ಪದ್ದಕ್ಕಜ್ಜಿ ಮದುವಿ: ಡಾ.ವೃಂದಾ ಸಂಗಮ್

ಅಂದರ ಇದು ನಮ್ಮ ಪದ್ದಕ್ಕಜ್ಜಿ ಮದುವಿ ಅಲ್ಲ, ಅಕೀ ಮದುವ್ಯಾಗಿ ಐವತ್ತ ಅರವತ್ತ ವರ್ಷಾಗೇದ. ಅಕೀ ಮೊನ್ನೆ ಮೊನ್ನೆ ಮಾಡಿದ ಮೊಮ್ಮಗನ ಮದುವೀ ಕತಿಯಿದು. ಅಷ್ಟ. ಮೊನ್ನೆ ನಮ್ಮ ಪದ್ದಕ್ಕಜ್ಜಿ ಬಂದಿದ್ದಳು. ಪದ್ದಕ್ಕಜ್ಜಿ ಅಂದರ ಅಕೀ ಏನೂ ಸಾಮಾನ್ಯದಾಕಿ ಅಲ್ಲ. ಒಂದು ಕಾಲದಾಗ, ನಮ್ಮ ಇಡೀ ಬಾಳಂಬೀಡವನ್ನು ಆಳಿದಾಕಿ. ಅಂದರ, ನಿಮ್ಮ ಬಾಳಂಬೀಡ ಅಂದರ ಒಂದು ದೊಡ್ಡ ಸಾಮ್ರಾಜ್ಯವೇನು ಅಂತಲೋ ಅಥವಾ ಪದ್ದಕ್ಕಜ್ಜಿ ತಾಲೂಕು ಮತ್ತ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೋ ಅಂತ ಪ್ರಶ್ನೆ ಕೇಳ ಬ್ಯಾಡರೀ. ಉತ್ತರಾ … Read more

ಮರಕುಟಿಗ ನೀಲಣ್ಣ: ಮಂಜಯ್ಯ ದೇವರಮನಿ, ಸಂಗಾಪುರ

ನಮ್ಮ ಊರಿನಲ್ಲಿ ಯಾರಾದರೂ ಬಲಶಾಲಿ ಇರುವನೋ ಎಂದು ಕೇಳಿದರೆ ನೀಲಣ್ಣನನ್ನು ತೋರಿಸಬೇಕು. ಆರು ಅಡಿ ಎತ್ತರದ ಗಟ್ಟಿಮುಟ್ಟಾದ ಶರೀರ, ಕಡುಕಪ್ಪ ಮೈಬಣ್ಣ, ತೆಲತುಂಬ ಕೂದಲು, ಗಡ್ಡ ಮೀಸೆ ಪೊಗರ್ದಸ್ತಾಗಿ ಬೆಳೆದಿವೆ. ಬಲಿಷ್ಠವಾದ ತೋಳುಗಳು, ಬಲತೊಳಿಗೆ ಅಜ್ಜಯ್ಯನ ತಾಯತ ಕಟ್ಟಿದ್ದಾನೆ. ಮೈಮೇಲೆ ಅಂಗಿ ಹಾಕಿದ್ದನ್ನು ನಾನೆಂದು ನೋಡಿಲ್ಲ. ಉಡಲಿಕ್ಕೆ ದಪ್ಪ ದಟ್ಟಿನ ಪಂಚೆ, ಹೆಗಲ ಮೇಲೆ ಅರಿತವಾದ ಕೊಡಲಿ ಇದು ನಮ್ಮೂರ ಮರಕುಟಿಗ ನೀಲಣ್ಣನ ಚಿತ್ರ. ನೀಲಣ್ಣ ವರಟನಾದರೂ ನಡೆನುಡಿಯಲ್ಲಿ ಅತ್ಯಂತ ವಿನಯಶಾಲಿ. ಮಗುವಿನಂತ ಮನಸ್ಸು. ಮಕ್ಕಳ ಅಂದರೆ … Read more

ಮುಷಾಯಿರಾದಲ್ಲಿ ಕಾವ್ಯವಾಚನ: ಹೆಚ್. ಶೌಕತ್ ಆಲಿ ಮದ್ದೂರು

ಚನ್ನಪಟ್ಟಣ ಗೊತ್ತಲ್ಲ, ಗೊಂಬೆಗಳ ನಾಡು ಎಂದು ಅದಕ್ಕೆ ಸರ್ಕಾರ ನೀಡುವ ಬಿರುದು. ಹಿಂದೂ ಮುಸ್ಲಿಂ ಭಾವೈಕ್ಯದ ನಾಡು ಎಂದು ಜನಸಾಮಾನ್ಯರ ನುಡಿ. ಕನ್ನಡ ವೇದಿಕೆಗಳು ಕನ್ನಡ ಸಂಘಟನೆಗಳು ಕನ್ನಡ ಸಂಘ ಸಂಸ್ಥೆಗಳು ಹತ್ತಾರು ಇವೆ. ಜನರ ಬದುಕು ಅವರ ವ್ಯಾಪಾರ ವಹಿವಾಟು ಬದುಕು ಬವಣೆಯೊಂದಿಗೆ ಅಪರೂಪಕ್ಕಾದರೂ ಒಂದೊಂದು ಸಾಹಿತಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದುಂಟು.ಆದರೆ ಇಲ್ಲಿ ಮುಸ್ಲಿಂ ಸಮುದಾಯದ ಉರ್ದು ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವುದು, ಒಳ್ಳೊಳ್ಳೆ ಕೆಲಸ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವರ ಆಶಯದಂತೆ ಉರ್ದು ಕವಿಗೋಷ್ಠಿ, ಉರ್ದು … Read more

ಮುಖಗಳು ಬೇಕಾಗಿವೆ: ವೃಂದಾ ಸಂಗಮ್

ಮುಖಗಳು ಬೇಕಾಗಿವೆ ಅಂತ ಮುಖಪುಟದಾಗ ಓದಿದ ಮಂದಿಗೆ ಸ್ವಲ್ಪ ಆಶ್ಚರ್ಯನಏ ಆತು. “ಇದೇನೋ ಮಾರಾಯ, ಕಣ್ಣುಗಳು ಬೇಕಾಗಿವೆ, ಕಿಡ್ನಿಗಳು ಬೇಕಾಗಿವೆ ಅಂತ ಡಾಕ್ಟರು ಹೇಳೋದು ಕೇಳಿದ್ದಿವಿ. ಇದೇನಿದು ಹೊಸಾ ವಿಷಯ. ಯಾರಿಗೆ ಏನು, ಯಾಕ, ಏನೇನೂ ಬರೆದಿಲ್ಲಪಾ, ಮುಖಗಳು ಅಂದರ ಈ ಸಿನಿಮಾದವರು ಹೇಳತಾರಲಾ ಹಂಗೇನರ ಹೊಸಾ ಮುಖಗಳು ಬೇಕಾಗಿವೆ ಅಂತೇನರೆ ಅದನೋ ಏನೋ, ಆದರ ಎಂತಾ ಮುಖಗಳು ಬೇಕಾಗ್ಯಾವ ಅಂತನೂ ಹೇಳಿಲ್ಲ ನೋಡ ಮತ್ತ”. ಅಂತ ರಾಮ್ಯಾ ಮುಂಜ ಮುಂಜಾನೆ ಮೊಬೈಲು, ಟೀವಿ ಬಿಟ್ಟು ಓಡಿಕೋತ … Read more

