ನು ಒಪ್ಪದ ತಪ್ಪಿದ ವ್ಯವಸ್ಥೆಯ ಭಂಜನದಲ್ಲಿಒತ್ತಿದ ಬಿತ್ತಿದ ಉಳು ಗೊಬ್ಬರದಲ್ಲಿಅಸತ್ಯದ, ಅಧರ್ಮದ ಲೋಕದಲ್ಲಿಮನುಷ್ಯಳಾಗೇ ಇರುವ ಹಠ ತೊಟ್ಟಿದ್ದೇನೆ. ದೀಪಾವಳಿ ಮಾಡಬೇಕೆಂದಿದ್ದೇನೆ ದೀಪಾವಳಿ ಮಾಡಬೇಕೆಂದಿದ್ದೇನೆಎನ್ನ ಮನವನೊಮ್ಮೆ … Read more

ಮೂರು ಕವನಗಳು: ಮಮತಾ ಚಿತ್ರದುರ್ಗ

ಅವನುಜೇನೊಳಗಿನ ಸಿಹಿ ಅವನುಹೂವಳಗಿನ ಮೃದು ಅವನುಗಾಳಿಯೊಳಗಿನ ಗಂಧ ಅವನುಮೋಡದೊಳಗಿನ ಬೆಳಕು ಅವನುತಾರೆಯೊಳಗಿನ ಹೊಳಪು ಅವನುನೀರಿನೊಳಗಿನ ಅಲೆಯ ಪುಳಕ ಅವನುಚಿತ್ರದೊಳಗಿನ ಬಣ್ಣ ಅವನುಪತ್ರದೊಳಗಿನ ಭಾವ ಅವನುಇಬ್ಬನಿಯೊಳಗಿನ ತೇವ ಅವನುಕಣ್ಣೊಳಗಿನ ನೋಟ ಅವನುಹಬ್ಬದೊಳಗಿನ ಸಡಗರ ಅವನುಬೆಟ್ಟದೊಳಗಿನ ತನ್ಮಯ ಅವನುಎಲೆಯೊಳಗಿನ ಹಸಿರು ಅವನುಚೈತ್ರದೊಳಗಿನ ಚಿಗುರು ಅವನುಭಾವನೆಗಳ ಯಾನಕ್ಕೆ ಗಮ್ಯ ಅವನುಸಂಗೀತದ ನಾದದೊಳಗಿನ ಸೌಮ್ಯ ಅವನುನನ್ನ ಧ್ವನಿಯ ಶಬ್ದ ಅವನುನನ್ನ ಕಣ್ಣಲಿ ಬೆರಗು ಅವನುನನ್ನವನು…! ಸುಗಂಧ ದ್ರವ್ಯವದು ಹೂಗಳ ಗೋರಿಒಣಗಿದ ಹೂಗಳ ಎದೆಯ ಭಾರದ ಮಾತಿನ ಸಾರ.ದೇವರ ಮುಡಿಯಲ್ಲಿದ್ದುಹೆಣದ ಅಡಿಯಲ್ಲಿದ್ದುಸೈನಿಕನ ಸಮಾಧಿ ಮೇಲಿದ್ದುಬಾವುಟದ … Read more