ಊರ ತೇರ ಹಬ್ಬ: ಡಾ. ವೃಂದಾ ಸಂಗಮ್

ಭಾರತ ಹುಣ್ಣಿಮೆಯಾದ ಒಂಬತ್ತು ದಿನಕ್ಕೆ ಊರಾಗ ಲಕ್ಷ್ಮವ್ವನ ತೇರು. ಅಂದರ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ. ತೇರಬ್ಬ (ತೇರು-ಹಬ್ಬ) ಅಂದ ಕೂಡಲೇ ಮಕ್ಕಳಾದ ನಮಗೆಲ್ಲಾ ಖುಷಿ ಆಗಬೇಕಾದ್ದು ಸಹಜನ. ಈಗ ಐವತ್ತು ವರ್ಷದ ಹಿಂದೆ, ನಮಗೆಲ್ಲಾ ಜಾತ್ರೆ ತೇರುಗಳೇ ಊರ ಜನರನ್ನು ಒಗ್ಗೂಡಿಸುವ ಹಬ್ಬಗಳು ವಿಶೇಷ ಮನರಂಜನೆಗಳು. ಮಕ್ಕಳಾದ ನಮಗೆ, ಹೋದ ವರ್ಷ ಜಾತ್ರೆಯಲ್ಲಿ ನಾನು ಪುಟ್ಟ ಮಣ್ಣಿನ ಕುಡಿಕೆ ಕೊಂಡಿದ್ದೆ. ಕಟ್ಟಿಗೆಯ ಆಟದ ಸಾಮಾನಿನ ಡಬ್ಬಿ ಕೊಂಡಿದ್ದೆ. ಅವತ್ತು ಕೊಂಡಿದ್ದ ಪುಗ್ಗ (ಬಲೂನು), ಗಿರಿಗಿಟ್ಲೆ ಮನೆಗೆ … Read more

ಬೆಂಗಳೂರಿನ ಬಸ್ಸಿನ ಸ್ವಗತಗಳು: ಶ್ರೀಕೊಯ

ಪ್ರಾರಂಭ. ನಾನು ಎಂದರೆ ? ಯಾರು ? ಇಗೋ ಈಗ ಹೇಳುತ್ತೇನೆ ಕೇಳಿ. ನಿಮ್ಮನ್ನು ಈ ಮಹಾ ನಗರಿಯಲ್ಲಿ ನಿಮಗೆ ಬೇಕಾದ ಸ್ಥಳಕ್ಕೆ ಹೊತ್ತೊಯ್ಯುವ ಬಸ್ಸು “ನಾನು” . ನನ್ನನ್ನು ನೀವು ’ ಬಸ್ಸಪ್ಪ’, ’ ಬಸ್ಸಣ್ಣ’ , ’ಬಂಧು’ ಎಂದೇ ಕರೆಯಬಹುದು. ನೀವು ಯಾವುದೇ ರೀತಿಯಲ್ಲಿ ಕರೆದರೊ ನನಗೆ ಬೇಸರವಿಲ್ಲ, ಏಕೆಂದರೆ ನೀವೆಲ್ಲರೊ ನನ್ನನ್ನು ದಿನವೂ ನಡೆಸಿಕೊಳ್ಳುವುದಕ್ಕಿಂತ ಅದೇ ವಾಸಿ ಎನಿಸುತ್ತದೆ. ನಾನು ಸಾಮಾನ್ಯನಲ್ಲ ಎಂಬುದು ನಿಮಗೆ ಈ ಬರಹದ ಕೊನೆಗೆ ತಿಳಿಯುತ್ತದೆ. ಬೆಂದಕಾಳೂರೆಂಬ ಒಂದು … Read more

ಹಾಸ್ಟೆಲ್ ಎಳೆಗಳನ್ನು ಬಿಡಿಸುತ್ತ..!: ಶೀಲಾ ಗೌಡರ.

“ಅಪ್ಪಾಜಿ ನನ್ನ ಹಾಸ್ಟೆಲ್ ಗೆ ಸೇರ್ಸು. ನನ್ನ ಗೆಳೆಯರು ಬಹಳಾ ಮಂದಿ ಹಾಸ್ಟೆಲ್ ನಿಂದ ಶಾಲೆಗೆ ಬರ್ತಾರಾ..“ ಇದು ಎರಡು ವರ್ಷದಿಂದ ನನ್ನ ಮಗನ ಗೋಳು. ಹಾಗಂತ ಆತನೇನು ದೊಡ್ಡ ತರಗತಿಯಲ್ಲಿ ಓದುತ್ತಿಲ್ಲ. ಈ ಸಾರಿ ನಾಲ್ಕನೇ ತರಗತಿ. ಅಜ್ಜಿಯ ಊರಿಗೆ ಹೋದಾಗಲೆಲ್ಲ ಅವಳ ಸಂದಕವನ್ನು ತೆಗೆದು “ಅಜ್ಜಿ ನಾ ಮುಂದಿನ ವರ್ಷ ಹಾಸ್ಟೆಲ್ ಹೋಗ್ತೇನಿ. ನೀ ನನಗ ಈ ಸಂದಕ ಕೊಡಬೇಕು ನೋಡು. ಕಿಲಿ ಹಾಕಾಕ ಬರ್ತೇತಿ ಹೌದಿಲ್ಲ. ನಾ ಕಿಲಿಹಾಕಿ ನನ್ನ ಉಡದಾರಕ್ಕ ಹಾಕ್ಕೊಂತೆನಿ. … Read more

ಪಾಲಿಗೆ ಬಂದದ್ದು ಪಂಚಾಮೃತ……: ನಳಿನಿ. ಟಿ. ಭೀಮಪ್ಪ.

ರಾಜುವಿಗೆ ಏನೋ ಕುತೂಹಲ. ತಾನು ಮನೆಯಲಿಲ್ಲದ ಸಮಯದಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ತನ್ನ ಮದುವೆಯ ಬಗ್ಗೆ ಏನೋ ಗಂಭೀರವಾಗಿ ಚರ್ಚಿಸುತ್ತಿದ್ದುದನ್ನು ಅಣ್ಣನ ಮಕ್ಕಳು ಆಟವಾಡುತ್ತಾ ಗಮನಿಸಿ ವಿಷಯ ತಿಳಿಸಿದ್ದರು. ಮದುವೆ, ರಾಜು ಹೆಸರು ಆಗಾಗ ಹೇಳುತ್ತಿದ್ದರು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಹೇಳಿ ಆಡಲು ಓಡಿದವು. ಆಟದ ಬಗ್ಗೆ ಲಕ್ಷ್ಯವಿದ್ದ ಮಕ್ಕಳಿಗೆ ದೊಡ್ಡವರ ಮಾತುಗಳಲ್ಲಿ ಆಸಕ್ತಿಯೇನೂ ಇರಲಿಲ್ಲ. ಸ್ವಲ್ಪ ದಿನದಲ್ಲಿ ರಾಜುವಿನ ಮದುವೆಯ ಬಗ್ಗೆ ಚರ್ಚೆ ಕಾವೇರತೊಡಗಿತ್ತು. ಮಕ್ಕಳಿಗೆ ವಿಷಯವೆಲ್ಲಾ ಸರಿಯಾಗಿ ಕೇಳಿಸಿಕೊಳ್ಳಲು ಚಾಕೊಲೇಟಿನ … Read more

ಪದ್ದಕ್ಕಜ್ಜಿಯ ಅಂತಾಕ್ಷರಿ: ವೃಂದಾ. ಸಂಗಮ

ನಮ್ಮ ಪದ್ದಕ್ಕಜ್ಜಿ ನಿಮಗೆಲ್ಲಾ ಗೊತ್ತೇ ಇದೆಯಲ್ವಾ ? ಗೊತ್ತಿದ್ದೇ ಇರತ್ತೆ. ಅವರು ಇಡೀ ಊರಲ್ಲೇ ವರ್ಲ್ಡ ಫೇಮಸ್ಸು. ಅವರು ಇವತ್ತು ತಿಂಡಿಗೆ ಒತ್ತು ಶಾವಿಗೆ ಮಾಡಿದ್ದರು. ಅಲ್ಲರೀ, ಅದೇನೋ ಅಂತಾಕ್ಷರಿ ಅಂದು ಬಿಟ್ಟು, ಇದೇನು ತಿಂಡಿ ಬಗ್ಗೆ ಹೇಳ್ತಿದೀರಲ್ಲ, ಅಂತಿದೀರಾ ? ಪೂರ್ತಿ ಕೇಳಿಸಕೊಳ್ಳಿ. ಅಲ್ಲೇ ಇರೋದು ಮಜಾ, ಒತ್ತು ಶಾವಿಗೆಯ ಖಾರದ ತಿಂಡಿ ಹಾಗೂ ಅದಕ್ಕೆ ಸಿಹಿಯಾಗಿ ಗಸಗಸೆ ಪಾಯ್ಸ. ನಮ್ಮ ರಾಯರು, ಅದೇ ನಮ್ಮ ಪದ್ದಕ್ಕಜ್ಜಿ ಗಂಡ, ನಿಮಗೆ ಗೊತ್ತೇ ಇದೆಯಲ್ಲ, ನಾನು ಬೇರೆ … Read more

ಬಾಡಿಗೆ ಮನೆ: ಗುಂಡುರಾವ್ ದೇಸಾಯಿ

                                                     ಒಂದು ಕಾಲ ಇತ್ತು. ನೌಕರದಾರರಿಗೆ ಅಂದ್ರ ಭಾರಿ ಮರ್ಯಾದೆ. ಅದರಲ್ಲಿ ಶಿಕ್ಷಕರಿಗಂತೂ ಮನೆ-ಗಿನೆನ ಪ್ರತಿಫಲಾಕ್ಷೆ ಇಲ್ಲದೆ  ಕೊಡೋರು. ಊರಾಗ ಹೊಸದಾಗಿ ನೌಕರದಾರರು ವರ್ಗವಾಗಿ ಬಂದರ ಅಂದ್ರ ಸಾಕು ಎಷ್ಟು ಇಂತಿಜಾಮ್ ಮಾಡೋರು. `ನಮ್ಮ ಮನಿಗೆ ಬರ್ರೀ, ಇಲ್ಲ ನಮ್ಮನಿಗೆ ಬರ್ರೀ’ … Read more

ಮದುವೆಗೆ ಬರತೆನಲೇ ತಮ್ಮಾ….: ಗುಂಡುರಾವ್ ದೇಸಾಯಿ

  `ಮದುವಿಗೆ ಬರತೆನಲೇ ತಮ್ಮಾ'ಅಂದ್ರ ಸಾಕು ಚಡ್ಡಿಯನ್ನ ತೊಯ್ಸಿಕೊಳ್ಳುವಂತಹ ದಿನಗಳು ನನ್ನ ಪಾಲಿಗೆ ಎದುರಾಗಿದ್ದವು. ಒಮ್ಮೆ ಸಿನ್ನೂರಿಗೆ ನೆಂಟರ ಮದುವಿಗೆ ಅಂತ ಹೋದಾಗ ಕಿತ್ತಲಿ ತುಂಬ ಇಟ್ಟಿದ್ದ ಚಹಾ ರುಚಿಯಾಗಿತ್ತು,ಅಲ್ಲದೆ ಅಂತಹ ಚಹವನ್ನ ಎಂದೂ ಕುಡಿದಿಲ್ಲವಾದರಿಂದ,ಆಸೆ ಎಂಬುದು ಕೆಟ್ಟ ಖೋಡಿ ನೋಡಿ, ಬರೊಬ್ಬರಿ ಒಂದೊಂದ ಗ್ಲಾಸಿನಂಗ  ತಂಬಿಗಿಕಿನ ಜಾಸ್ತಿ  ಕುಡಿದೆ ಅನಸ್ತೆ, ಮನೆಯಲ್ಲಿ ಇಷ್ಟು ಸಿಗಲ್ಲಂತ,ಆಗೆನು ಆಗಲಿಲ್ಲವಾದರೂ ರಾತ್ರಿ ಸವ ಹೊತ್ತಿನಲ್ಲಿ ಹೊಟ್ಟಿಯಲ್ಲಿ ನಾನಾ ನಮುನಿ ಚಡಪಡಿಕೆ ಆರಂಭ ಆತು. ಅವ್ವನ್ನ ಎಬ್ಬಿಸಿ ಹೊರ ಬಂದ್ರೆ ತಿಪ್ಪೆ … Read more