ಮೂರು ಕವಿತೆಗಳು: ಶಕುಂತಲಾ ಬರಗಿ

ಹೆಣ್ಣು ನೂರು ಸಂಕೋಲೆಯಲ್ಲಿ ಸಿಲುಕಿವಿಲಿ ವಿಲಿ ಒದ್ದಾಡುವ ಜೀವಸಂಕೋಲೆಯ ಬಿಡುಗಡೆಗೆ ಹಪಹಪಿಸಿಗೀಳಿಡುತ್ತಿರುವ ಪಾಪಿ ಕಾಡಿನ ಪ್ರಾಣಿ. ನಾವೆಷ್ಟು ಬೈದರು ಅಂದರುಉಗುಳು ನುಂಗುವಂತೆಒಳ ಹಾಕಿಕೊಳ್ಳುವಅಂತಶಕ್ತಿಯ ಅಗಾಧ ಮರ ! ಎಳೆ ಕೈ ಬಿಗಿದಳೆದು ಕಟ್ಟಿಕುಟ್ಟಿ ಒಡೆದಾಕಿದರುಒದ್ದಾಡದೆ ಸುಮ್ಮನೆ ಇದ್ದಾಳೆಅವಳೇ ಒಂದು ಸಾತ್ವಿಕ ಶಕ್ತಿ ಅವಳು ಇವಳು ಯಾವಳುಮತ್ತೊಬ್ಬಳು ಮಗದೊಬ್ಬಳುಹೀಗೆ ಅನ್ಯಾಯಕ್ಕೇಒಳಗಾದವರ ಸಂಖ್ಯೆ ಏರುತ್ತಲೇ ಇರುತ್ತದೆ ಅವರ ಕೋಪ ತಾಪ ಶಾಪಗಳಅವಶೇಷಗಳ ಮೆತ್ತಿಕೊಂಡಿವೆಈ ಪುರುಷಧೀನ ಪುರದಲ್ಲಿಇನ್ನೂ ಮೆತ್ತಿಕೊಂಡಿವೆ ಶಾಪದ ಗುರುತುಗಳಾಗಿ ! ಕೂಗು ಅಳು ನೋವಿನ ಧ್ವನಿಪ್ರತಿಧ್ವನಿಗಳು ಅನುರಣಿಸುತ್ತಿವೆಈ ಪುರುಷಾಂದಕಾರದ … Read more

ಮೂವರ ಕವಿತೆಗಳು: ಜ್ಯೋತಿ ಕುಮಾರ್‌ ಎಂ. (ಜೆ.ಕೆ.), ಕುಸುಮ ರಾವ್, ಉಮಾ ಸೂಗೂರೇಶ ಹಿರೇಮಠ

ಉಗಾದಿ ಏಸೊಂದು ದಿವ್ಸಾತುನೀನು ಬಿಟ್ಟು ವ್ಹಾದಬ್ಯಾಸರದ ನೆನೆಕೆಗಳಿಗೆ ಎದೆ ಮ್ಯಾಲೆ ಬಂಡೆಏರಿಕೊಂಡು, ಬಡಕೊಂಡು.ಉಗಾದಿನೇ ಬಂತು ತಿರುಗಿ ಮನದ ಬಾಗ್ಲಮ್ಯಾಲಿನ ಮಾಂತೊಪ್ಲಒಣ್ಗಿ ಶ್ಯಾನೆ ಮಾಸಾತು ಬೇನ್ಗಿಡದ ತುಂಬಸಿ ನೆನಪಾ ಹೂಕಾದು ಬಿಟ್ಟಾವ ಭಾಳ ಕೋಗ್ಲಿಯ ಗಂಟ್ಲುವಿರಹ ಕಟ್ಟೈತಿಮೌನವಾಗಿ ಕುಂತೈತಿ ಶಾಬಾದಿ ಮಠ್ಕ್ಯಾಲೆಂಡರ್ ಕಾಯೋದಖಾಯಂ ಅಂದೈತಿ ಹಾಕ್ಕೊಂಡ ಅರಿವಿನಿನ್ನ ನೆನಪ ಜಳಕದಾಗತೋಯ್ದು ತಪ್ಡಿಯಾಗೈತಿ ಪಚ್ಚಿಮದ ಸಂಜಿ ಬಾನಾಗಚಂದ್ರನಂತ ನಿನ್ನ ಮಾರಿಕಂಡು ಜೀವ ಜಲ್ ಅಂದೈತಿ ಅಂದ್ರ ಬಾಹ್ರ ಆಟದಾಗನಗುವ ನಿನ್ನ ರಾಣಿ ಕಾರ್ಡ್ಸಿಕ್ಕಿ ಕೈ ಕೋಸಿರಾಡೈತಿ ಉಗಾದಿಯಾದ್ರೂಯಾಕ್ ಬಂತೋನಿನ್ನ ನೆನಪ … Read more

ಮೂರು ಕವಿತೆಗಳು: ಜೊನ್ನವ (ಪರಶುರಾಮ್ ಎಸ್ ನಾಗುರ್)