ಏಕಾದಶಿ: ಗುಂಡುರಾವ್ ದೇಸಾಯಿ

‘ಲೇ ರಂಡೆಗಂಡಾ, ಎಂತಾ ಅನಾಹುತ ಮಾಡಿಬಿಟ್ಟಿ, ನನ್ನ ಜೀವಮಾನದ ಸಾಧನೆಯಲ್ಲಾ ಇವತ್ತು ವ್ಯರ್ಥ ಮಾಡತಿದ್ದೆಲ್ಲೋ    , ಕೃಷ್ಣ ಕೃಷ್ಣ ನೀನ ಕಾಪಾಡಬೇಕ¥!À’ ಅಂತ ಬಯ್ಯಕೋತ ಗುಡಿಯಿಂದ ಬಂದ್ಲು. ‘ಏನಾಯ್ತವ್ವ ಒಮ್ಮಿದೊಮ್ಮೆಲೆ, ಯಾಕ ಸಿಟ್ಟಿಗೆದ್ದು ದಾರ್ಯಾಗಿನಿಂದ ಕೂಗಿಕೊಂತ ಬರಕತಿದಿ, ಮೆಲ್ಲಕ ಬಾರವ್ವ, ಮೆಲ್ಲಕ ಮಾತಾಡು ’ ‘ನನ್ನ ಸುದ್ದಿ ಬಿಡು, ಎಂತ ಮೋಸ ಮಾಡಿಬಿಟ್ಟೆಲ್ಲೋ, ನೀನು ಬಾಳ ಶ್ಯಾಣೆ ಅಂತ ಮಾಡಿದ್ದೇ, ನಿನಗಿಂತ ನಿಮ್ಮಕ್ಕನ ವಾಸಿ. ನಿಮ್ಮಪ್ಪ ಹೋದ ಮ್ಯಾಲೆ ಪಂಚಾಂಗ ನೋಡಿ ತಿಥಿ ಲೆಕ್ಕ ಎಷ್ಟು ಕರೆಕ್ಟಾಗಿ … Read more

ಒಲೆ: ಗುಂಡುರಾವ್ ದೇಸಾಯಿ

ಇತ್ತೀಚಿಗೆ ನಮ್ಮ ದೇವಸ್ಥಾನಕ್ಕೆ ದರ್ಶನಾರ್ಥವಾಗಿ ಬೆಂಗಳೂರಿನಿಂದ ಬಂದಿದ್ದ ದಂಪತಿಗಳಿಗಾಗಿ ನಮ್ಮ ಸಮಿತಿಯ ಹಿರಿಯರೊಬ್ಬರು ರಾತ್ರಿ ಅಡುಗೆ ಸಿದ್ಧ ಮಾಡುತ್ತಿದ್ದರು. ಆ ದಂಪತಿಗಳ ಪುತ್ರಿ ಅನ್ನ ಮಾಡುವುದನ್ನು ಗಾಬರಿಯಿಂದ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಳು. ಅದನ್ನು ಗಮನಿಸಿದ ಹಿರಿಯರು ‘ಯಾಕಮ್ಮ ಹಾಗೆ ನೋಡ್ತಾ ಇದ್ದಿಯಾ ಅಡುಗೆ ಮಾಡೋದು ನೋಡಿಲ್ವೆ? ಅಥವಾ ಹಸಿವೆಯಾಗಿದೆಯಾ?’ ಎಂದು ಕೇಳಿದರು. ‘ಅಂಕಲ್ ಅಡಿಗೆ ಈ ರೀತಿ ಮಾಡ್ತಿರಾ? ಅನ್ನ ಅದ್ಹೇಗೆ ಮಾಡ್ತೀರಿ? ವಿಜಲ್ ಕೇಳ್ತಾ ಇಲ್ಲ ಹಿಂಗೂ ಮಾಡಬಹುದಾ?’ ಎಂದು ಪ್ರಶ್ನೆ ಹಾಕಿದಳು ಹೀಗೂ ಉಂಟೆ … Read more

ಭೃಂಗದ ಬೆನ್ನೇರಿ…!: ಎಸ್.ಜಿ.ಶಿವಶಂಕರ್

ಎಲ್ಲ ಸರಿಯಾಗಿ ಜೋಡಿಸಿದ್ದೇನೆಯೇ ಎಂದು ಮನು ಮತ್ತೊಮ್ಮೆ ಖಚಿತಪಡಿಸಿಕೊಂಡ. ಸಮಾಧಾನವಾಯಿತು. ಎಲ್ಲ ಸರಿಯಾದರೆ ಇನ್ನು ಹತ್ತು ನಿಮಿಷಗಳಲ್ಲಿ ತನ್ನ ಮುಂದೆ ರೂಪಸಿಯೊಬ್ಬಳು ಜೀವ ತಳೆಯುತ್ತಾಳೆ. ಅದೂ ಎಂತಹ ರೂಪಸಿ ? ತಾನು ಬಯಸಿದಂತವಳು! ತಾನೇ ಹೇಳಿದಂತೆ ರೂಪುಗೊಂಡವಳು!! ಇದನ್ನು ನಂಬುವುದು ಕಷ್ಟ!! ಆದರೆ ಇದು ನಿಜ. ಎಲ್ಲಾ ತನ್ನ ಕಣ್ಣೆದುರೇ ನಡೆದಿದೆ. ಸ್ವತಃ ತಾನೇ ತನ್ನ ಕೈಯಾರೆ ರೂಪಿಸಿದವಳು! ಅವಳಿಗೆ ಜೀವ ಕೊಡುವ ಮುನ್ನ ಒಮ್ಮೆ ಮುಟ್ಟಿ ನೋಡಿದ. ನಿಜಕ್ಕೂ ಅದು ರೋಬೋ ಎಂದು ಹೇಳಲು ಯಾರಿಗೂ … Read more

ಮೈನ್ ರೋಡ್ನಲ್ಲೊಂದು ಮನೆ ಮಾಡಿ..!: ಎಸ್.ಜಿ.ಶಿವಶಂಕರ್

"ಏ..ಏ…" ನಾನು ಕೂಗುತ್ತಲೇ ಇದ್ದೆ! ನನ್ನ ಮಾತಿಗೆ ಕ್ಯಾರೇ ಅನ್ನದೆ, ಹಿಂದಿನ ಮನೆಯ ಕಾಂಪೌಂಡಿನಿಂದ ಕಸ ತುಂಬಿದ ಪ್ಲಾಸ್ಟಿಕ್ ಕವರು ದೊಪ್ಪನೆ ಖಾಲಿ ಸೈಟಿಗೆ ಬಿತ್ತು! ಅದರಿಂದ ನಿಮಗೇನು ತೊಂದರೆ? ಎನ್ನುತ್ತೀರಾ? ಆ ಖಾಲಿ ಸೈಟು ಪಕ್ಕದ್ದೇ ನನ್ನ ಮನೆ! ಹಿಂದಿನ ಮನೆಯವರು ಪ್ರತಿ ದಿನ ಹೀಗೆ ಫಾಸ್ಟ್ ಬೌಲರುಗಳತೆ ದಿನವೂ ಎಸೆಯುತ್ತಿದ್ದ ಕಸ ರಾಶಿಯಾಗಿತ್ತು! ಅದು ಹರಡಿದ್ದ ಸೈಟಿನಲ್ಲ್ಲಿ ತಿಪ್ಪೆ   ಸೃಷ್ಟಿಯಾಗಿತ್ತು! ದುರಾದೃಷ್ಟಕ್ಕೆ ನನ್ನ ಮನೆಯ ಎರಡು ಪಕ್ಕದ ಸೈಟುಗಳು ಖಾಲಿಯೇ! ಎಡ ಪಕ್ಕದ … Read more