ಸ್ವಾತಂತ್ರ್ಯ ಭಾರತದಲ್ಲಿ ನೀರಿಗಾಗಿ ಸೂರಿಗಾಗಿಭಾವಕ್ಕಾಗಿ ಬಾಷೆಗಾಗಿದೇಶದೊಳಗೆ ಕದನಹೇಳು ಯಾರು ಕಾರಣ ಗುಡಿ ಗೋಪುರ ಮಣ್ಣಾದವುಮಸಿದಿ ಚರ್ಚ್ ಮುಕ್ಕಾದವುಪ್ರೇಮ ತುಂಬಿದೆದೆ, ಏಕೆ ಕಲ್ಲಾದವುಹಸಿ ನೆತ್ತರದ ಕಂಪು, ಸುತ್ತ ಸುಳಿದಾಡಿದವು 75ನೇ ಸ್ವಾತಂತ್ರ್ಯ ಸಂಭ್ರಮಿಸಿದೇವುಚುಟಿ ತೊಟ್ಟಿಲ ತೂಗುವರ ನಡುವೆಮೂಲಭೂತ ಹಕ್ಕಿಗಾಗಿ,ಇದ್ದೇ ಇರುವುದುದೇಶದಲ್ಲೊಂದು ಗೊಡವೆ ಅಂಗಲಾಚ ಬೇಕಾಗಿದೆಅರ್ಜಿಗಳ ಮೇಲೆ ಅರ್ಜಿ ಕೊಟ್ಟುಇದೇ ಸ್ವಾತಂತ್ರ್ಯದಒಳಗಿನ ಗುಟ್ಟು ಕೋಪವೆ ನಲ್ಲೆ? ಕೋಪವೆ ನಿನಗೆನನ್ನ ಮೇಲೆ ನಲ್ಲೆಅದಕ್ಕೆ ನಾ ತಂದೆಕಂಪು ಸೂಸುವ ದುಂಡು ಮಲ್ಲೆ ನಿನ್ನ ಚೂಟಿ ರೇಗಿಸಿ, ಮತ್ತೆ ರಮಿಸಿಎದೆಗಾನಿಸಿ ಮತ್ತೆ ಪ್ರೇಮಿಸಿಉಸಿರಲೆ ಪಿಸು … Read more

ಪಂಜು ಕಾವ್ಯಧಾರೆ

ಇವಳೊಂದು ರಾಕ್ಷಸಿ ೧ ಕಟ್ಟಿ ಕಾಯುವವರಿಲ್ಲವೇ ಇವಳಮುರಿದ ಮೂರ್ತಿಗಳುಹರಿದ ಕನಸುಗಳ ತಿಂದು, ಒಡೆದ ಮನಸುಗಳನಿಂದೆ ಅಪಮಾನಭಯ ಶೋಕಗಳಕುಡಿಕುಡಿದೂ ಎಂದೆಂದೂ ಮುಗಿದಂತಿಲ್ಲಇವಳ ಹಸಿವು ದಾಹಬಡವರ ಅಂಗೈ ಬೆಂಕಿಯವಳುಇಂದ್ರ ಸಭೆಯ ನರ್ತಕಿ ಆಹಾ!ಕೋಮಲೆಯಂದೆವಳ ಮುಟ್ಟೀರಿ ಜೋಕೆತಲ್ಗೇರಿದಂತೆ ಸುರೆಮಿಂಚು ಹೊಡೆದಂತೆ ಅರೆಘಳಿಗೆಮುಂದೊಂದು ವರುಷ ಕವಿ ದೇವದಾಸಕ್ಷಣ ಚಿತ್ತ – ಕ್ಷಣ ಅಸ್ವಸ್ಥ! ೨ತುಂಬಿದ ಕಣ್‌ ರೆಪ್ಪೆಗಳು, ಒಣಗಿ ಬಣಗುಡುವ ಭಾವದೆದೆಅನ್ಯಾಯವಾಗಿ ಅಗಲಿದ ಕ್ರೌಂಚ ಪಕ್ಷಿಗಳುಈಗ ಹುಟ್ಟಿ ಸತ್ತ ಶಿಶುವುಟೀಪಾಯ್‌ ಮೇಲಿನ ಸಿಂಗಲ್‌ ಟೀ ಕಪ್ಪುಹೈವೇ ಮೇಲೆ ಸುಟ್ಟು ತಿಂದ ಬಣ್ಣದ ನವಿಲಿನ … Read more