ಅವ್ವನ ಸೀರೆ ಮತ್ತು ಬಾಳೀಗ೦ಟು…: ಜಯಶ್ರೀ ದೇಶಪಾಂಡೆ

     'ಎರಡು ..ಮೂರು ..ನಾಲ್ಕು , ಐದು. ಮತ್ತ ಇದು ಹತ್ತು . ಸಾಕೇನು?" " ಸಾಕು ಅ೦ದುಬಿಡ್ಲಿ ಇ೦ವಾ"  ಅ೦ತ ಇರ್ಬೇಕು ಅವ್ವನ ಮನಸಿನ್ಯಾಗ. ಯಾಕ೦ದ್ರ ಅವನ ಹಿ೦ದ ನಾನೂ          ನಿ೦ತಿದ್ದೆ.  ನನ್ನ ಕೈಗೂ ಹಿ೦ಗೇ ರೊಕ್ಕಾ  ಎಣಿಸಿ ಹಾಕಬೇಕಿತ್ತು..ಆದರ ಇ೦ವಾ ,ಅ೦ದ್ರ ನನ್ನ ತಮ್ಮ ,ಹೇಳಿ ಕೇಳಿ ಅಚ್ಚ್ಹಾದ  ಮಗಾ..  ಅ೦ವಾ ನಮ್ಮವ್ವನ 'ಶೇ೦ಡೆಫಳ' ಅರ್ಥಾತ್  (ಮುದ್ದಿನ ಮಗ !) ..ಅ೦ವಗ ಕೇಳಿದಷ್ಟು ಕೊಡೂದು ಎ೦ದಿಗಿದ್ರೂ ಇದ್ದದ್ದನ … Read more

’ಪಾನ ಮಹಿಮೆ’: ಗುಂಡುರಾವ್ ದೇಸಾಯಿ ಮಸ್ಕಿ

                                             ನನಗೆ ಇದುವರೆಗೂ ಅರ್ಥವಾಗದ ವಿಷಯವೆಂದ್ರೆ ಪಾರ್ಟಿ ಅಂದ್ರ ಜನ ಕುಡಿತ, ಕಡಿತಾ ಇರಬೇಕು ಅಂತ ಭಾವಸ್ತಾರಲ್ಲ ಯಾಕೆ ಅಂತ! ಅದು ಬಿಟ್ಟು ಸ್ವಾದಿಷ್ಟ ಭೋಜನ ಸವದ್ರ ಪಾರ್ಟಿ ಆಗಲ್ವಾ. ಇಂತಹ ವಿರೋಧ ಕಾರಣಕ್ಕಾಗಿಯೇ ನಾನು ಹಲವಾರು ಸಂಬಂಧಗಳನ್ನು ಕಳೆದುಕೊಂಡಿದ್ದೇನೆ. ಏನು ಚಟ ಮಾಡದ ಹುಂಬ ಎಂದು … Read more

ಹೆಗ್ಣಾಮೆಷಿನ್!: ಎಸ್.ಜಿ.ಶಿವಶಂಕರ್

    ವಿಚಿತ್ರವೆನ್ನಿಸಬಹುದು! ವಾಷಿಂಗ್ ಮೆಷಿನ್, ಸ್ಯೂಯಿಂಗ್ ಮೆಷಿನ್, ಗ್ರೈಡಿಂಗ್ ಮೆಷಿನ್ ಎಲ್ಲಾ ಕೇಳಿರ್ತೀರಿ. ಆದರೆ ’ಹೆಗ್ಣಾಮೆಷಿನ್’ ? ಅಂದ್ರೆ…ಇದೆಂತಾ ಹೆಸರು..? ಇದೆಂತಾ ಮೆಷಿನ್ನು? ಇದು ಹೇಗೆ ಕೆಲಸ ಮಾಡುತ್ತೆ? ಏನು ಕೆಲಸ ಮಾಡುತ್ತೆ?  ಹೆಗ್ಗಣ ಹಿಡಿಯುವ  ಇಲ್ಲಾ ಹೆಗ್ಗಣ ಸಾಯಿಸುವ ಮೆಷಿನ್ ಇರಬಹುದೆ..? ಇಲ್ಲಾ…ಈ ಲೇಖಕ ಇಲಿಬೋನನ್ನೇ ಹೆಗ್ಣಾಮೆಷಿನ್ ಎಂದು ಹೇಳಿ ಲೇವಡಿ ಮಾಡುತ್ತಿರಬಹುದೆ..? ಈ ಪ್ರಶ್ನೆಗಳು ಈಗಾಗಲೇ ನಿಮ್ಮ ತಲೆಯಲ್ಲಿ ತುಂಬಿರಲು ಸಾಧ್ಯ!     ‘ದೊಡ್ಡಪ್ಪ, ನಾವು ಹೆಗ್ಣಾಮೆಷಿನ್ನಿಗೆ ಯಾವಾಗ ಹೋಗೋದು..?’     ‘ಮಿಲಿ’ ಎಂಬ … Read more

ಆ ಮೂರು ದಿನಗಳು: ಗುಂಡುರಾವ್ ದೇಸಾಯಿ ಮಸ್ಕಿ

ಯಾವು ಆ ಮೂರು ದಿನಗಳು!  ವೈಶಾಖದ ದಿನಗಳಾ, ಆಷಾಢದಿನಗಳಾ ಅಂತ ಭಾವಿಸಿದ್ರಾ! ಅಲ್ಲ ಅಲ್ಲ. ಇಕಿ ಒಮ್ಮಿಂದೊಮ್ಮೆಲೆ ದೂರ ನಿಂತು ನೀರು  ಕೋಡ್ರಿ, ಹಾಸಿಗಿ ಕೊಡ್ರಿ ಅಂತ ಸ್ಟಾರ್ಟ ಮಾಡಿದ್ರ  ’ಎದಿ ಝಲ್’ ಅಂತದ. ಏನ್ರೀ ಹೊರಗಿದ್ದ ಮೂರುದಿನದ ಬಗ್ಗೆ ಸಿರಿಯಸ್ಸ ತೋಳೊದಾ! ಅಂತ ಮೂಗು ನೀವು ಮುರಿಬಹುದು. ಅದಕ್ಕಲ್ಲ ಸಂಕಟ ಪಡೋದು ಕೆಲಸ ಮಾಡಕ. ಅಯ್ಯೋ! ಇವರು ಎಂಥವರ್ರೀ ತಿಂಗಳಾನಗಟ್ಟಲೇ ಮಾಡಿ ಹಾಕೋರಿಗೆ ಕೂಡ್ರಿಸಿ ಮೂರು ದಿನ ಹಾಕಕ ಏನು ಧಾಡಿ ಅಂತ ಅಂದಕೊಂಡಿರಲೂ ಬಹುದು … Read more

ವೇದ ಸುಳ್ಳಾದರೂ ಗಾದೆ ಸುಳ್ಳಾಗದು!: ಎಸ್.ಜಿ.ಶಿವಶಂಕರ್

   "ಹಲೋ ?" ಮಾಮೂಲಿಗಿಂತ ತುಸು ಏರಿದ ವಿಶ್ವನ ದ್ವನಿ ಟೆಲಿಫೋನಿನಲ್ಲಿ ಮೊಳಗಿತು. "ಹೇಗಿತ್ತು ಒಥೆಲೋ ನಾಟಕ" ಹಿಂದಿನ ದಿನ ನಾಟಕ ನೋಡುವುದಾಗಿ ವಿಶ್ವ ಹೇಳಿದ್ದು ನೆನಪಾಗಿ ಕೇಳಿದೆ. "ನಾಟಕದ ಮನೆ ಹಾಳಾಯಿತು! ನನ್ನ ಜೀವನ ನಾಟಕದ ದುರಂತ ದೃಶ್ಯ ನೆನ್ನೆ ನಡೆಯಿತು!" ವಿಶ್ವನ ಧ್ವನಿ ಭಾರವಾಗಿತ್ತು. ಶುದ್ಧ ವೇದಾಂತಿಯ ಮಾತಿನ ಧಾಟಿ ಕಂಡಿತು. ವಿಶ್ವನ ಮಾತಿಗೆ ವಿವರಣೆ ಬೇಕಾಗಿರಲಿಲ್ಲ. ಅವನು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ ಎಂದು ನನಗಾಗಲೇ ತಿಳಿದುಹೋಗಿತ್ತು! ಎರಡು ದಶಕಗಳ ಸ್ನೇಹದಲ್ಲಿ ವಿಶ್ವನ ವಿಶ್ವದರ್ಶನವಾಗಿತ್ತು. ನನ್ನ … Read more

ನಾಯಿ ಪಾಡು: ಗುಂಡುರಾವ್ ದೇಸಾಯಿ

ವಾರದಿಂದ ತಲೆ ಸಿಡದು ಹೋದಂಗಾಗಕತಿತು. ಕ್ಷಣ ಕ್ಷಣಕ್ಕೂ ಭಯ ಆತಂಕ ಸುರುವಾಗಕತಿತು, ಶಾಲೆಯಲ್ಲಿ ಪಾಠ ಮಾಡುವಾಗಲು ಮನೆ ವಾತಾವರಣ ನೆನಸಿಕೊಂಡ ಕೂಡಲೆ ಸ್ಥಬ್ಧನಾಗಿ ನಿಂತುಬಿಡುತ್ತಿದ್ದೆ.  ಮಕ್ಕಳು ’ಸಾರ್, ಮುಂದು ಹೇಳ್ರೀ ಯಾಕ ಹಾಂಗ ನಿಂತ್ರಿ’ ಎಂದು ಎಚ್ಚರಿಸಿದಾಗಲೇ ವಾಸ್ತವಕ್ಕೆ ಬರೋದು. ಸಹುದ್ಯೋಗಿಗಳು ’ಯಾಕ ಹಿಂಗಾಗ್ಯಾರ? ಏನು ತಾಪತ್ರಯನೋ ಏನೋ? ಅಥವಾ ಮನೆಯಲ್ಲಿ ಮನೆಯವರ ಜೊತೆಗೆ ಮನಸ್ತಾಪನೋ?’ ಎಂದು ಹಲವು ಬಾರಿ ಕೆದುಕಲೆತ್ನಿಸಿದರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ನಿಮಗೂ ಏನೇನೋ ಕಲ್ಪನೆಗಳು ನನ್ನ ಬಗ್ಗೆ ಮೂಡಿರಬೇಕಲ್ಲ. ಅದು ಹೇಳುವ ವಿಷಯವೇನು … Read more

ಯುರೇಕಾ..! ಯುರೇಕಾ..!! : ಎಸ್.ಜಿ.ಶಿವಶಂಕರ್

’ರೀ…’ ಅಲೆಅಲೆಯಾಗಿ ತೇಲಿಬಂದು ವಿಶ್ವನ ಕರ್ಣಪಟಲದ ಮೇಲೆ ಪ್ರಹರಿಸಿದುವು-ಶಬ್ದ ತರಂಗಗಳು! ತೂಕಡಿಸುತ್ತಿದ್ದ ವಿಶ್ವ ಮೆಟ್ಟಿ ಬಿದ್ದ!! ನಿದ್ರೆ ಹಾರಿತು! ಬಿ.ಪಿ ಏರಿತು! ಅದು ತನ್ನ ಜೀವನ ಸಂಗಾತಿ ವಿಶಾಲೂ ದನಿಯೆಂದು ತಿಳಿದು. ಆ ಕ್ಷಣ ಏನು ಮಾಡಬೇಕೆಂದು ತೋಚದೆ ಅವಾಕ್ಕಾದ. ಆ ದನಿಯಲ್ಲಿನ ಭಾವ ಅರ್ಥ ಮಾಡಿಕ್ಕೊಳ್ಳಲು ಪ್ರಯತ್ನಿಸಿದ. ಮೊದಲಿಗೆ ದನಿ ಬಂದ ದಿಕ್ಕು ಗುರುತಿಸಲು ಪ್ರಯತ್ನಿಸಿದ. ಅದು ಮನೆಯ ಹಿಂಭಾಗದಿಂದ ಬಂತು ಎಂಬುದನ್ನು ಯಶಸ್ವಿಯಾಗಿ ಗುರುತಿಸಿದ. ನಂತರ ಆ ದನಿಯಲ್ಲಿ ಆತಂಕವಿದೆಯೆ..? ಗಾಬರಿಯಿದೆಯೆ..? ಇಲ್ಲಾ ಸಹಜವಾದ … Read more

ಇಂಗು ತೊಂಡೆ ಇದ್ದರೆ…: ಮಾಲಾ

ಅಂಗಡಿಯಿಂದ ತರಕಾರಿ ತರುವುದು ಬಲು ಸುಲಭ. ಕೈಯಲ್ಲಿ ದುಡ್ಡಿದ್ದರೆ ಸಾಕು. ಆದರೆ ತರಕಾರಿ ಬೆಳೆಯುವುದು ಅಷ್ಟು ಸುಲಭದ ಕೆಲಸವಲ್ಲ. ನಮ್ಮ ಹಿತ್ತಲಲ್ಲಿ ತರಕಾರಿ ಬೆಳೆಯಲು ಎಷ್ಟೋ ಸಲ ನಾನೂ ಪ್ರಯತ್ನಿಸಿದ್ದೆ. ಹಳ್ಳಿಯಿಂದ ಪೇಟೆಗೆ ಬಂದ ನಾನು ಕೆಲವಾರು ವರ್ಷ ಮಣ್ಣಿನ ನಂಟು ಬೆಳೆಸಿದ್ದೆ. ಬೀನ್ಸ್, ಬೆಂಡೆ, ಬದನೆ ಬೀಜ ಹಾಕಿ ಅದು ಸಸಿಯಾಗಿ ಅರಳಿ ನಿಂತಾಗ ಸಂಭ್ರಮಿಸಿದ್ದೆ. ಕೇವಲ ಒಂದೆರಡು ಕಾಯಿ ಬಿಟ್ಟು ಅದನ್ನೇ ಖುಷಿಯಿಂದ ಅಡುಗೆ ಮಾಡಿ ತಿಂದದ್ದು ಇತ್ತು. ನಾವೇ ಬೆಳೆದ ತರಕಾರಿ ತಿನ್ನುವಾಗ … Read more