ಮೂರು ಕವಿತೆಗಳು: ಡಾ. ಸದಾಶಿವ ದೊಡಮನಿ, ಇಲಕಲ್ಲ

ʼಮಾಂಸದಂಗಡಿಯ ನವಿಲು’ ನೆನಪಿನಲ್ಲಿ ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿಶತಮಾನದ ನೋವಿಗೆ ಮುದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿಹಗಲು ಗಸ್ತು ತಿರುಗುವಾಗ ನೀವು ಹುಲಿಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;ಕೇಳುತ್ತಿದೆಹಿಮದ ಹೆಜ್ಜೆಯೂ ತೋರುತ್ತಿಲ್ಲಚಿತ್ರದ ಬೆನ್ನು ಕಾಣುತ್ತಿಲ್ಲಮಾಂಸದಂಗಡಿಯ ನವಿಲು ಹುಡುಕುತ್ತಿದ್ದೇನೆನೀವು ಎಲ್ಲಿ? ಮಂಗಮಾಯ! ಕೆಂಪು ದೀಪದ ಕೆಳಗೆನನ್ನಕ್ಕ,ತಂಗಿಯರು ಎದೆ ಸುಟ್ಟುಕೊಂಡುನಲುಗುವಾಗ ನೀವು ತಾಯಿಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿಹಗಲು ದೀವಟಿಗೆಯಾಗಿ ಉರಿದು,ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿನೀವು … Read more

ಶಿವಧ್ಯಾನ: ಡಾ. ರಶ್ಮಿ ಕಬ್ಬಗಾರ

ಅಲ್ಲಿಗೆ ಹೋದ ಮೇಲೆ ಗೊತ್ತಾದದ್ದುನಮ್ಮೂರ ಶಿವ ಎಷ್ಟು ಸಿಂಪಲ್ಲು ಅಂತ !ಶಿವರಾತ್ರಿಯೋ- ಮಡಿಹುಡಿ ನೈವೇದ್ಯದತಲೆಬಿಸಿ ಎಳ್ಳಷ್ಟೂ ಇರದಶುದ್ಧ ಪ್ರೀತಿಯ ಸಮಾವೇಶವೇ ಸರಿಯೆನ್ನಿ ಆ ದಿನ ಯಾವ ಹೊಳೆಯೂ ಆದೀತು ಪಕ್ಕದಲ್ಲೊಂದು ಶಿಲೆಯಿದ್ದರಲ್ಲಿ ಶಿವರಾತ್ರಿ ನೀರೆಲ್ಲವೂ ಗಂಗೆ’ ಕಲ್ಲ ತಲೆಮೇಲೊಂದಿಷ್ಟು ಅಭಿಷೇಕಗೈದುನಿರುಮ್ಮಳವಾಗಿ ಬನ್ನಿ ಮನೆಗೆ’- ಹಿರಿಯರ ನುಡಿ ನಮ್ಮಜನ ಊರು-ಕೇರಿಯ ಗೆಳೆಯರನ್ನಸಹಜೀವಗಳನ್ನ ಕೂಡಿಸಿ,ಗೂಡ್ಸು, ಲಾರಿ ತುಂಬಿಕೊಂಡುಗಲ್ಲದ ಗೌಜುಗಳೊಂದಿಗೆಶಿವರಾತ್ರಿ ಪಿಕ್ ನಿಕ್ ಹೋಗಿದ್ದುಂಟು. ಪ್ರತಿವರ್ಷವೂ- ಮುಂದಿನ್ವರ್ಷ ನಿನ್ನ ಮುದ್ದಾಂ ಕರಕೊಂಡ್ಹೋಗ್ತೆವೇ ಅಂತ್ಹೇಳಿ ಕೈಕೊಟ್ಟು ಓಡಿದ ಅಕ್ಕ, ಅಣ್ಣ, ಚಿಕ್ಕಮ್ಮನ ನೆನೆದು,ಚಳ್ಳೇಪಿಳ್ಳೆಗಳಾದ … Read more