ಜಾತ್ರಿ ಜೊತಿಗಿನ ನೆನಪಿನ ಬುತ್ತಿ…: ನಾರಾಯಣ ಬಾಬಾನಗರ

ಜಾತ್ರೆ ಅಂದರ..ನಿಮಗೆ ಏನ ನೆನಪಾಗತೈತಿ?ಹಿಂಗ ನಿಮಗ ಯಾರರ ಕೇಳಿದರ..ಮಿಠಾಯಿ ಮಾರುವ ಅಂಗಡಿ,ಫುಗ್ಗಾ ಮಾರುವವನು ಬಲೂನಿಗೆ ಗಾಳಿ ತುಂಬುವ ಮುಖ,ಆಟಿಕಿ ಸಾಮಾನುಗಳನ್ನು ಹರಡಿಕೊಂಡು ಕುಳಿತ ಅಜ್ಜಿ,ಬಣ್ಣದ ಶರಬತ್ ಮಾರಕೋತ ನಿಂತವನ ಕೂಗು,ಎಣ್ಣಿಯೊಳಗ ಭಜಿ ಕರಕೋತ ಕುಂತವಳು ಒಂದ ಕೈಯಿಂದ ಕಡಾಯಿಯೊಳಗ ಭಜಿ ಕರೀತಿದ್ದರ ಇನ್ನೊಂದ ಕೈಯಿಂದ ಹಂಗ ಹಣೀ ಮ್ಯಾಲಿಂದ ಕೆಳಗ ಇಳೀತಿದ್ದ ಬೆವರನ್ನ ಒರಿಸಿಕೊಂತ ಕುಂತ ಚಿತ್ರಗಳು….ಅಬ್ಬಾ ಜನ ಜಂಗುಳಿ!! ಅಂಥಾದರಾಗ ಅವ್ವನ ಜೊತಿ ಜಾತ್ರಿಗಿ ಬಂದ ಪುಟ್ಟ ಪೋರಿ ತನ್ನ ಅವ್ವಳಿಂದ ತಪ್ಪಿಸಿಕೊಂಡು ರೊಯ್ಯನೆ ಅಳಕೋತ … Read more

ಮರೆವು: ವೆಂಕಟೇಶ್ ಪ್ರಸಾದ್

ಹಿ೦ದಿನ ದಿನ ಅಲರಾ೦ ಇಡಲು ಮರೆತ ತಪ್ಪಿಗೆ ಇ೦ದು ತಡವಾಗಿ ಏಳುವ೦ತಾಗಿತ್ತು.ಎದ್ದವನೇ ದೈನ೦ದಿನ ಕೆಲಸ ಕಾರ್ಯಗಳನ್ನು ಪೂರೈಸಿ ಆಫೀಸಿಗೆ ಹೊರಟು ಈ ಮರೆವಿಗೆ ಶಪಿಸುತ್ತಾ ಬಸ್ ಹತ್ತಿದ ನ೦ತರವೇ ಧೀರ್ಘವಾಗಿ ಉಸಿರು ತೆಗೆದುಕೊ೦ಡದ್ದು. ಅತ್ತ ತಿರುಗಿದರೆ ಕ೦ಡಕ್ಟರ್ ಟಿಕೆಟ್ ಟಿಕೆಟ್ ಎ೦ದು ನಿ೦ತಿದ್ದ. ಪಾಸ್ ತೋರಿಸೋಣ ಕಿಸೆ ಬ್ಯಾಗ್ ತಡಕಾಡಿದರೆ ಎಲ್ಲಿದೇ?? ಪಾಸ್ ಮನೆಯಲ್ಲೇ ಮರೆತಿದ್ದೆ. ಮತ್ತೆ ಮರೆವಿಗೊ೦ದಷ್ಟು ಶಾಪ ಹಾಕಿ ಪೂಒರ್ತಿ ಬಸ್ ಚಾರ್ಜ್ ಕೊಟ್ಟು ಕಿಟಕಿಯತ್ತ ಮುಖ ಮಾಡಿದೆ.  ಈ ಮರೆವಿನ ವಿಷಯ ಬ೦ದಾಗ … Read more

ಮಹದಾನಂದ: ಉಮೇಶ ಕ. ಪಾಟೀಲ

                   ಭೂಮಿಯ ಮೇಲೆ ಸಹಸ್ರ ಕೋಟಿ ಜೀವರಾಶಿಗಳು ಇವೆ. ಇವೆಲ್ಲ ಜೀವಿಗಳಿಗೆ ಸುಖ, ದು:ಖ, ಸಂತೋಷ, ಆನಂದ ಇರಲೇಬೇಕು. ಅದರಲ್ಲಿಯೂ ಮನುಷ್ಯನು ಪ್ರತಿಯೊಂದು ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಲು ಬಯಸುತ್ತಾನೆ. ಆನಂದ ಅಥವಾ ಮಹದಾನಂದ ಅಂದರೆ ವಿಶೇಷ ಆನಂದ, ಅತಿಶಯ ಆನಂದ, ದೊಡ್ಡ ಆನಂದ, ಈ ಆನಂದವು ಯಾವಾಗ ಯಾರಿಗೆ, ಯಾವ ಕಾರಣದಿಂದ ಬರುತ್ತದೆ ಎನ್ನುವದನ್ನು ನಿಶ್ಚಿತವಾಗಿ ಹೇಳಲು ಬರುವದಿಲ್ಲ. ಉದಾಹರಣೆಗೆ-ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವುದರಿಂದ  ಆನಂದ … Read more

ಆಯ ತಪ್ಪಿದ್ರೆ ಅಪಾಯ: ಎಂ.ಎಸ್.ನಾರಾಯಣ.

                                      ಮೊನ್ನೆ  ವಾರಾಂತ್ಯಕ್ಕೆ ಗೆಳಯರೆಲ್ಲರೂ ಮೈಸೂರಿನ ನಮ್ಮ ಹಳೆಯ ಅಡ್ಡಾ, ವಿಶ್ವನ ಕ್ಯಾಂಟೀನಿನಲ್ಲಿ ಸೇರಿದ್ದೆವು. ಆಗಷ್ಟೇ ನಮ್ಮನ್ನು ಸೇರಿಕೊಂಡ ಹರೀಶ, “ಇವತ್ತಿನ್ ಬಿಲ್ ನಂದ್ಕಣ್ರಪ್ಪಾ, ಕೊನೇಗೂ ಶ್ರೀರಾಂಪುರ್ದಲ್ಲಿ ಒಂದ್ ಥರ್ಟೀಫ಼ಾಟೀ ತೊಗೊಂಡೇಬಿಟ್ಟೇ ಕಣ್ರೋ, ಬ್ಯಾಂಕ್ಲೋನ್ಗೋಡಾಡ್ತಿದೀನಿ, ಒಂದೊಳ್ಳೆ ಮುಹೂರ್ತ ನೋಡಿ ಗುದ್ಲೀ ಪೂಜೆ ಮಾಡ್ಸೋದೊಂದೇ ಬಾಕಿ ನೋಡಿ” ಅಂತ ಗುಡ್ನ್ಯೂಸ್ ಕೊಟ್ಟೇಬಿಟ್ಟ. ಎಲ್ರೂ … Read more

ಹೀಗೊಂದು ಗೆಳೆಯರ ಬಳಗ! (ಅಳಿದುಳಿದ ಭಾಗ?!): ಗುರುಪ್ರಸಾದ ಕುರ್ತಕೋಟಿ

(ನಮ್ಮ ಗೆಳೆಯರ ಬಳಗ ಹಾಗೂ ಅಗಿನ ನನ್ನ ಅನುಭವಗಳ ಬಗ್ಗೆ  ಹಿಂದೊಮ್ಮೆ ಬರೆದಿದ್ದೆ. ಅದಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಿತನಾದೆ. ಅದನ್ನು ಓದಿದ ಕೆಲವು ಗೆಳೆಯರ ಆಗ್ರಹದ ಮೇರೆಗೆ, ಆ ಸಮಯದಲ್ಲಿ ನಮ್ಮ ಜೊತೆಗಿದ್ದ ಇನ್ನೂ ಕೆಲವು ವ್ಯಕ್ತಿಗಳು ಹಾಗೂ ಕೆಲವು ಮೋಜಿನ ಸಂಗತಿಗಳ ಬಗ್ಗೆ ಈಗ ಬರೆದಿದ್ದೇನೆ. ಹಿಂದಿನ ಲೇಖನ ಓದಿಯೇ ಇದನ್ನು ಓದಬೇಕೆಂದೇನು ಇಲ್ಲ. ಆದರೂ ಓದಿದರೆ ನಾನು ಬೇಡ ಅನ್ನುವುದಿಲ್ಲ! 🙂 ಇಲ್ಲಿದೆ ಅದರ ಲಿಂಕ್  ***** ನಮ್ಮ ಬಳಗದ ಇನ್ನೊಂದು ಅವಿಭಾಜ್ಯ … Read more

ಸಮೃದ್ಧ ಬದುಕಿಗೆ ಸೂತ್ರಗಳು !: ಎಸ್.ಜಿ.ಶಿವಶ೦ಕರ್

ಬೆ೦ಗಳೂರಿನಲ್ಲಿ ಪಾದಚಾರಿಗಳ ನಡೆಯುವ ಜಾಗವನ್ನೆಲ್ಲಾ ರಸ್ತೆಗಳು ನು೦ಗಿರುವುದು ಕ೦ಡು ಅಚ್ಚರಿಗೊ೦ಡೆ! ಮತ್ತೆ ಪಾದಚಾರಿಗಳ ಗತಿ ಏನು? ಅವರೆಲ್ಲಿ ನಡೆಯುತ್ತಾರೆ ಎ೦ಬ ಯೋಚನೆ ಬ೦ತು. ಅದಕ್ಕೆ ಉತ್ತರವೂ ಎದುರಿಗೇ ಗೋಚರಿಸಿತು!  ವಾಹನ ಸಮುದ್ರದ ನಡುವೆ ಒ೦ದು ಕ್ಷುದ್ರ ವಾಹನದ೦ತೆ ಜೀವ ಕೈಯಲ್ಲಿ ಹಿಡಿದು ಕಕ್ಕಾಬಿಕ್ಕಿಯಾಗಿ ನಡೆಯುತ್ತಿರುವ ಪಾದಚಾರಿಗಳು ಕ೦ಡರು! ಅವರನ್ನೇ ಅನುಕರಿಸುತ್ತಾ ನಾನೂ ರಸ್ತೆಗಿಳಿದೆ. ಯಾವ ಕ್ಷಣದಲ್ಲಿ ಯಾವ ವಾಹನ ಮೇಲೇರುವುದೋ ಎ೦ಬ ಆತ೦ಕ ಎದೆಯಲ್ಲಿ ಅವಲಕ್ಕಿ ಭತ್ತ ಕುಟ್ಟುತ್ತಿತ್ತು. ನೇರವಾಗಿ ನನ್ನ ಹಿ೦ದಿನಿ೦ದ ಜೋರಾಗಿ ಹಾರನ್ ಕೇಳಿತು. … Read more

ಮೈ ಕ್ರೇಝಿ ಲೈಫ್ ಸ್ಟಿಲ್ ಗೋಸ್ ಆನ್..!!: ಸಚಿನ್ ಎಂ. ಆರ್.

ಫ್ಲಾಶ್ ಬ್ಯಾಕ್ ೧ (ಬ್ಲಾಕ್ ಅಂಡ್ ವೈಟ್ ಶೇಡ್):  ಅದು ೨೦೦೫ರ ಇಸವಿ. ಗುಳಿ ಬಿದ್ದ ಕಣ್ಣುಗಳ ಸಾಧಾರಣ ಎತ್ತರದ ತೆಳ್ಳನೆಯ ಬಿಳಿ ಹುಡುಗ ಶಾಲಾ ಗೇಟಿಂದ ಹೊರಬಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಚೀಟಿ ಕೈಲಿತ್ತು. ೮೪% ಮಾರ್ಕ್‌ಸ್ ಬಂದಿತ್ತು. ಒಂದು ಪರ್ಸಂಟ್ ಇಂದ ಡಿಸ್ಟಿಂಕ್ಷನ್ ಮಿಸ್ಸು. ಛೇ.. ಹಳಹಳಿಸಿದ ಆತ..!  ಕಾಲೇಜು ಮೆಟ್ಟಿಲು ಹತ್ತುವ ಹೊತ್ತು. ಅಪ್ಪ ಕೇಳಿದ್ರು ನಿನ್ನ ಮುಂದಿನ ಗುರಿ ಏನೊ? ಅವನುತ್ತರ ಗೊತ್ತಿಲ್ಲಪ್ಪ..,  ಆದ್ರೆ ನಾನು ಸೈಕಿಯಾಟಿಸ್ಟ್ ಆಗ್ತೀನಿ, ಎಲ್ರ ಬುಲ್ಡೆ … Read more