ಪಂಜು ಕಾವ್ಯಧಾರೆ

ಮಾನದಂಡ ! ಮಿಥಿಲಾಪುರದೊಳಗೆ ಪಂದ್ಯ;ಸೀತೆಗೆ ಸ್ವಯಂವರ….ಹರಧನುವ ಮುರಿಯುವುದೇಮಾನದಂಡ !ರಾಮ ಮುರಿದ; ಸೀತೆ ಒಲಿದಳುನಂತರದ ವಿಚಾರವೀಗ ಬೇಡ ! ಪಾಂಚಾಲನಂದನೆ ದ್ರೌಪದಿ;ಸ್ವಯಂವರದಿ ಗೆದ್ದವನ ಮಡದಿ !ಮತ್ಸ್ಯಯಂತ್ರವ ಭೇದಿಸುವುದೇಮಾನದಂಡ !ಪಾರ್ಥ ಬಾಣ ಹೂಡಿದ; ದ್ರೌಪದಿ ಒಲಿದಳುನಂತರದ ವಿಚಾರವೀಗ ಬೇಡ ! ಅಷ್ಟೋ ಇಷ್ಟೋ ಓದಿದ ಹೆಣ್ಣು,ಸ್ವಯಂವರ ಅನ್ನಬಹುದೆ ಇದನು ?‘ಸರ್ಕಾರಿ ನೌಕರಿ’ಯೇಮಾನದಂಡ !ಸಂ(ಗಿಂ)ಬಳ ತಂದವನ ಹುಸಿನಗೆಗೆ ಒಲಿದಾಳುನಂತರದ ಬದುಕು ? ಈಗ ಬೇಡ ! ಜನಕರಾಜನ ಮಗಳಿಗೆವನವಾಸ ವರವಾಯ್ತು;ದ್ರುಪದ ರಾಜನ ಮಗಳು ಬದುಕುಐವರ ಪಾಲಾಯ್ತು ! ಅತಿ ಆಸೆ ಪಟ್ಟಷ್ಟೂ … Read more

ನಾಲ್ವರ ಗಝಲ್‌ಗಳು: ಶಿವರಾಜ್. ಡಿ., ಜಯಶ್ರೀ ಭ ಭಂಡಾರಿ., ಜೊನ್ನವ, ರೇಣುಕಾ ಕೋಡಗುಂಟಿ

ಗಝಲ್. ನಾನು-ನೀನು ಅವನು-ಇವನು ಬೇರೆ-ಬೇರೆಯಿಲ್ಲ ನಾವು ಒಂದೇರಾಮ-ರಹೀಮ ಕೃಷ್ಣ-ಕರೀಮ ಭೇದ-ಭಾವವಿಲ್ಲ ನಾವು ಒಂದೇ ಸ್ವರ್ಗ ನರಕ ಪಾಪ ಪುಣ್ಯವೆಲ್ಲ ಮನುಜನ ಕರ್ಮದ ಫಲಗಳುಜಗತ್ತಿನ ಧರ್ಮ ಗ್ರಂಥಗಳ ಸಾರಗಳಲಿ ಭೇದವಿಲ್ಲ ನಾವು ಒಂದೇ ಆಲಯ ಬಯಲಾಗಿ ಬಯಲಲಿ ಬೆಳಕಾಗಿ ಬಾಳಬೇಕು ಮನುಜಮನುಷ್ಯ ಮನುಷ್ಯತ್ವದಲಿ ಮೇಲು-ಕೀಳುಗಳಿಲ್ಲ ನಾವು ಒಂದೇ ಅಜ್ಞಾನದ ತಮವಳಿದು ವಿಜ್ಞಾನದಿ ಮೌಡ್ಯವಳಿಯಲಿಜ್ಞಾನಜ್ಯೋತಿ ಬೆಳಗಲು ತರ-ತಮಗಳಿಲ್ಲ ನಾವು ಒಂದೇ ಜಾತಿ,ಧರ್ಮಗಳ ಗೋಡೆ ಕಟ್ಟಿ ವಿಶ್ವಗುರು ಆಗಲು ಹೊರಟಿದ್ದಾರೆ ಶಿವುಪರಿಶುದ್ಧ ಪ್ರೀತಿಗೆ ಕಾರುಣ್ಯದ ಮನಸಿಗೆ ಜಾತಿ-ಧರ್ಮಗಳಿಲ್ಲ ನಾವು ಒಂದೇ -ಶಿವರಾಜ್. … Read more